ಬಿಗ್ ಬಾಸ್ ಮನೆಯಿಂದ ನಿಧಿ ಔಟ್


ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ನ ಎರಡನೇ ವಾರ ಪಂಚರಂಗಿ, ಅಣ್ಣಾಬಾಂಡ್ ಚಿತ್ರದ ನಟಿ ನಿಧಿ ಸುಬ್ಬಯ್ಯ ಎಲಿಮಿನೇಟ್ ಆಗಿದ್ದಾರೆ.ಮೊದಲ ವಾರ ಯಾರನ್ನು ಎಲಿಮಿನೇಟ್ ಮಾಡುವುದಿಲ್ಲ ಎಂದು ಹೇಳಿದ್ದ ಸುದೀಪ್ ಎರಡನೇ ವಾರ ಒಬ್ಬರನ್ನು ಎಲಿಮಿನೇಟ್ ಮಾಡಲಾಗುವುದು ಎಂದು ಮೊದಲೇ ಹೇಳಿದ್ದರು. ಆದರಂತೆ ಈ ಬಾರಿ ನಿಧಿ ಸುಬ್ಬಯ್ಯ ಮನೆಯಿಂದ ಔಟ್ ಆಗಿದ್ದಾರೆ.
ಎರಡನೇ ವಾರ ನಿಧಿ ಸುಬ್ಬಯ್ಯ ಬಹಳ ಸ್ಫೋರ್ಟಿವ್ ಆಗಿ ಟಾಸ್ಕ್ ಗಳನ್ನು ತೆಗೆದುಕೊಂಡಿದ್ದರು. ಟಾಸ್ಕ್ ನಲ್ಲಿ ನಲ್ಲಿ ಅರವಿಂದ್ ಕೆಪಿ ಜೊತೆ ಮನಸ್ತಾಪ ಮಾಡಿದ್ದರೆ ಬಳಿಕ ಶುಭ ಜೊತೆಗೂ ಮಾತಿನ ಜಗಳ ನಡೆದಿತ್ತು. ಅಂತಿಮವಾಗಿ ಶನಿವಾರದ ಎಪಿಸೋಡ್‍ನಲ್ಲಿ ಸುದೀಪ್ ಅರವಿಂದ್ ನಿಧಿ ಮತ್ತು ಶುಭಾ, ನಿಧಿಯವರನ್ನು ರಾಜಿ ಮಾಡಿಸಿದ್ದರು.
ಥರ ಥರ ಈ ಎತ್ತರ ಟಾಸ್ಕ್ ವೇಳೆ ಮಂಜು ಜೊತೆ ಮಾತನಾಡುತ್ತಿದ್ದಾಗ ನಿಧಿ ಮಧ್ಯಪ್ರವೇಶ ಮಾಡಿದ್ದಕ್ಕೆ ಅರವಿಂದ್,”ನಾನು ಕ್ಯಾಪ್ಟನ್ ಜೊತೆ ಮಾತನಾಡುತ್ತಿದ್ದೇನೆ. ನೀವು ಸ್ವಲ್ಪ ಮುಚ್ಕೊಳ್ಳಿ” ಎಂದು ಹೇಳಿದ್ದರು. ಈ ಹೇಳಿಕೆಗೆ ಗರಂ ಆಗಿದ್ದ ನಿಧಿ ಟಾಸ್ಕ್ ಮುಗಿದ ಬಳಿಕ, “ಕ್ರೀಡಾ ಸ್ಫೂರ್ತಿ ಇಲ್ಲ ಎಂದು ಗರಂ ಅಗಿದ್ದರು.

Leave a Reply

Your email address will not be published. Required fields are marked *