ಏಳೂನೂರು ವರ್ಷಗಳ ಕಾಲ ನಿರಂತರವಾಗಿ ಭೂಲೋಕದ ಮೇಲೆ ಜನರಿಗೆ ಸನ್ಮಾರ್ಗಗಳ ಸಂದೇಶವನ್ನು ಸಾರುತ್ತಾ ನಡೆದಾಡುವ ದೈವರಾಗಿರುವ ಶ್ರೀ ಗುರು ರಾಘವೇಂದ್ರ ಸ್ವಾಮೀಜಿಗಳ 150 ಆರಾಧನಾ ಮಹೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಯಿತು.
ವಿದ್ಯಾರಣ್ಯಪುರಂ ನಿವಾಸಿ ಇಂಜಿನಿಯರ್ ರಾಜೇಶ್ ಅವರು ತಮ್ಮ ನಿವಾಸದಲ್ಲಿ ಕಳೆದ 15ವರ್ಷಗಳಿಂದಲೂ ನಿರಂತರವಾಗಿ ಗುರು ರಾಯರ ಆರಾಧನ ಮಹೋತ್ಸವ ವನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ.
ಇಂದಿಗೆ ಶ್ರೀ ರಾಘವೇಂದ್ರ ಸ್ವಾಮಿಗಳು ಸಶರೀರವಾಗಿ ಬೃಂದಾವನ ಕ್ಕೆ ತೆರಳಿ 350 ವರ್ಷಗಳಾಗಿದೆ. ಈ ಮೂನ್ನೂರ ಐವತ್ತು ಆರಾಧನೆಯನ್ನು ಪ್ರಪಂಚದಾದ್ಯಂತ ಎಲ್ಲರೂ ಭಕ್ತಿ, ಶ್ರದ್ಧೆಯಿಂದ ಭಗವಂತನನ್ನು ಆರಾಧಿಸುತ್ತಾರೆ. ರಾಯಲ್ ಸನ್ಯಾಸತ್ವ ಸ್ವೀಕರಿಸಿದಾಗ ಅವರ ಗುರುಗಳು ಅವರಿಗೆ ‘ಪೂಜ್ಯಾಯಾ ರಾಘವೇಂದ್ರಯಾ ಸತ್ಯ ದರ್ಮರ ಕಾಯಚ, ಬಜತಾಂಕಲ್ಪವೃಕ್ಷಯಾ ನಮತಾಂ ಕಾಮಧೇನವೇ’ ಅವರ ಗುರುಗಳು ಅವರಿಗೆ ಹೇಳಿದರು. ಇದರ ಅರ್ಥ’ ರಾಯರೇ ನೀವು ಯಾವಾಗಲೂ ಪೂಜ್ಯರಾಗಿರಿ, ಯಾಕೆಂದರೆ ಸತ್ಯ ಮತ್ತು ನಿಮ್ಮ ಧರ್ಮವನ್ನು ನಿಮ್ಮ ಅಸ್ತ್ರವಾಗಿ ಇಟ್ಟುಕೊಳ್ಳಿ. ಯಾರು ನಿಮ್ಮನ್ನು ಭಜಿಸುತ್ತಾರೆ ಅವರಿಗೆ ಕಲ್ಪವೃಕ್ಷವಾಗಿ ಹಾಗೂ ಯಾರೂ ನಿಮ್ಮನ್ನು ಪೂಜಿಸುತ್ತಾರೆ ಅವರಿಗೆ ಕಾಮಧೇನುವಾಗಿ ಎಂದು ಅವರ ಗುರುಗಳಾದ ಸುದೀಂದ್ರ ತೀರ್ಥರು ಆಶಿಸುತ್ತಾರೆ. ಅದರಂತೆಯೇ ಅದಿನಿಂದ ಸನ್ಯಾಸತ್ವ ಸ್ವೀಕರಿಸುತ್ತಾರೆ. ಅಂದಿನಿಂದ 99 ವರ್ಷಗಳ ಕಾಲ ಸಜೀವರಾಗಿ ದೇಶ ಸಂಚಾರ ಮಾಡಿ ಜನರಿಗೆ ಒಳ್ಳೆಯ ಸಂದೇಶ ನೀಡುತ್ತಾರೆ. ಇದಾದ ಬಳಿಕ ಮೂಲ ಶರೀರದೊಂದಿಗೆ ಎಲ್ಲಾ ಭಕ್ತರನ್ನು ಕಾಯಲು ಆಗುತ್ತಿಲ್ಲ ಎಂದಾಗ ಅವರಿಗೆ ಮೂಲ ರಾಮರು ಬಂದು ಕೇಳಿಕೊಳ್ಳುತ್ತಾರೆ. ಆಗ ಅವರಿಗೆ ನೂರು ವರ್ಷ ಭೌತಿಕವಾಗಿ ಮುನ್ನೂರು ವರ್ಷ ಬೃಂದಾವನದಲ್ಲಿ ಇದ್ದಂತೆ ಹಾಗೂ ಅವರ ಹೆಸರಿನ ನಾಮದಲ್ಲಿದ್ದಂತೆ ಮತ್ತೆ 300 ವರ್ಷ ಕೊಡುತ್ತಾರೆ ಹೀಗೆ ರಾಯರ ಪರಂಪರೆಯ ಪಾರಾಯಣ ಎಲ್ಲರ ಗಮನ ಸೆಳೆಯಿತು.
ರಾಜೇಶ್ ಅವರ ನಿವಾಸದಲ್ಲಿ ಐದು ದಿನಗಳ ನಡೆಯುವ ರಾಯರ ಆರಾಧನಾ ಮಹೋತ್ಸವವು ಬೆಳಿಗ್ಗೆ ಅಭಿಷೇಕ, ಅರ್ಚನೆ, ಆರಾಧನೆಯಿಂದ ಪ್ರಾರಂಭಗೊಂಡು ಸಂಜೆವರೆಗೂ ಸಾರ್ವಜನಿಕ ರಿಗೆ ಮುಕ್ತ ದರ್ಶನದ ಅವಕಾಶ ಕಲ್ಪಿಸಲಾಗಿದೆ. ಕೊನೆಯ ದಿನದಂದೂ ರಾಯರ ದೀಪೋತ್ಸವ ಕಾರ್ಯಕ್ರಮದ ಪೂಜೆ ವಿಶೇಷವಾಗಿ ನೇರವೇರಲಿದೆ. ಅಲ್ಲದೆ ಐದು ದಿನಗಳು ಭಕ್ತರಿಗೆ ಪ್ರಸಾದ ವಿನಿಯೋಗ ಸಹ ನೇರಿಸುತ್ತಾ ಬಂದಿರುವುದು ಇವರ ವಿಶೇಷವಾಗಿದೆ. ಇವರ ರಾಯರ ಕೈಂಕಾರ್ಯದಲ್ಲಿ ಅರ್ಚನಾ ರಾಜೇಶ್ ಹಾಗೂ ಕುಟುಂಬ ವರ್ಗದವರ ಸಹಕಾರದಿಂದ ನಿರಂತರವಾಗಿ ನೇರವೇರಿಸುತ್ತಾ ಬಂದಿದ್ದಾರೆ. ಸಾಂಸ್ಕೃತಿಕ ನಗರಿಯ ಸಂಸ್ಕೃತಿ ಹೆಚ್ಚಿಸುವ ನಿಟ್ಟಿನಲ್ಲಿ ರಾಯರ ಆರಾಧನಾ ಮಹೋತ್ಸವ ಎಲ್ಲರ ಗಮನ ಸೆಳೆದಿದೆ.