ಚಾಮರಾಜನಗರದ ಮೇಗಲ ಉಪ್ಪಾರ ಬೀದಿಯಲ್ಲ ವಾಸಿಸುತ್ತಿರುವ ಚಂದ್ರಶೇಖರ ಎಂಬ ಆರೋಪಿ ಶಿಕ್ಷೆಗೆ ಗುರಿಯಾದ ವ್ಯಕ್ತಿ . ಈತ 2018ರ ಜುಲೈ 11ರಂದು ಚಾಮರಾಜನಗರದಲ್ಲಿ 17 ವರ್ಷದ ಬಾಲಕಿಯನ್ನು ಮದುವೆಯಾಗುವುದಾಗಿ ಆಸೆ ತೋರಿಸಿ ಕರೆದೊಯ್ದಿದ್ದ. ನಂತರ ಬಾಲಕಿಯನ್ನು ಪಕ್ಕದ ಕೋಡಿಮೊಳೆ ಗ್ರಾಮದ ಮಹದೇವಮ್ಮ ಎಂಬುವರ ಮನೆಯಲ್ಲಿ ಇಟ್ಟಿದ್ದ . ಆ ಬಾಲಕಿಗೆ ಆಶ್ರಯ ನೀಡಿದ ಮಹದೇವಮ್ಮಗೆ ಐದು ವರ್ಷ ಜೈಲು ಶಿಕ್ಷೆ 2 ಲಕ್ಷ ರೂ ದಂಡವನ್ನು ವಿಧಿಸಿ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಸದಾಶಿವ ಎಸ್.ಸುಲ್ತಾನಪುರಿ ಆದೇಶ ನೀಡಿದ್ದಾರೆ..
ಬಾಲಕಿಯನ್ನು ಅಸೆ ತೋರಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಬಾಲಕಿಯ ತಾಯಿ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಸರ್ಕಾರದ ಪರವಾಗಿ ವಕೀಲ ಯೋಗೇಶ್ ವಾದ ಮಂಡಿಸಿದ್ದರು.
ಮಾನಸಿಕವಾಗಿ ನೊಂದ ಬಾಲಕಿಗೆ ಪರಿಹಾರ ರೂಪದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು 7.5 ಲಕ್ಷ ರೂ ಪರಿಹಾರವನ್ನು ಕೊಡಬೇಕು ಎಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ