ಫುಡ್ ಕಿಟ್ ವಿತರಣೆಗೆ ಚಾಲನೆ ನೀಡಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್

ಮೈಸೂರು, ಜುಲೈ.06:- ನಗರದ ಸುತ್ತೂರು ಮಠದಲ್ಲಿ ಸೋಮವಾರ ಮೈಸೂರು ನಾಗರಿಕ ವೇದಿಕೆ ವತಿಯಿಂದ ಫಲಾನುಭವಿಗಳಿಗೆ ಫುಡ್ ಕಿಟ್ ಅನ್ನು ನೀಡುವ ಕಾರ್ಯಕ್ರಮಕ್ಕೆ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕೋವಿಡ್ 19ರ ಮೊದಲನೆ ಅಲೆಯಲ್ಲೂ ಮೈಸೂರು ನಾಗರಿಕ ವೇದಿಕೆಯು ಮೆಡಿಷನ್ ಕಿಟ್ ನೀಡುವುದರ ಮೂಲಕ ಕಷ್ಟದ ಕಾಲದಲ್ಲಿಯೂ ಉತ್ತಮವಾಗಿ ಸ್ಪಂದಿಸಿದ್ದರು ಎಂದು ಶ್ಲಾಘಿಸಿದರು.

ಲಾಕ್ ಡೌನ್ ನಿಂದ ಸುಮಾರು ಜನರಿಗೆ ತೊಂದರೆಯಾಗಿರುವುದನ್ನು ಗುರುತಿಸಿದ ಮೈಸೂರು ನಾಗರಿಕ ವೇದಿಕೆಯ ತಂಡವು ಫುಡ್ ಕಿಟ್ ನೀಡುತ್ತಿರುವುದು ಹಾಗೂ ಈ ಬಾರಿಯು ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವುದು ಸ್ವಾಗತಾರ್ಹ ವಿಷಯ ಎಂದರು.

ದೇಶಿಕೇಂದ್ರ ಸ್ವಾಮೀಜಿ, ಸಂಸದ ಪ್ರತಾಪ್ ಸಿಂಹ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್‌.ವಿ.ರಾಜೀವ್, ಅರಗು ಮತ್ತು ಬಣ್ಣದ ಕಾರ್ಖಾನೆಯ ಅಧ್ಯಕ್ಷ ಫಣೀಶ್ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *