ಇತ್ತೀಚಿನ ದಿನಗಳಲ್ಲಿ ರಾಜಕಾರಣದಲ್ಲಿ ಬಂಡವಾಳಶಾಹಿಗಳು ಹಾಗೂ ಆದಾಯದ ಮೂಲ ಹುಡುಕುತ್ತಿರುವ ಶ್ರೀಮಂತರು ರಾಜಕಾರಣ ಪ್ರವೇಶ ಮಾಡಿ ನೈಜ ಸಿದ್ಧಾಂತ ಹಾಗೂ ಪ್ರಾಮಾಣಿಕ ಹಿನ್ನೆಲೆ ಉಳ್ಳ ರಾಜಕಾರಣಿಗಳ ಬದುಕಿಗೆ ಬೆಂಕಿ ಬಿದ್ದಿದೆ. ದಿನದಿಂದ ದಿನಕ್ಕೆ ರಾಜಕೀಯ ರಂಗ ಆದಾಯದ ಮೂಲವಾಗಿ ಪರಿಣಮಿಸುತ್ತಿದೆ ಎಂದು ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾ. ಬಿಜೆ. ವಿಜಯಕುಮಾರ್ ಆತಂಕ ವ್ಯಕ್ತಪಡಿಸಿದರು.

ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆ ಅಂಗವಾಗಿ ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜಕೀಯ ಪಕ್ಷಗಳು ಪಕ್ಷದ ಸೈದ್ಧಾಂತಿಕ ಸಿದ್ಧಾಂತಗಳನ್ನು ಮೂಲೆಗುಂಪು ಮಾಡಿ ಹಣವಿರುವವರಿಗೆ ಪಕ್ಷದ ಟಿಕೆಟ್ ನೀಡುವ ಪದ್ಧತಿ ಗೆದ್ದ ನಂತರ ಅ ಜನಪ್ರತಿನಿಧಿ ಯಿಂದ ಸಮಾಜ ಬೇರೆ ಏನು ನಿರೀಕ್ಷೆ ಮಾಡಲು ಸಾಧ್ಯ. ಆದರೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಮಾಜಿಕ ನ್ಯಾಯದ ಜೀವ ವಿರುವುದು ಬಹಳಷ್ಟು ಸಂದರ್ಭದಲ್ಲಿ ದೃಢ ಪಟ್ಟಿದೆ.
ಭಾರತದಲ್ಲಿ ಈಗ ಏಕ ಚಕ್ರಾಧಿಪತ್ಯದ ಒಪ್ಪಲಾಗದ ಪ್ರಜಾತಂತ್ರ ವ್ಯವಸ್ಥೆ. ಇದು ಭವಿಷ್ಯಕ್ಕೆ ಬಾರಿ ದೊಡ್ಡ ಮಾರಕ. ದೇಶದ ರಾಜಕೀಯ ಪಕ್ಷಗಳು ಕಾಂಗ್ರೆಸ್ ಹೊರತುಪಡಿಸಿದರೆ, ಪ್ರಜಾತಂತ್ರದ ಆಶಯಗಳಿಗೆ ಹಾಗೂ ಸಂವಿಧಾನದ ಮೂಲ ತತ್ವಕ್ಕೆ ವಿರುದ್ಧವಾಗಿ ಪಕ್ಷಗಳ ಗೌಪ್ಯ ಅಜೆಂಡ ವಾಗಿ ಮಾರ್ಪಟ್ಟಿದೆ.
ರಾಷ್ಟ್ರದ ಚುನಾವಣಾ ಆಯೋಗ ಕೂಡ ಈಗಿನ ಚುನಾವಣಾ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆಗೆ ತಿದ್ದುಪಡಿಯ ಅನಿವಾರ್ಯತೆ ಬೇಕಾಗಿದೆ. ದೇಶದ ವ್ಯವಸ್ಥೆ ಸರಿಯಾಗಬೇಕಾದರೆ ಚುನಾವಣಾ ಪದ್ಧತಿಗೆ ಸಂವಿಧಾನದ ತಿದ್ದುಪಡಿ ತುರ್ತು ಅನಿವಾರ್ಯವಿದೆ .
ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ದೇಶದಲ್ಲಿ ಸಾಮಾಜಿಕ ಕ್ರಾಂತಿಯ ಮೂಲಕ ಸೈದ್ಧಾಂತಿಕ ಹಿನ್ನೆಲೆಗೆ ಭದ್ರ ಬುನಾದಿ ಹಾಕಿದರು. ಭಾರತದಲ್ಲಿ ಕಾರ್ಮಿಕರ ಕಾಯಿದೆಗಳಿಗೆ, ದೇಶದ ಆಹಾರ ಉತ್ಪಾದನಾ ಕ್ಷೇತ್ರಕ್ಕೆ, ಬಾಂಗ್ಲಾದೇಶದ ವಿಮೋಚನೆಗೆ ಹಾಗೂ ಕೃಷಿಕ್ಷೇತ್ರದ ಬಾರಿ ದೊಡ್ಡ ಮಟ್ಟದ ಬಲವರ್ಧನೆ ಬಾಬು ಜಗಜೀವನ್ ರಾಮ್ ಅವರ ಕೊಡುಗೆ ಅವಿಸ್ಮರಣೀಯ ಎಂದರು.
ಸಭೆಯಲ್ಲಿ ಮೈಸೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್ ಮೂರ್ತಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಡಾ. ತಿಮ್ಮಯ್ಯ, ಟಿ ನರಸೀಪುರ ಪುರಸಭಾ ಅಧ್ಯಕ್ಷರಾದ ಸೋಮು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಾದ ಶಿವಣ್ಣ, ಸುನಂದ ಕುಮಾರ್, ಎಡತಲೆ ಮಂಜುನಾಥ್, ಮರಳೂರು ಮಹೇಶ್, ಶಿವಪ್ರಸಾದ್, ಹುಣಸೂರು ಬಸವಣ್ಣ, ಚಂದ್ರ, ಗಿರೀಶ್, ಮಹೇಶ್, ಎಂ ಆರ್ ಎಂ ಮಂಜು, ಮಂಜುನಾಥ್, ಉತ್ತನಹಳ್ಳಿ ಶಿವಣ್ಣ, ಸಕ್ಕ್ ಕಳ್ಳಿ ಬಸವರಾಜ್, ಜೈರಾಮ್, ಅಪ್ಪು, ಪುಟ್ಟಸ್ವಾಮಿ, ತಿಮ್ಮರಾಜು, ಮುನಿಸ್ವಾಮಿ, ಹೇಮಂತ್, ಪ್ರವೀಣ್ , ಶ್ರೀಧರ್ ಗೌಡ, ಇತರರು ಪಾಲ್ಗೊಂಡಿದ್ದರು.