ಮೈಸೂರಿನ ಸುವರ್ಣ ಬೆಳಕು ಫೌಂಡೇಷನ್ನಿಂದ ಆದರ್ಶವಾಗುವ ಮಾದರಿ ಕಾರ್ಯ
ಮೈಸೂರು ಜು 20 ಕೋವಿಡ್ ಸಂಧರ್ಭದಲ್ಲಿ ಮೈಸೂರಿನ ಬಡಜನರಿಗೆ ಹಾಗೂ ಸಾರ್ವಜನಿಕರಿಗೆ, ಅಂಗವಿಕಲರಿಗೆ ಆಹಾರ ವಿತರಣೆ ಮತ್ತು ದಿನ ನಿತ್ಯ ಬಳುಸುವ ಅವಶ್ಯಕ ವಸ್ತುಗಳ ದಿನಸಿ ಕಿಟ್ ವಿತರಣೆ ಹಾಗೂ ಮೈಸೂರು ಮೃಗಾಲಯದ ಪ್ರಾಣಿ ದತ್ತು ತೆಗೆದುಕೊಂಡಿರುವ ಸಾರ್ಥಕತೆ ಮೆರೆದಿರುವ ಮೂಲಕ ಸಮಾಜ ಸೇವೆ ಮಾಡಿದವರಿಗೆ ಇಂದು ನಗರದ ಕೃಷ್ಣಮುರ್ತಿ ಪುರಂನ ನಮನ ಕಲಾಮಂಟಪದಲ್ಲಿ ಸುವರ್ಣ ಬೆಳಕು ಪೌಂಡೇಷನ್ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ. ಅಭಿನಂದಿತರಾದ 6 ಜನ ಸಮಾಜ ಸೇವಕರಾದ ಎಡಿನ್ ಸಿನರ್ಜಿ, ಡಾ.ಬಿ.ಆರ್ ನಟರಾಜ್ ಜೋಯಿಸ್, ಅಪೂರ್ವ ಶಿವಣ್ಣ, ಮಂಜುನಾಥ,ರಂಗನಾಥ್, ವಿಕಾಸ್ ಶಾಸ್ತ್ರಿ,ಅವರನ್ನು ಅಭಿನಂದನಾ ಪತ್ರ. ನೀಡಿ ಸೇವ ಸಾಧಕರನ್ನು ಗೌರವಿಸಲಾಯಿತು. ಉದ್ಘಾಟನೆ ಮಾಡಿ ಮಾತನಾಡಿದ ಶ್ರೀ.ವತ್ಸ ನಗರ ..ಬಿ.ಜೆ.ಪಿ.ಅಧ್ಯಕ್ಷರು.ಕರೋನಾ ವಾರಿಯರ್ಸ್ ಅವರಿಗೆ ಸುವರ್ಣ ಬೆಳಕು ಪೌಂಢೇಶನ್ ವತಿಯಿಂದ ಈ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ.ಈ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆಗೆ ಭಾಜನರಾದ ಎಲ್ಲಾ ಸಮಾಜ ಸೇವಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.ಹೀಗೆಯೇ ಸಮಾಜದ ದುಸ್ಥಿತಿಯ ಸಂಧರ್ಭದಲ್ಲಿ ದೀನದಲಿತರಿಗೆ ನೆರವಾಗಿ ಉತ್ತಮ ಸಮಾಜದ ನಿರ್ಮಾಣಕ್ಕೆ ನೀವೆಲ್ಲರೂ ಇನ್ನೂ ಉತ್ತಮ ಸೇವಾಕಾರ್ಯಗಳಲ್ಲಿ ತೊಡಗಿ ಎಂದು ಈ ವೇದಿಕೆಯ ಮೂಲಕ ತಿಳಿಸಲು ಸಂತೋಷಪಡುತ್ತೇನೆ.ಹಾಗೂ ಈ ಕಾರ್ಯಕ್ರಮವನ್ನು ಆಯೋಜಿಸಿದ ಸುವರ್ಣ ಬೆಳಕು ಪೌಂಢೇಶನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಮಾತನಾಡಿದರು.

ನಂತರ ಮಾತನಾಡಿದ ಸಮಾಜ ಸೇವಕ ರಘುರಾಮ್ ವಾಜಪೇಯಿ,ಕರೋನಾದಂತಹ ಸಂಕಷ್ಟಗಳನ್ನು ಹಿಂದಿನ ಕಾಲದಲ್ಲಿಯೂ ಎದುರಿಸಲಾಗಿದೆ. ಆಗ ಪ್ಲೇಗ್ ನಂತಹ ಹೆಮ್ಮಾರಿ ಕಾಡಿ ದೇಶಕ್ಕೆ ದೇಶವೇ ನಲುಗಿದಂತಹ ಪರಿಸ್ಥಿತಿಯನ್ನು ಎದುರಿಸಿದ್ದೇವೆ ಎಂದು ಹಿರಿಯ ಸಮಾಜ ಸೇವಕ ಡಾ. ಕೆ. ರಘುರಾಮ್ ವಾಜಪೇಯಿ ಅಭಿಪ್ರಾಯಪಟ್ಟರು. ಪ್ರಕೃತಿ ತನ್ನನ್ನು ತಾನು ರಕ್ಷಿಸಿ ರಕ್ಷಿಸಿಕೊಳ್ಳಲು ಇಂತಹ ಪಿಡುಗುಗಳು ಬರುವುದು ಸಾಮಾನ್ಯ. ಆದುದರಿಂದ ಪ್ರಕೃತಿಯನ್ನು ಸಮತೋಲನದಲ್ಲಿರುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದರು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಕೈಲಾದಷ್ಟು ಸಮಾಜಕ್ಕೆ ಸಹಾಯ ಮಾಡುವ ಮೂಲಕ ಸಮಾಜದ ಋಣವನ್ನು ತೀರಿಸ ಬೇಕೆಂದು ಕರೆ ನೀಡಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಮದುಮೇಹ ತಜ್ಞ ಡಾ. ರೇಣುಕಾಪ್ರಸಾದ್ ಎ.ಆರ್, ಸೇವೆ ಅಥವಾ ಸಹಾಯ ಅಂತ ಬಂದಾಗ ನಿಸ್ವಾರ್ಥ ಮತ್ತು ನಿರೀಕ್ಷೆ ಮುಕ್ತವಾಗಿರುತ್ತೆ.ಸಮಾಲೋಚಿತವಾಗಿರುತ್ತೆ ಮುಖ್ಯವಾಗಿ ಗೌರವಾನ್ವಿತ ವಿಚಾರವಾಗಿರುತ್ತದೆ.ನಮ್ಮ ಸೇವೆ ಅಥವಾ ಸಹಾಯ ಬೇರೆಯವರಿಗೆ ತಲುಪಿದಾಗ ಒಂದು ಮೌಲ್ಯವಿರುತ್ತದೆ.ಇಂತಹ ಸೇವೆಯನ್ನು ಪರಿಗಣಿಸಿ ಸುವರ್ಣ ಬೆಳಕು ಪೌಂಢೇಶನ್ ಒಳ್ಳೆಯ ಕೆಲಸ ಮಾಡಿದೆ ಎಂದರು.ಕಾರ್ಯಕ್ರಮದಲ್ಲಿ ಸುವರ್ಣ ಬೆಳಕು ಫೌಂಡೇಷನ್ ಮಹೇಶ್ ನಾಯಕ್ ಆರೋಗ್ಯ ಕಿರಣ ಮಾಸ ಪತ್ರಿಕೆಯ ಸಂಪಾದಕ.ಎನ್.ಆನಂತ್,ಶ್ರೀಕಾಂತ್,ಲೋಕೆಶ್,ಮಂಜುನಾಥ.ಚಿ.ಮ.ಬಿ.ಆರ್,ಬಸವರಾಜು.,ಹರ್ಷವರ್ಧನ್, ಪುರುಷೋತ್ತಮ ,ಶಿವುಕುಮಾರ್, ದಯನಂದ್,ಮುಂತಾದವರು ಉಪಸ್ಥಿತರಿದ್ದರು.: