ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಆಷಾಢ ಮಾಸದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನದ ಸ್ವಚ್ಛ ತೆ ಮಾಡುವ 50 ಮಹಿಳಾ ಸ್ವಚ್ಚತಾ ಸೇನಾನಿಗಳಿಗೆ ಸೀರೆ ,ಬಳೆ, ಹೂವು, ಕುಂಕುಮ ,ಅರಿಶಿನ, ಬಳೆ ನೀಡಿ ಬಾಗಿನ ನೀಡಿ ಆನಂತರ ಭಕ್ತಾದಿಗಳಿಗೆ ಮಾಸ್ಕ್ ನೀಡಿ ಕೊರೋನಾ ಜಾಗೃತಿ ಮೂಡಿಸಲಾಯಿತು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ರವರು ಮಾತನಾಡಿ ಮೈಸೂರು ಪ್ರಾಂತ್ಯದಲ್ಲಿ ಆಷಾಢ ಮಾಸವೆಂದರೇ ದೇವಿಆರಾಧನೆಗೆ ಪೂಜಾಕೈಂಕರ್ಯಕ್ಕೆ ಮಹಿಳೆಯರು ಹೆಚ್ಚು ಪ್ರಾಧಾನ್ಯತೆ ನೀಡುತ್ತಾರೆ, ಚಾಮುಂಡಿ ಬೆಟ್ಟದಲ್ಲಿ ಪ್ರತಿನಿತ್ಯ ಸೇವೆಸಲ್ಲಿಸುವ ಮಹಿಳಾ ಭದ್ರತಾ ಸಿಬ್ಬಂದಿಗಳಿಗೆ ಸ್ವಚ್ಚತಾ ಸಿಬ್ಬಂದಿಗಳಿಗೆ ಬಾಗಿನ ಸಮರ್ಪಣೆ ಮಾಡುವ ಮೂಲಕ ಅವರಲ್ಲೂ ಸಹ ಹಬ್ಬಸಡಗರ ಮನೆಮಾಡಿದೆ, ಇಂದಿನ ಕೊರೊನಾ ಸಂಧರ್ಭದಲ್ಲಿ ಕಾರ್ಯನಿರ್ವಹಿಸಲು ಅವರಲ್ಲಿ ಮತ್ತಷ್ಟು ಆತ್ಮ ಸ್ಥೈರ್ಯ ಮನಃಶಕ್ತಿ ತುಂಬಿದೆ ಎಂದರು,

ನಂತರ ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್ ರವರು ಮಾತನಾಡಿ ಆಷಾಡ ಮಾಸದ ಆಚರಣೆ ಮೈಸೂರು ಭಾಗವಲ್ಲದೇ ಇಡೀ ದೇಶದಲ್ಲಿ ಮಹಿಳೆಯರು ಸಾಂಪ್ರದಾಯಿಕ ಹಬ್ಬವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ, ಚಾಮುಂಡಿ ಬೆಟ್ಟದಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಮತ್ತು ಮಹಿಳಾ ವ್ಯಾಪಾರಸ್ಥರನ್ನು ಖಾಯಂ ವೃತ್ತಿಪರವಾಗಿ ಘೋಷಿಸಬೇಕು, ಮಹಿಳೆಯರು ಹೆಚ್ಚಾಗಿ ಮೆಟ್ಟಿಲು ಹತ್ತಿಕೊಂಡು ಅರಿಶಿನ ಕುಂಕುಮ ಸೇವೆ ಸಲ್ಲಿಸಿ ಚಾಮುಂಡಿ ತಾಯಿ ದರ್ಶನ ಪಡೆಯಲು ಬರುತ್ತಾರೆ ಹಾಗಾಗಿ ಮುಜರಾಯಿ ಇಲಾಖೆ ಅದಕ್ಕೊಂದು ಧಾರ್ಮಿಕ ಯೋಜನೆ ರೂಪಿಸಿ ಅವಕಾಶ ಕಲ್ಪಿಸಿಕೊಡಬೇಕು ಎಂದರು
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ,
ಕಾಂಗ್ರೆಸ್ ಯುವ ಮುಖಂಡರಾದ ಎನ್ ಎಂ ನವೀನ್ ಕುಮಾರ್ ,ಹಿರಿಯ ಸಮಾಜ ಸೇವಕ ಕೆ ರಘುರಾಂ ವಾಜಪೇಯಿ , ನಾಡಪ್ರಭು ಕೆಂಪೇಗೌಡ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಿ ಜೆ ಗಂಗಾಧರ್,ಯುವ ಕಾಂಗ್ರೆಸ್ ನಗರ ಪ್ರಧಾನ ಕಾರ್ಯದರ್ಶಿ ಚೇತನ್ ಕಾಂತರಾಜು , ಪೈಲ್ವಾನ್ ಸುನೀಲ್ ,ರಾಜೇಶ್ ,ವಿನಯ್ ಕಣಗಾಲ್ ,ರಾಕೇಶ್ ಕುಂಚಿಟಿಗ ,ಹರೀಶ್ ನಾಯ್ಡು,ಶ್ಯಾಮಲ ಕಶ್ಯಪ್, ರೂಪ, ಹಾಗೂ ಇತರರು ಹಾಜರಿದ್ದರು