ಕರ್ನಾಟಕ ಮೃಗಾಲಯ ಪ್ರಾಧಿಕಾರದವತಿಯಿಂದ 20-21ರ ಬಜೆಟ್ನಲ್ಲಿ ಕರ್ನಾಟಕದ ವ್ಯಾಪ್ತಿಗೆ ಒಳಪಡು ಒಂಭತ್ತು ಮೃಗಾಲಯಗಳ ನಿರ್ವಹಣೆಗೆ ಇನ್ನೂ ಹೆಚ್ಚಿನ ಅನುದಾನವನ್ನು ನೀಡುವಂತೆ ಕೋರಿ ಮುಖ್ಯಮಂತ್ರಿ ಯಡಿಯೂರಪ್ಪನಿಗೆ ಮನವಿ

ಈ ವರ್ಷದ ಸಾಲಿನಲ್ಲಿ ಕರ್ನಾಟಕದ ವ್ಯಾಪ್ತಿಗೆ ಒಳಪಡುವ ಮೃಗಾಲಯಗಳಿಗೆ ಈ ಸಾಲಿನಲ್ಲಿ ಆಡಳೀತ ನಿರ್ವಹಣೆಗೆ ಆಹಾರ, ಮೇವು, ಪಶುವೈದ್ಯಕೀಯ ಹಾಗೂ ಇನ್ನಿತರ ಖರ್ಚು ವೆಚ್ಚ ನಿರ್ವಹಣೆಗೆ ರೂ 5203.64 ಲಕ್ಷಗಳ ವೆಚ್ಚ ಭರಿಸಲಾಗಿದೆ.
ಆದಾಯಕ್ಕಿಂತ ಮೃಗಾಲಯದ ವೆಚ್ಚವೆ ಆಧಿಕವಾಗಿದ್ದು ಕಳೆದ ವರ್ಷದ ವೆಚ್ಚಕ್ಕಿಂತ ಶೇ.10 ರಷ್ಟು ಅನುದಾನದ ಹೆಚ್ಚು ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕೋರಲಾಗಿದೆ
ಈ ಭಾರಿ 23.24 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಮನವಿ ಮಾಡಿದರು.
ಹೆಚ್ಚು ಮಾಡದಿದ್ದಲ್ಲಿ ಯಾವುದೇ ಹೊಸ ಸಿವಿಲ್ ಅಭಿವೃದ್ಧಿ ಕಾಮಗಾರಿಗಳನ್ನು ತೆಗೆದುಕೋಳ್ಳಲು ಹಾಗೂ ಮೃಗಾಲಯಗಳ ನಿರ್ವಹಣೆ ಮಾಡಲು ತುಂಬಾ ಕಷ್ಟದ ಪರಿಸ್ಥಿತಿನ್ನು ಎದುರಿಸಬೇಕಾಗುತ್ತದೆ ಎಂದು ಮೃಗಾಲಯ ಪ್ರಾಧಿಕಾರದ ಆಧ್ಯಕ್ಷ ಮಹದೇವಸ್ವಾಮಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬಳಿ ಮನವಿ ಮಾಡಿದರು