ಆ ದೇವರು ಮದುವೆಯನ್ನ ಸ್ವರ್ಗದಲ್ಲಿ ನಿಶ್ಚಯ ಮಾಡಿರುತ್ತನೆ ಅಂತಾ ಹೇಳ್ತಾರೆ ಆದರೆ ಇಲ್ಲೋಂದು ಘಟನೆ ಮಾತ್ರ ಮೊದಲು ಹೇಳಿದ ಮಾತಿಗೆ ಸಾಕ್ಷಿಯಾದಂತಿದೆ.
ಈ ಅಪರೂಪದ ಘಟನೆ ನಡೆದಿರುವುದು ಜಾರ್ಖಂಡನ ರಾಂಚಿಯಲ್ಲಿ ಈ ರೀತಿ ಘಟನೆ ನಡೆದಿರುವುದು ಮಾತ್ರ ನಿಜವಾಗಲು ಕರುಣೆ ಹುಟ್ಟಿಸುವಂತಿದೆ ಹಾಗೂ ನಿಜವಾದ ಪ್ರೀತಿಗೆ ಜಯಸಿಕ್ಕಂತಾಗಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಒಬ್ಬ ವ್ಯಕ್ತಿ ತೆಗೆದುಕೊಂಡ ನಿರ್ಧಾರದಿಂದ ನಿಜಕ್ಕೂ ಮಚ್ಚುವಂತಹದ್ದು ಕೆಲಸ ಎಂದರೆ ತಪ್ಪಾಗಲಾರದು.

ಜಾರ್ಖಂಡಿ ಜಿಲ್ಲೆಯ ರಾಂಚಿ ನಗರದಲ್ಲಿ ಎರಡು ಕುಟುಂಬದವರು ಒಪ್ಪಿ ಹುಡುಗ ಹುಡುಗಿಗೆ ಎಲ್ಲರ ಸಮ್ಮುಖದಲ್ಲಿ ಮದುವೆ ಮಾಡಿ ಮುಗಿಸಿದರು. ಆದರೆ ಮಧುಮಗಳು ಹಳೆ ಲವರ್ನ ನೆನಪಿನಲ್ಲಿಯೆ ಇದ್ದು ಯಾರಿಗೂ ತಿಳಿಯದಂತೆ ಮದುವೆಯಾದ ಹದಿನೇಳು ದಿನಕ್ಕೆ ಮನೆಯಿಂದ ಓಡಿ ಹೋಗಿದ್ದಳೆ. ಪರಿಸ್ಥಿತಿಯನ್ನ ಅರಿತ ಮಧುಮಗ ಓಡಿಹೋಗಿದ್ದ ಜೋಡಿಯನ್ನು ಹುಡುಕಿಸಿದ್ದಾನೆ. ಆಗ ಗಂಡಿನ ಮನೆಯವರು ಇವರಿಬ್ಬರನ್ನುಎಲ್ಲಾ ಕಡೆ ಹುಡುಕಿಸಿ ಹುಡುಗಿಯ ಮನೆಯವರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಇವರಿಬ್ಬರನ್ನು ಕರೆತಂದು ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೇ ಮಾಡಿಸಿದ್ದನೆ ಈ ಘಟನೆಗೆ ಇಬ್ಬರೂ ಕುಟುಂಬದವರು ಸಾಕ್ಷಿಯಾಗಿದ್ದಾರೆ
ಈ ಬಗ್ಗೆ ಮಾತಾಡುವ ಪ್ರಿಯಕರ, ನಮ್ಮಿಬ್ಬರ ಪ್ರಿತಿಯ ಬಗ್ಗೆ ಆಕೆಯ ಕುಟುಂಬಕ್ಕೆ ತಿಳಿದಿತ್ತು. ಹಾಗಾಗಿ ಬೇರೆ ಹುಡುಗನೊಟ್ಟಿಗೆ ವಿವಾಹ ಮಾಡಿದ್ದರು ಎಂದು ತಿಳಿಸಿದ್ದಾನೆ. ಜುಲೈ ೨೦ ರಂದು ಮಹಿಳೆ ಮತ್ತು ಆಕೆಯ ಪ್ರೇಮಿ ಇಬ್ಬರನ್ನೂ ರತು ಬ್ಲಾಕ್ ಪೊಲೀಸ್ ಪ್ರಧಾನ ಕಚೇರಿಗೆ ಕರೆಸಲಾಯಿತು. ಪತ್ನಿಯು ಆಕೆಯ ಪ್ರೇಮಿಯೊಂದಿಗೆ ಇರಲು ಸಹಿ ಮಾಡಿ ಒಪ್ಪಿಗೆಯನ್ನು ನೀಡಿದ ಒಪ್ಪಂದದ ಕಾಗದವನ್ನು ಸಿದ್ಧಪಡಿಸಲಾಯಿತು. ಅದೇ ಸಮಯದಲ್ಲಿ, ಪ್ರೇಮಿ ಸಹ ಒಪ್ಪಂದಕ್ಕೆ ಸಹಿ ಹಾಕಿದನು ಮತ್ತು ಅವಳನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ನೀಡಿದನು.
ಪ್ರೀತಿ ಮಧುರ, ತ್ಯಾಗ ಅಮರ, ಪ್ರೀತಿ.. ಪ್ರೀತಿಸುವ ಹೃದಯಗಳು ದೂರವಾಗಬಾರದು ಎಂಬುದನ್ನು ಅರಿತಿದ್ದ ಗಂಡ ತನ್ನ ಪತ್ನಿಯನ್ನು ಪ್ರಿಯಕರನಿಗೆ ಬಿಟ್ಟುಕೊಟ್ಟಿದ್ದು, ಇದು ಒಂದು ಸಿನಿಮೀಯಾ ರೀತಿಯಲ್ಲಿ ಅಂತ್ಯ ಕಂಡಿದೆ.