ಕಾರ್ಮಿಕರ ಹಿತ ಶಕ್ತಿ ಕಾಪಾಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ:ಮಾಜಿ ಸಂಸದ ಧ್ರುವನಾರಾಯಣ್

ಕಾರ್ಮಿಕರ ಖಾಯಿದೆಗಳನ್ನು ಸಡಿಲಗೊಳಿಸಿ ಕಾರ್ಮಿಕರ ಹಿತ ಶಕ್ತಿ ಕಾಪಾಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ, ಇದೆ ದೊಡ್ಡ ದುರಂತ. – ಮಾಜಿ ಸಂಸದ ಧ್ರುವನಾರಾಯಣ್ ಆರೋಪ.

ಇಂದು ಕಾಗ್ರೇಸ್ ಕಚೇರಿಯಲ್ಲಿ ನಡೆದ ಶ್ರಮಿಕ ಸಮ್ಮೇಳನ, ಪದಗ್ರಹಣ ಮತ್ತು ರಾಜ್ಯ ಸಮಿತಿಯ ಕಾರ್ಯಕಾರಣಿ ಸಭೆ ಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಧ್ಯಕ್ಷರಾದ ಮಾನ್ಯ ಧ್ರುವನಾರಾಯಣ್ ಕಾರ್ಮಿಕ ಕಾಯಿದೆಗಳನ್ನು ಸಡಿಲಗೊಳಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತಿದೆ ಎಂದು ಆರೋಪಿಸಿದರು, ಹಾಗೂ ಇದೆ ಸಂದರ್ಭದಲ್ಲಿ ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ರನ್ನ ನೆನೆದು, ಅಂಬೇಡ್ಕರ್ ಕಾರ್ಮಿಕ ವಿಭಾಗದ ಮುಖ್ಯಸ್ಥರಾಗಿ ಕನಿಷ್ಠ ವೇತನ ಹಾಗೂ ಅದನ್ನು ಕಾರ್ಮಿಕರಿಗೆ ಕೊಡುವಂತಹದ್ದು ಈ ರೀತಿಯ ಕಾಯಿದೆಗಳನ್ನ ಮಾಡುವ ಮೂಲಕ ಕಾರ್ಮಿಕರಿಗೆ ಶಕ್ತಿ ಆಗಿದ್ದರೆ ಎಂದರು.

ಶ್ರೀಮತಿ ಇಂದಿರಾಗಾಂಧಿ ಅವರು ಖಾಸಗಿ ಮಾಲೀಕತ್ವ ದಿಂದ ರಾಷ್ಟ್ರೀಕರಣ ಮಾಡಿದರು ಆದರೆ ಇಂದು ಮೋದಿ ಸರ್ಕಾರ ಎಲ್ಲವನ್ನು ಖಾಸಗಿಕರಣ ಮಾಡಿ ಕೈಗಾರಿಕೆಗಳಿಗೆ ಲಾಭ ಮಾಡಿಕೊಡುತಿದೆ ಎಂದು ಬೇಸರ ವೆಕ್ತಪಡಿಸಿದರು.

ಆದ್ದರಿಂದ ಇಂದು ನಾವೆಲ್ಲರೂ ಕಾರ್ಮಿಕರ ಹಿತಶಕ್ತಿಯನ್ನು ಕಾಪಾಡುವಲ್ಲಿ ಒಂದಾಗಿ ಸಂಘಟನೆ ಬಲಗೊಳಿಸಬೇಕು ಎಂದರು.

ನಂತರ ಮಾತನಾಡಿದ ಕಾರ್ಮಿಕ ವಿಭಾಗದ ರಾಜ್ಯಾಧ್ಯಕ್ಷರಾದ ಮಾನ್ಯ ಪುಟ್ಟಸ್ವಾಮಿಗೌಡರು ಮಾಜಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಯವರ 20ಅಂಶಗಳ ಕಾರ್ಯಕ್ರಮಗಳ ಬಗ್ಗೆ ಸವಿಸ್ಥರವಾಗಿ ತಿಳಿಸಿ, ಅದರಲ್ಲೂ ಮುಖ್ಯವಾಗಿ ಕೈಗಾರಿಕೆಗಳ ಆರಂಭ ಹಾಗೂ ಅವುಗಳನು ರಾಷ್ಟ್ರೀಕರಣ ಗೊಳಿಸಿದ್ದು,ಜೀತಪದ್ದತಿ ನಿರ್ಮೂಲನೆ, ಉಳುವವನೆ ಭೂಮಿವಡೆಯ, ಕಾಯ್ದೆಗಳನ್ನು ತಂದ ಕೀರ್ತಿ ಕಾಂಗ್ರೆಸ್ ಸರ್ಕಾರದಾಗಿದೆ ಎಂದರು.
ಹಾಗೂ ಮಾನ್ಯ ಮಲ್ಲಿಕಾರ್ಜುನ ಖರ್ಗೆ ರವರು ಕಾರ್ಮಿಕ ಮಂತ್ರಿಗಳಾಗಿದ್ದ ಸಮಯದಲ್ಲಿ ಕಟ್ಟಡ ಕಾರ್ಮಿಕರ ಮಂಡಳಿ ರಚಿಸಿದರು ಇದು ಕೂಡ ಕಾಗ್ರೇಸ್ ನ ಒಂದು ಅತಿ ದೊಡ್ಡ ಕೊಡುಗೆ.

Leave a Reply

Your email address will not be published. Required fields are marked *