ಹುಣಸೂರಿನಲ್ಲಿ ವೃದ್ಧ ದಂಪತಿಗೆ ಚಾಕುವಿನಿಂದ ಹಲ್ಲೆ ಮಾಡಿ ನಗದು,ಚಿನ್ನಾಭರಣ ದೋಚಿದ್ದ ದುಷ್ಕರ್ಮಿಗಳು

ಮೈಸೂರು: ವೃದ್ಧ ದಂಪತಿಯ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ,ತುರುಕಿ ಚಾಕುವಿನಿಂದ ಹಲ್ಲೆ ಮಾಡಿ ನಗದು, ಚಿನ್ನಾಭರಣ ದೋಚಿದ್ದ ದರೋಡೆಕೋರರ ಗ್ಯಾಂಗಿ‌ನ ಆರು ಮಂದಿ ದರೋಡೆ ಕೋರರನ್ನು ಹುಣಸೂರು ಠಾಣೆ ಪೊಲೀಸರು ಮೂರು ದಿನಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂಬಂಧ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹಾಜಿ ಮೊಹಲ್ಲಾ ನಿವಾಸಿ ಮುಮ್ರಾಜ್ ಅಹ್ಮದ್ (72), ಅವರ ಪತ್ನಿ ನುಸ್ರತ್ ಉನ್ನೀಸಾ(62) ಅವರ ಮೇಲೆ ದುಷ್ಕರ್ಮಿಗಳು ನಾಲ್ಕು ದಿನಗಳ ಹಿಂದೆಯಷ್ಟೇ ಹಲ್ಲೆ ನಡೆಸಿದ್ದರು. ಪಟ್ಟಣದ ಹೃದಯ ಭಾಗದ ಸುಮನ್ ಫಂಕ್ಷನ್ ಹಾಲ್ ಎದುರಿನ ಮನೆಯ ಬಳಿ ಜು.26ರಂದು ರಾತ್ರಿ 7 ಗಂಟೆ ಸಮಯದಲ್ಲಿ ಏಳು ಜನರಿದ್ದ ತಂಡ ಬಂದಿದೆ. ಇವರಲ್ಲಿ ಇಬ್ಬರು ಮನೆಯ ಹೊರಗೆ ಕಾವಲಿಗೆ ನಿಂತಿದ್ದಾರೆ. ಕೊ‌ನೆಗೆ ವೃದ್ಧ ದಂಪತಿಯ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆತುರುಕಿ, ಚಾಕುವಿನಿಂದ ಹಲ್ಲೆ ಮಾಡಿ ನಗದು,  6 ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ  ಹುಣಸೂರು ಠಾಣೆಯ ಪೊಲೀಸರು ಆರು ಮಂದಿ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪೈಕಿ  ಮಿರ್ಜಾ ಬೇಗ್ ಹುಣಸೂರಿ ವಿದ್ಯಾರ್ಥಿಗಳ ಜೋಡಿ ಕೊಲೆ ಪ್ರಕರಣ ಆರೋಪಿಯಾಗಿದ್ದು,  ಮತ್ತೋರ್ವ ಆರೋಪಿ ಅಫ್ರೀನ್ ಕುಶಾಲನಗರ ಪ್ರವೀಣ್ ಪೂಜಾರಿ ಕೊಲೆ ಪ್ರಕರಣದ ಆರೋಪಿತನಾಗಿದ್ದಾನೆ. ಸದರಿ ಗ್ಯಾಂಗ್ ನಲ್ಲಿ ಬಂದಿತರೆಲ್ಲರೂ ೩೪ ವರ್ಷ ಒಳ ಪಟ್ಟವರಾಗಿದ್ದು, ಯಾವ ಕಾರಣಕ್ಕಾಗಿ ಕೃತ್ಯ ಎಸಗಿದರೆಂದು ಮುಂದಿನ ಮೂರು ದಿನಗಳಲ್ಲಿ ಮತ್ತಷ್ಟು ಆರೋಪಿಗಳನ್ನು ಬಂಧಿಸಿದ ಬಳಿಕವಷ್ಟೇ ಸತ್ಯಾಂಶ ತಿಳಿಯಲಿದೆ ಎಂದರು.

ಪ್ರಕರಣ ಭೇಧಿಸುವಲ್ಲಿ ಹುಣಸೂರು ಆರಕ್ಷಕ ನಿರೀಕ್ಷಕ ಸಿ.ವಿ.ರವಿ, ಪಿಎಸ್ ಐಗಳಾದ ಡಿ.ಕೆ.ಲತೇಶ್ ಕುಮಾರ್, ಪಂಚಾಕ್ಷರಿಸ್ವಾಮಿ, ಸಿಬ್ಬಂದಿಗಳಾದ ಪ್ರಭಾಕರ್, ಪುಟ್ಟನಾಯಕ, ಶ್ರೀನಿವಾಸ್ ಪ್ರಸಾದ್, ಇರ್ಫಾನ್, ಶೇಖರ್, ಭರತೇಶ್, ರಾಜೇಗೌಡ, ಕುಮಾರ್, ಆಲೀಂ ಭಾಗವಹಿಸಿದ್ದರು.

ಇನ್ನೂ ಹೆಚ್ಚುನ ಕ್ರೈಂ ವರದಿಗಾಗಿ ಇದನ್ನೂ ಓದಿ: https://timesofmysuru.com/long-sleeved-rowdy-sheets-of-police-parade/

Leave a Reply

Your email address will not be published. Required fields are marked *