ಪತ್ನಿಗೆ ಕಿರುಕುಳ ನೀಡುತ್ತಿದ್ದ ಭಾವನನ್ನು ಬಾಮೈದುನರೇ ಭೀಕರವಾಗಿ ಹತ್ಯೆ

ಅನೈತಿಕ ಸಂಬಂಧವಿದೆಯೆಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಭಾವನನ್ನು ಬಾಮೈದುನರೇ ಭೀಕರವಾಗಿ ಹತ್ಯೆ ಮಾಡಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ನಗರದ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಸಿಯಾ ನಗರದಲ್ಲಿ ನಡೆದ ಹತ್ಯೆಯಲ್ಲಿ ಮೊಹಮ್ಮದ್ ಸುರಾನ್ ಎಂಬಾತನನ್ನು ಕೊಲೆ ಮಾಡಲಾಗಿದೆ.

ಈತ ತನ್ನ ಪತ್ನಿಗೆ ಬೇರೆಯವರೊಡನೆ ಅನೈತಿಕ ಸಂಬಂಧ ಇದೆ ಎಂದು ತೀವ್ರ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದ್ದು, ಈ ಸಂಬಂಧ ಮೊಹಮ್ಮದ್ ಸೂರಾನ್ ಪತ್ನಿ ರೂಬಿನಾ ಕುಟುಂಬಸ್ಥರು ರಾಜಿ ಪಂಚಾಯ್ತಿ ಮಾಡಿ ಎಷ್ಟೇ ಬುದ್ಧಿವಾದ ಹೇಳಿದ್ದರು ಕ್ಯಾತೆ ತೆಗೆಯುವುದನ್ನು ಬಿಟ್ಟಿರಲಿಲ್ಲ ಎನ್ನಲಾಗಿದೆ.

ಇದರಿಂದಾಗಿ ರೊಚ್ಚಿಗೆದ್ದ ರುಬಿನಾಳ ಸಹೋದರರಾದ ಖಲೀಂ ಪಾಷಾ, ಅಜ್ಮನ್ ಪಾಷ, ಹಲಾಮಾತ್ ಪಾಷಾ, ಎಂಬ ಮೂವರು ತನ್ನ ಸ್ವಂತ ಭಾವನನ್ನು ಕೈ ಕತ್ತರಿಸಿ ಮನಸೋಇಚ್ಛೆ ಚಾಕು ಹಾಗೂ ರಾಜ್ ನಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎಂದು ಹೇಳಲಾಗಿದೆ.

ರೂಬಿನಾ ಸಹೋದರನ ಫೋಟೊ

ಇನ್ನು ಈ ಸಂಬಂಧ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿ

Leave a Reply

Your email address will not be published. Required fields are marked *