ಕೋವಿಡ್ ಲಾಕ್ ಡೌನ್ ನಿಂದ ತತ್ತರಿಸಿ ಜೀವನ ನಿರ್ವಹಣೆಯೂ ಕಷ್ಟವಾಗಿರುವ ಸಂಕಷ್ಟದ ಸಮಯದಲ್ಲಿ ಮೈಸೂರು ಜಿಲ್ಲಾ ಸವಿತಾ ಕೇಶಾಲಂಕಾರಿಗಳ ಸಂಘದ ಪರಿಶ್ರಮದಿಂದ ನೂರಕ್ಕೂ ಅಧಿಕ ಫಲಾನುಭವಿಗಳಿಗೆ ಸೂಯೇಜ್ ಫಾರಂ ರಸ್ತೆಯ ಸೂಪರ್ ಸ್ಟೈಲ್ ಮೆನ್ಸ್ ಪಾರ್ಲರ್ ಮುಂಭಾಗದಲ್ಲಿ ಆಹಾರದ ಕಿಟ್ ವಿತರಿಸಲಾಯಿತು.ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ಚಾಲನೆ ನೀಡಿದರು.ಈ ಸಂಧರ್ಭದಲ್ಲಿ ಪಾಲಿಕೆ ಸದಸ್ಯರಾದ ಮಾ.ವಿ.ರಾಮಪ್ರಸಾದ್,ಮಾಜಿ ಪಾಲಿಕೆ ಸದಸ್ಯರಾದ ಎಂ ಸಿ ಚಿಕ್ಕಣ್ಣ,ಎಂ ಸುನೀಲ್,ಸವಿತಾ ಸಮಾಜದ ಜಿಲ್ಲಾಧ್ಯಕ್ಷರು,ಮಾಜಿ ಪಾಲಿಕೆ ಸದಸ್ಯರಾದ ವಿ.ಮಂಜುನಾಥ್,ಕಾಂಗ್ರೆಸ್ ಪಕ್ಷದ ಅಸಂಘಟಿತ ಕಾರ್ಮಿಕರ ವಿಭಾಗದ ನಗರಾಧ್ಯಕ್ಷರಾದ ವಿನಯ್ ಕುಮಾರ್ ಜೆ,ರಾಮ್ ಪ್ರಕಾಶ್ ಎಂ,ರಮೇಶ್ ಸಿ,ಶಂಕರ್, ಡಿ.ಮಧುಕುಮಾರ್,ರಾಜೇಶ್ ಇನ್ನಿತರರು ಉಪಸ್ಥಿತರಿದ್ದರು.