ಬೆಂಗಳೂರು :ಅತ್ಯಾಚಾರಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೋಲಿಸರ ತಂಡಕ್ಕೆ ನಟ ಜಗ್ಗೇಶ್ ದಂಪತಿ ವೈಯುಕ್ತಿಕವಾಗಿ ಒಂದು ಲಕ್ಷ ರೂ ಬಹುಮಾನದ ಚೆಕ್ ಅನ್ನು ಗೃಹಸಚಿವ ಅರಗ ಜ್ಞಾನೆಂದ್ರ ಅವರಿಗೆ ನೀಡಿದರು .
ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಬಂಧಿಸು ವಲ್ಲಿ ಯಶಸ್ವಿಯಾದ ಪೊಲೀಸ್ ಕಾರ್ಯಾಚರಣೆಗೆ ಸರ್ಕಾರ ಶಹಬ್ಬಾಸ್ ಹೇಳಿದೆ . ಅದೇ ವೇಳೆ , ಪೊಲೀಸ್ ಕಾರ್ಯಾಚರಣೆ ಪ್ರೋತ್ಸಾಹಿಸಲು 5 ಲಕ್ಷ ರೂ ಬಹುಮಾನ ಘೋಷಿಸಿದೆ . ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ , ಇದೊಂದು ಅಮಾನವೀಯ ಕೃತ್ಯ , ಮೈಸೂರು ಸಾಂಸ್ಕೃತಿಕ ನಗರಿ . ಕೃತ್ಯದ ಬಳಿಕ ಸಾಕಷ್ಟು ಆತಂಕ ವ್ಯಕ್ತವಾಗಿತ್ತು . ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ 5 ಲಕ್ಷ ಬಹುಮಾನ ನೀಡಲಾಗುವುದು ಎಂದರು . ಪೊಲೀಸರು ಪ್ರಕರಣ ಭೇದಿಸುತ್ತಾರೆ ಎಂಬ ವಿಶ್ವಾಸ ಆ ವಿತ್ತು . ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬ ಸಂದೇಶ ತ ವನ್ನು ಪೊಲೀಸರು ಕೊಟ್ಟಿದ್ದಾರೆ . ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ತಮಿಳುನಾಡಿನಿಂದ ನಿತ , ಮೈಸೂರಿಗೆ ಬಂದು ಹೊಗುತ್ತಿದ್ದರು ಎಂಬ ಮಾಹಿತಿಯೂ ಇದೆ . ಸಂತ್ರಸೆಯಹೇಳಿಕೆ ಪಡೆಯುವ ಸಂಬಂಧ ಆಕೆಯು ಮನೆಯ ಸದಸ್ಯರನ್ನು ಮನವೊಲಿಸಲಾಗುತ್ತಿದೆ ಎಂದರು . ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಆಗಬೇಕು . ಸಂತ್ರಸ್ತೆ ಇನ್ನೂ ಆಘಾತದಲ್ಲಿ ಪಡೆಯಲು ಸಾಧ್ಯವಾಗಿಲ್ಲ . ಈ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು ಕಾಲಿಗೆ ನೆಲೆಯಲ್ಲಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ ಎಂದರು . ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಗಸ್ತು ಹೇಚಿಸಲಾಗುವುದು , ಸಂಜೆ ಗಂಟಲರು ನಂತರ ಹೆಚ್ಚಿನ ಭದ್ರತೆ ಒದಗಿಸಲಾಗುವುದು . ಜನರಿಗೆ ತೊಂದರೆ ಆಗದಂತೆ ರಕ್ಷಣೆ ನೀಡಲಾಗುವುದು . ಮೈಸೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ . ತಮಿಳುನಾಡು , ಕೆರಳದಿಂದ ಸಂಖ್ಯೆಯೂ ಜಾಸ್ತಿ ಇದೆ . ಗಡಿ ಭಾಗದಲ್ಲಿ ಬರುವವರು , ಹೋಗುವವರನ್ನು ತಡೆಯಲು ಸಾಧ್ಯವಿಲ್ಲ ಎಂದರು .