ಮೈಸೂರು ನಗರದ ಕೆ.ಆರ್.ಮಿಲ್ ಕಾಲೇನಿಯ ಬೆಲ್ಲವತ್ತ ಬಳಿ ಇರಿವಂತಹ ಖಾಸಗಿ ಹೋಟೆಲ್ನಲ್ಲಿ ತಾಲೋಕು ಪಂಚಾಯಿತಿ ಚುನಾವಣೆಯ ಸಂಬಂದ ಕೆರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೇಸ್ ಮುಖಂಡ ಹಾಗೂ ಸಿದ್ದರಾಮಯ್ಯ ಆಪ್ತರಾದ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರಿಗೌಡ ಕೆ. ಮರೀಗೌಡ ಮತಾನಾಡಿ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತವನ್ನು ಒಪ್ಪಿ ಸೇಪರ್ಡೆಯಾಗಬೇಕೆ ವಿನಃ ಷರತ್ತು ವಿಧಿಸಿ ಬರುವುದಲ್ಲ. ಸಿದ್ದರಾಮಯ್ಯ ಕೂಡ ಜೆಡಿಎಸ್ನಿಂದ ಹೊರಬಂದು ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಸೇರಿ, ಕಾಂಗ್ರೇಸ್ ಪಕ್ಷ ಸಂಘಟಿಸಿ ಮುಖ್ಯಮಂತ್ರಿಯಾದರು ಎಂದು ಅವರು ಪರೋಕ್ಷವಾಗಿ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಎಚ್ಚರಿಕೆ ನೀಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಲೆ ಇದ್ದು ಕಾಂಗ್ರೆಸ್ನಲ್ಲಿ ಪಕ್ಷದ ಸಿದ್ಧಾಂತ ಮುಖ್ಯವೇ ಹೊರತು ಯಾವುದೆ ವ್ಯಕ್ತಿ ಮುಖ್ಯಅಲ್ಲ. ಆದ್ದರಿಂದ ಕಾರ್ಯಕರ್ತರು ಪಕ್ಷದ ಸಂಘಟನೆಗೆ ಆದ್ಯತೆ ನೀಡಬೇಕು. ಎಂತಹ ಸಂದರ್ಭ ಬಂದರೂ ಪಕ್ಷ ನಿಮ್ಮೊಂದಿಗೆ ಇರಲಿದೆ. ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿರುವ ಕಾಂಗ್ರೆಸ್ಗೆ ೧೩೫ ವರ್ಷಗಳ ಇತಿಹಾಸವಿದೆ ಎಂದರು.