ಪಿರಿಯಾಪಟ್ಟಣ: ಐಚನಹಳ್ಳಿ ಗ್ರಾಮದ ವೆಂಕಟೇಶ್ ನಾಯಕ್ ಎಂಬವರು ಎಂದಿನಂತೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಮಯದಲ್ಲ್ಲಿ, ಅವರ ಜಮೀನಿನ ಪೊದೆಯಲ್ಲಿ ಅಡಗಿದ್ದ ಕಾಡುಹಂದಿ ಹಠತ್ ದಾಳಿ ಅವರ ಮಾಡಿ ಕೈ ಮುಖ ಹೊಟ್ಟೆ ಭಾಗಗಳಿಗೆ ಗಾಯಗೊಳಿಸಿ, ವೆಂಕಟೇಶ್ ನಾಯಕ್ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿರುವ ಘಟನೆ ನಡೆದಿದೆ. ಅವರನ್ನು ಹನಗೋಡು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಕಾಡುಹಂದಿ ದಾಳಿ ಮಾಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಸರ್ಕಾರದಿಂದ ಮತ್ತು ಅರಣ್ಯ ಇಲಾಖೆಯವರು ಹಣಕಾಸು ಸೌಲಭ್ಯವನ್ನು ನೀಡಬೇಕೆಂದು, ಭಾರತೀಯ ಕಿಸಾನ್ ಸಂಘದ ತಾಲ್ಲೂಕು ಅಧ್ಯಕ್ಷ ಚಂದ್ರೇಗೌಡ ಆಗ್ರಹಿಸಿದ್ದಾರೆ, ವಲಯ ಅರಣ್ಯ ಇಲಾಖೆ ಅಧಿಕಾರಿ ಮತ್ತು ತಹಸಿಲ್ದಾರರಿಗೆ ಮನವಿ ಪತ್ರ ನೀಡಿ ಕೂಡಲೇ ದಾಳಿಗೊಳಗಾದ ವೆಂಕಟೇಶ್ ಅವರಿಗೆ ಆರ್ಥಿಕ ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಕಾರ್ಯದರ್ಶಿ ಗಣೇಶ್ ಹಾಜರಿದ್ದರು.