ಬೆಂಗಳೂರಿನಲ್ಲಿದ್ದರೂ ಚೆನ್ನೈಗೆ ಹೋಗ್ತಿದ್ದೇನೆ ಎಂದು ಸುಳ್ಳು ಹೇಳಿದ್ದ ಸೊಸೆ: ಒಐಂ ಪುತ್ರ, ಭಾವಿ ಸೊಸೆ ಸೇರಿ 7 ಜನಸಾವು

ಬೆಂಗಳೂರು:- ತಂದೆ ತಾಯಿಗೆ ಬಿಂದು ಸುಳ್ಳು ಹೇಳಿದ್ದಳು. ಬೆಂಗಳೂರಿನಲ್ಲಿ ಇದ್ದರೂ ಚೆನ್ನೈಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಳು .


ಸಿಸಿಕಾನ್ ಸಿಟಿ ಬೆಂಗಳೂರಿನ ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ನಡೆದ ಆಡಿ ಕಾರು ಅಪಘಾತದಲ್ಲಿ ತಮಿಳುನಾಡಿನ ಶಾಸಕನ ಪುತ, ಭಾವಿ ಸೊಸೆ ಸೇರಿದಂತೆ ಏಳು ಮಂದಿ ಸಾವಿಗೀಡಾದ ದುರ್ಘಟನೆ ನಿನ್ನೆ ರಾತ್ರಿ ನಡೆದಿದೆ.
ಈ ಭೀಕರ ಅಪಘಾತದಲ್ಲಿ7 ಮಂದಿ ಸಾವನ್ನಪ್ಪಿದ್ದು, ಇದರಲ್ಲಿ ತಮಿಳುನಾಡಿನ ಶಾಸಕರ ಪುತ್ರ ಹಾಗೂ ಒಐಂ ಪುತ್ರ, ಭಾವಿ ಸೊಸೆ ಸೇರಿ ೭ ಜನ ಸಾವಿಗೆ ಬಲಿಯಾಗಿದ್ದಾರೆ.


ತಮಿಳುನಾಡಿನಿಂದ ಬೆಂಗಳೂರಿಗೆ ವೇಗವಾಗಿ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಯಾರೂ ಕೂಡ ಬೆಲ್ಟ್ ಹಾಕಿಕೊಳ್ಳದ ಕಾರಣ ಏರ್ ಬ್ಯಾಗ್ ಓಪನ್ ಆಗದೆ ಸಾವಿಗಿಡಾಗಿದ್ದಾರೆ. ಎರಡು ಟಯರ್ಗಳು ಚೂರು ಚೂರಾಗಿದೆ


ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ಶಾಸಕ ಪ್ರಕಾಶ್ ಎಂಬುವರ ಪುತ್ರ ಕರುಣಾ ಸಾಗರ್, ಭಾವಿ ಸೊಸೆ ಬಿಂದು, ಕೇರಳದ ಅಕ್ಷಯ್ ಗೋಯಲ್, ಹರಿಯಾಣ ಮೂಲದ ಉತ್ಸವ್, ಹುಬ್ಬಳ್ಳಿಯ ರೋಹಿತ್ ಹಾಗೂ ಡಾ.ಧನುಶಾ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *