ಅಧಿಕಾರಿ ಹಠಾವೋ ಹಿಂದೂ ದೇವಸ್ಥಾನ ಬಚಾವೋ

ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಸಾಮೂಹಿಕ ನಮಸ್ಕಾರ ಮಾಡುವ ಮೂಲಕ ದೇವಸ್ಥಾನ ಸಂಹಾರ ಕೈಬಿಡಿ ಎಂದ ಮೈಸೂರು ಪ್ರಜ್ಞಾವಂತ ನಾಗರೀಕರ ವೇದಿಕೆ ಪದಾಧಿಕಾರಿಗಳು

ಮೈಸೂರಿನಲ್ಲಿ ಸುಪ್ರೀಂ‌ಕೋರ್ಟ್ ತೀರ್ಪಿನಂತೆ ಮೈಸೂರಿನ ನಗರದಲ್ಲಿ ಪಟ್ಟಿ ಮಾಡಿರುವ 92 ದೇವಸ್ಥಾನಗಳ ನೆಲಸಮ ಕೆಲಸವನ್ನ ಹಿಂಪಡೆಯುವಂತೆ ಮೈಸೂರು ಪ್ರಜ್ಞಾವಂತ ನಾಗರೀಕರ ವೇದಿಕೆ ವತಿಯಿಂದ ಅಗ್ರಹಾರ ೧೦೧ ಗಣಪತಿ ದೇವಸ್ಥಾನದ ಮುಂಭಾಗ ಪದಾಧಿಕಾರಿಗಳು ಸಾಮೂಹಿಕ ನಮಸ್ಕಾರ ಮಾಡುವ ಮೂಲಕ ಮೈಸೂರಿನ ಜನಪ್ರತಿನಿಧಿಗಳಲ್ಲಿ ಮತ್ತು ಅಧಿಕಾರಿಗಳಲ್ಲಿ ಮನವಿ ಮಾಡಿದರು,

ಇದೇ ಸಂಧರ್ಭದಲ್ಲಿ ಮಾಜಿ ನಗರಪಾಲಿಕೆ ಸದಸ್ಯ ಎಂ.ಡಿ ಪಾರ್ಥಸಾರಥಿ ಮಾತನಾಡಿ ಜನರ ನಂಬಿಕೆ ಭಾವನೆಗೆ ದಕ್ಕೆ ಬರದಂತೆ ಆಡಳಿತ ನೀಡುವುದು ಸರ್ಕಾರದ ಕರ್ತವ್ಯ, ಭಾರತಕ್ಕೆ ದಂಡಯಾತ್ರೆ ಬಂದು ನಾಶ ಮಾಡಿದ ಮೊಹಮ್ಮದ್ ಗಜನಿ ಮತ್ತ ಬ್ರಿಟೀಷರ ದಬ್ಬಾಳಿಕೆ ತರಹ ಆಳ್ವಿಕೆಯಿದೆಯೋ ಅಥವಾ ಪ್ರಜಾಪ್ರಭುತ್ವ ಆಡಳಿಯವಿದೆಯೋ ಎಂಬ ಪ್ರಶ್ನೆ ಕಾಡುತ್ತಿದೆ, ಪುರಾತನ ದೇವಸ್ಥಾನ ಗುಡಿ ಗೋಪುರ ಕೆಡವಿದರೆ ಹಿಂದೂ ಧರ್ಮವನ್ನ ಸರ್ವನಾಶ ಮಾಡಿದಂತೆ ಎಂದರು,

ನಂತರ ಮಹಿಳಾ ಮುಖಂಡರಾದ ರೇಣುಕಾ ರಾಜ್ ರವರು ಮಾತನಾಡಿ ಅಗ್ರಹಾರ ಬಡಾವಣೆಗಳು ಧಾರ್ಮಿಕ ಕೇಂದ್ರಗಳಾಗಿದ್ದವು ಭಜನೆ ಸಾಂಸ್ಕೃತಿಕ ಕಾರ್ಯಕ್ರಮಗಳು ದೇವಸ್ಥಾನಗಳಲ್ಲಿ ಪೂಜಾಪುನಸ್ಕಾರ ಹಲವಾರು ಜನರಿಗೆ ಮನಶಕ್ತಿ ಆತ್ಮಸ್ಥೈರ್ಯ ನೀಡುತ್ತದೆ ಹಾಗಾಗಿ ದೇವಸ್ಥಾನಗಳನ್ನು ಕೆಡವಲು ಮುಂದಾಗಬಾರದು ಅದಕ್ಕಾಗಿ ಸಾಮೂಹಿಕ ನಮಸ್ಕಾರ ಮಾಡುವ ಮೂಲಕ ಮನವಿ ಮಾಡಲಾಗುತ್ತಿದೆ ಎಂದರು
ಮಾಜಿ ನಗರ ಪಾಲಿಕಾ ಸದಸ್ಯರಾದ ಎಂ ಡಿ ಪಾರ್ಥಸಾರಥಿ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮದ ನಿರ್ದೇಶಕರಾದ ರೇಣುಕರಾಜ ,ಮೃಗಾಲಯ ಪ್ರಾಧಿಕಾರ ಸದಸ್ಯರಾದ ಜ್ಯೋತಿ ರಚನಾ ,ನಾಗಮಣಿ ,ಮಹೇಂದ್ರ ಸಿಂಗ್ ಕಾಳಪ್ಪ ,ವಿಕ್ರಂ ಅಯ್ಯಂಗಾರ್,ಅಜಯ್ ಶಾಸ್ತ್ರಿ ,ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಲೋಹಿತ್ , ಲಯನ್ ಸುರೇಶ್ , ಮಹೇಂದ್ರ ಶೈವ ,ಕೃಷ್ಣರಾಜ ಯುವಬಳಗದ ನವೀನ್ ಕೆಂಪಿ ,
ರಂಗಸ್ವಾಮಿ ,ಕಡಕೊಳ ಜಗದೀಶ್ ,ಬಸವರಾಜ್ ಬಸಪ್ಪ , ಸುಚೇಂದ್ರ ಹಾಗೂ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *