ಸಿಆರ್ ಮೈದಾನದಲ್ಲಿ ರೌಡಿಶೀಟರ್‌ಗಳ ಪರೇಡ್

ಮೈಸೂರು: ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗಿದ್ದ ನಗರದ 300ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಕರೆಸಿದ ನಗರ ಪೊಲೀಸರು ಎಚ್ಚರಿಕೆ ನೀಡಿದರು.

ದಸರಾ ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ವರದಿಯಾಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರ ನೇತೃತ್ವದಲ್ಲಿ ರೌಡಿಶೀಟರ್‌ಗಳ ಪರೇಡ್ ನಡೆಯಿತು. 

ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತರು, ನಗರದ ವಿವಿಧ  ಪೊಲೀಸ್ ಠಾಣೆಗಳಲ್ಲಿ ಇದುವರೆಗೂ ದಾಖಲಾಗಿರುವ ರೌಡಿ ಶೀಟರ್‌ಗಳ ಚಲನವಲನ ಗುರುತಿಸಲು ಪರೇಡ್ ನಡೆಸಲಾಗಿದೆ. ಸಾರ್ವಜನಕರಿಗೆ ಉಪದ್ರ ಕೊಡುತ್ತಿರುವರೇ? ಆದಾಯದ ಮೂಲ ಏನು? ಅಡ್ಡ ದಾರಿ ಹಿಡಿದಿರುವರೇ? ಎಂಬಿತ್ಯಾದಿ ಹಲವು ಮಾಹಿತಿ ಪಡೆಯಲಾಗಿದೆ ಎಂದರು.

ಸುಮಾರು ೩೦೦ಕ್ಕೂ ಹೆಚ್ಚು ರೌಡಿ ಶೀಟರ್ ಇದ್ದಾರೆ. ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಜೀವನ ಬದಲಾಯಿಸಿಕೊಳ್ಳಲು, ಕುಟುಂಬದ ಕಡೆ ಗಮನಹರಿಸಲು ತಿಳವಳಿಕೆ ಕೊಟ್ಟಿದ್ದೆವೆ. ಯಾವುದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗದಂತೆ ಎಚ್ಚರಿಸಲಾಗಿದೆ ಎಂದು ತಿಳಿಸಿದರು. 

ಮೂರು ತಿಂಗಳಿಗೊಮ್ಮೆ ರೌಡಿ ಶೀಟರ್‌ಗಳ ಪೆರೇಡ್ ನಡೆಸಲಾಗುತ್ತದೆ. ಠಾಣಾ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ರೌಡಿಶೀಟರ್‌ಗಳ ಕರೆದು ಪರಿಶೀಲನೆ ನಡೆಸಲಾಗುತ್ತದೆ. ಅದು ನಿರಂತರ ಪ್ರಕ್ರಿಯೆ.  ಕ್ರೈಂ ರೇಟ್ ಅನ್ನು ಒಂದು ಪ್ರಕರಣದಿಂದ ಅಳೆಯಲು ಸಾಧ್ಯವಿಲ್ಲ. ದಸರಾ ಹಿನ್ನಲೆಯಲ್ಲಿ ನಿಗಾವಹಿಸಲು  ರೌಡಿಗಳ ಪೇರೆಡ್ ನಡೆಸಿದ್ದೆವೆ ಎಂದು ಹೇಳಿದರು.