ಮೈಸೂರು , ನ .12 : – ಮೈಸೂರು ನಗರದಲ್ಲಿ ನಿನ್ನೆ ರಾತ್ರಿ ಮತ್ತು ಇಂದು ಬೆಳಿಗ್ಗೆ ಮಳೆ ಸುರಿದಿದೆ . ಇಂದು ಬೆಳಿಗ್ಗೆ ರಾಜ್ ಕುಮಾರ್ ಉದ್ಯಾನವನದ ಬಳಿ ಮರವೊಂದು ಉರುಳಿಬಿದ್ದ ಪರಿಣಾಮ ಎರಡು ಕಾರು , ಒಂದು ಗೂಡ್ಸ್ ಟೆಂಪೋ ಹಾನಿಗೊಳಗಾದ ಘಟನೆ ನಗರದ ಶ್ರೀಹರ್ಷ ರಸ್ತೆಯಲ್ಲಿ ನಡೆದಿದೆ.

ಮೈಸೂರಿನಲ್ಲಿ ನಿನ್ನೆ ರಾತ್ರಿಯಿಂದ ಇಂದು ಬೆಳಿಗ್ಗೆ ಸುಮಾರು ಹತ್ತು ಗಂಟೆಯವರೆಗೂ ಮಳೆ ಹನಿಹನಿಯಾಗಿ ಜಿನುಗುತ್ತಲೇ ಇತ್ತು , ಆರ್ ಆರ್ ಆರ್ ಹೋಟೆಲ್ ಎದುರು ನಿಲ್ಲಿಸಲಾಗಿದ್ದ ಎರಡು ಕಾರು ಮತ್ತು ಒಂದು ಗೂಡ್ಸ್ ಟೆಂಪೋ ಮೇಲೆ ಮರ ಉರುಳಿ ಬಿದ್ದಿದ ಸಂಪೂರ್ಣ ನಜ್ಜುಗುಜ್ಜಾಗಿದೆ . ಕಾರಿನಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ : ಮರ ಬಿದ್ದ ರಭಸಕ್ಕೆ ವಿದ್ಯು ಬಿದ್ದಿದ್ದು , ಕೂಡಲೇ ಚೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಕಡಿತಗೊಳಿಸಿ ದುರಸ್ತಿ ಕಾರ್ಯ ನಿರ್ವಹಿಸಿದ್ದಾರೆ . ವಿಷಯ ತಿಳಿಯುತ್ತಿದ್ದಂತೆ ಪಾಲಿಕೆಯ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಮರವನ್ನು ತೆರವುಗೊಳಿಸಿದ್ದಾರೆ .

ನಿನ್ನೆ ರಾತ್ರಿ ಕೂಡ ನಂಜನಗೂಡು ರಸ್ತೆಯಲ್ಲಿರುವ ಅಪೇರಾ ಚಿತ್ರಮಂದಿರದ ಬಳಿ ಬೃಹತ್ ಮರವೊಂದು ರಸ್ತೆ ಬದಿಯಲ್ಲಿ ನಿಂತಿದ್ದ 3 ಕಾರು- 2 ಬೈಕ್ ಗ ಬೈಕ್ ಸಂಪೂರ್ಣ ಜಖಂಗೊಂಡಿದೆ . ವ್ಯಕ್ತಿಯೋರ್ವರು ಗಾಯಗೊಂಡಿದ್ದಾರೆ . ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿ ಪಾಲಿಕೆಯ ಅಭಯ ತಂಡ ಸ್ಥಳಕ್ಕೆ ಧಾವಿಸಿ ಮರವನ್ನು ತೆರವುಗೊಳಿಸಿದೆ .