ಮೈಸೂರು : ಇತ್ತೀಚಿನ ದಿನಗಳಲ್ಲಿ ಕಾನೂನು ಸದುಪಯೋಗಕ್ಕಿಂತ ದುರುಪಯೋಗ ಪಡಿಸಿ ಕೊಳ್ಳುವವರೇ ಹೆಚ್ಚಾಗುತ್ತಿದ್ದಾರೆ . ಇದರಿಂದ ಸುಳ್ಳು ಪ್ರಕರಣಗಳು ದಾಖಲಾಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸುಂದರ್ರಾಜ್ ತಿಳಿಸಿದರು . ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ , ವಕೀಲರ ಸಂಘ ಮತ್ತು ಮೈಸೂರು ನಗರ ಕೃಷ್ಣ ರಾಜ ಪೊಲೀಸ್ ಠಾಣೆಯ ಸಂಯುಕ್ತಾಶ್ರಯ ದಲ್ಲಿ ಶ್ರೀ ನಟರಾಜ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು- ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು , ದೇಶದಲ್ಲಿ w ಶೇ .2 ರಷ್ಟು ಜನರು ಮಾತ್ರ ಕಾನೂನು ಅರಿವನ್ನು ಹೊಂದಿದ್ದಾರೆ . ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕನಿಷ್ಠ ಕಾನೂನು ಅರಿವನ್ನು ಹೊಂದಿರಬೇಕು ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು . ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲು ಸುಮಾರು 34 ಕಾನೂನುಗಳಿವೆ . ಮಹಿಳೆಗೆ ಸಮಾಜದಲ್ಲಿ ಸಿಗಬೇಕಾದ ಗೌರವ ಸಿಗಬೇಕು ಎಂಬ ಜ್ಞಾನ . ಈ ಬಗ್ಗೆ ವಿದ್ಯಾರ್ಥಿ ಹಂತದಲ್ಲೇ ತಿಳಿದು ಕೊಳಬೇಕು ಎಂದು ಸಲಹೆ ನೀಡಿದರು . ನಗರ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಮಾತನಾಡಿದರು . ಕಾಲೇಜು ಪ್ರಾಂಶುಪಾಲ ರಾದ ವಿ.ಡಿ.ಸುನೀತಾರಾಣಿ , ಪೊಲೀಸ್ ಉಪ ನಿರೀಕಕ ಮಹಾವೀರ ಬೆಳಗಿ , ಗೌರಿಶಂಕರ ನಂದಿ 3 ಧ್ವಜ ಸಂಘದ ಅಧ್ಯಕ್ಷ ಮಹದೇವಪ್ಪ ಉಡಿಗಾಲ ಉಪಸ್ಥಿತರಿದ್ದರು . ನಿಲುವಿನಲ್ಲಿ ಇವು ಪ್ರತಿಪಾದಿಸುತ್ತವೆ . ತಂದೆ ತಾಯಿ ಸಮತಿ ಇಲ್ಲದ ಆಗುವ ಮದುವೆಯ ಹುಡುಗಿಯ ವಯಸ್ಸು 21 ಆಗಿರಬೇಕು , 18 ವರ್ಷದ ಒಳಗಿನ ಮಕ್ಕಳು ವಾಹನ ಚಾಲನೆ ಮಾಡುವಂತಿಲ್ಲ . 18 ವರ್ಷದೊಳಗಿನ ಮಕ್ಕ ಳೊಂದಿಗೆ ಅನುಚಿತ ವರ್ತನ ತೋರಿದರೆ ಪೋಕೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖ ಲಾಗುತ್ತದೆ ಎಂಬಿತ್ಯಾದಿ ಮಾಹಿತಿಗಳು ಕನಿಷ್ಠ ಹೊಂದಿರಬೇಕು ಎಂದು ಹೇಳಿದರು