ಲೋಕಾ ಅದಾಲತ್ ಇತಿಹಾಸದಲ್ಲಿ ಮೈಸೂರಿನಲ್ಲಿ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ

ನಗರದ ಹೊಸ ಕೋರ್ಟ್ ನ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ಕಾರ್ಯಕ್ರಮದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ದಾಂಪತ್ಯ ಜೀವನ ಕೊನೆಗಳಿಸಲು ಮುಂದಾಗಿದ್ದ ಜೋಡಿಗಳು.

 .ದಂಪತಿಗಳನ್ನ ಒಂದು ಮಾಡಿ ಹೊಸ ಜೀವನ ರೂಪಿಸಿಕೊಳ್ಳಲು ನಡೆಸಿದ  ಕಾರ್ಯಕ್ರಮದಲ್ಲಿ ಸುಮಾರು‌ 30ಕ್ಕೂ‌ಹೆಚ್ಚು ದಂಪತಿಗಳನ್ನ ಒಂದು‌ ಮಾಡಿದ ಕೌಟುಂಬಿಕ ನ್ಯಾಯಾಲಯ ಹಾಗೂ ಜಿಲ್ಲಾ ಅಪರ ಹಾಗೂ ಸತ್ರ ನ್ಯಾಯಾಧೀಶರಾದ ರಘುನಾಥ್ ರವರು ದಾಂಪತ್ಯ ಜೀವನ ಕುರಿತ ಪುಸ್ತಕ ನೀಡಿ ತಿಳಿ ಹೇಳೀದರು

ಒಂದಾದ ದಂಪತಿಗಳಿಗೆ ಮುಂದಿನ ಜೀವನ ಸುಖಕರವಾಗಿರಲಿ  ಹಾಗೆ ಮಕ್ಕಳ ಮೇಲೆ ನಿಮ್ಮ ಜಗಳಗಳ ಪರಿಣಾಮ ಬೀರದಿರಲಿ, ಎಂದು ಪರಸ್ಪರ ದಂಪತಿಗಳಿಗೆ ಸಿಹಿ ಹಂಚುವ  ಮೂಲಕ  ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಧೀಶ ದೇವರಾಜ ಭೂತೆ  , ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರು ಸೇರಿದಂತೆ ಪ್ರಮುಖರು ಭಾಗಿಯಾಗಿದ್ದರು.