ಮೈಸೂರು ಮೃಗಾಲಯದಿಂದ ಪ್ರಾಣಿಗಳ ದತ್ತು ಸ್ವೀಕಾರ

ಬೆಂಗಳೂರು: ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿ ಮೃಗಾಲಯದ ಪ್ರಾಣಿ ಪಕ್ಷಿಗಳನ್ನು ನಿಗಧಿಪಡಿಸಿರುವ ಶುಲ್ಕವನ್ನು ಪಾವತಿಸಿ ವಿವಿಧ ಪ್ರಾಣಿಪಕ್ಷಿಗಳನ್ನು ದಾನಿಗಳು ದತ್ತುಪಡೆದಿದ್ದಾರೆ.

“ಲವ್ ಬರ್ಡ್” ಬೆಂಗಳೂರಿನ ಸೋಮು.ಎಂ, “ರೆಡ್ ಅವಡಾವಿಟ್” ಬಿ.ಎನ್.ಸುಂದರೇಶ, “ಬಡ್‍ಜರಿಗರ್” ಮೋಹನ್ ರಾಜ್ ಮತ್ತು ನವ್ಯ ರಾಜು, “ರೇಡ್ ಅವಾಡವಿಟ್” ಅಭಿಗ್ನ, “ಗೋಲ್ಡನ್ ಜಾಕಲ್” ಪೃಥ್ವಿ ಮತ್ತು ನವ್ಯ, “ನಾಗರ ಹಾವು” ಮೈಸೂರಿನ ರಾಜಶೇಖರ್, “ಕಾಮನ್ ಪೀಫೌಲ್” ಮಾಲಾ ದಿನೇಶ್, “ಹಿಮಾಲಯನ್ ಗೋರಾಲ್” ಎಸ್.ದಿನೇಶ್, “ಇಂಡಿಯನ್ ಲೆಪರ್ಡ್,ಕಾಳಿಂಗ ಸರ್ಪ ಮತ್ತು ಲವ್ ಬರ್ಡ್” ಬಿ ಮೀನಾ ಅಪ್ಪಚ್ಚು, “ಕಾಳಿಂಗ ಸರ್ಪ” ವನ್ನು ಅರ್ನಾ ಚಂದ್ರ ಬಿ.ಎ ಅವರು ಪಡೆದಿದ್ದಾರೆ.

ಇನ್ನು “ಲವ್ ಬರ್ಡ್” ಶ್ರೀಕರ್ ಕೆ.ಆರ್, “ಸಾಲ್ಟ್ ವಾಟರ್ ಮೊಸಳೆ” ಯನ್ನು ವಿನಯ್ ಕೌಶಿಕ್ ಎಸ್, “ನಾಗರ ಹಾವು ಮತ್ತು ಪೀಫೌಲ್-2” ನ್ನು ಬಿ.ಎಸ್.ರವಿಬಾಬು, “ಲೆಪರ್ಡ್ ಕ್ಯಾಟ್”ನ್ನು ಸದಾನಂದ ಶೆಟ್ಟಿ ಮತ್ತು ಸರಸ್ತತಿ ಡಿ.ಎನ್, “ಗ್ರೇಟ್ ವೈಟ್ ಪೇಲಿಕನ್”  ಜಗದೀಶ್ ಎಸ್.ಎಚ್, “ನವಿಲು” ಅನ್ನು ಡಾ.ಎಂ. ಮಹದೇವಯ್ಯ, “ಇಂಡಿಯನ್ ಲೆಪರ್ಡ್” ಮೈಸೂರು ಜಿಲ್ಲೆ ಬಲಿಜಾ ಸಮಾಜ, “ಸ್ಪಾಟೆಡ್ ವಿಸ್ಲಿಂಗ್ ಡಕ್” ರಾಹುಲ್ ಡಿ ಯಜಮಾನ್, “ಎಕ್ಲೆಕ್ಟಸ್ ಗಿಳಿ”ಯನ್ನು ವಿದ್ಯಾ.ಎಂ, “ನೀಲಿ ನವಿಲು” ಅನ್ನು ಡಾ.ಎಂ.ಮಹೇಶ್, “ಗೋಲ್ಡನ್ ಫೆಸೆಂಟ್” ತವರೇಕೆರೆಯ ಸರಿತ ನಿಷಾದ್, “ಬಿಳಿ ನವಿಲು” ಅನ್ನು ತುಮಕೂರಿನ ಮನ್ವಿತ್ ರಾಜ್, “ಕೆಂಪು ನೇಕಡ್ ವಲ್ಲಭಿ”ಯನ್ನು ಮಹಾರಾಷ್ಟ್ರದ ಸೀನ ಅನಂತ್ ರಾವ್ ಪಂಚಾಲ್ ಅವರು ದತ್ತು ಪಡೆದಿರುವುದಾಗಿ ಶ್ರೀಚಾಮರಾಜೇಂದ್ರ ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *