
ಕರ್ನಾಟಕ ಸೇನಾ ಪಡೆ ವತಿಯಿಂದ ಮೈಸೂರಿನ ವಲಯ ಕಛೇರಿ 1 ರ ಆವರಣದಲ್ಲಿ, ಆಧುನಿಕ ಬೆಂಗಳೂರು ನಿರ್ಮಾತ, ಹಲವಾರು ಕೆರೆ ಕಟ್ಟೆಗಳನ್ನು ನಿರ್ಮಿಸಿದ ನಾಡಪ್ರಭು ಶ್ರೀ ಕೆಂಪೇಗೌಡ ರವರ ಜಯಂತಿ ಕಾರ್ಯಕ್ರಮ ವನ್ನು ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ರಾದ ಶ್ರೀ ಹೇಮಂತ ಕುಮಾರ್ ಗೌಡ ರವರು ಉದ್ಘಾಟಿಸಿ, ಪುಷ್ಪಾರ್ಚಾನೆ ಮಾಡಿ ಮಾತನಾಡಿ
ವೇಗವಾಗಿ ಬೆಳೆಯುತ್ತಿರುವ ರಾಜ್ಯ ರಾಜಧಾನಿ ಬೆಂಗಳೂರು ಸುರಕ್ಷಿತ ಮತ್ತು ಆಹ್ಲಾದಕರ ವಾತಾವರಣದ ಸ್ಥಳದಲ್ಲಿ ನಿರ್ಮಾಣಗೊಂಡಿದ್ದು, ಇಲ್ಲಿ ಎಲ್ಲ ಜಾತಿ, ಮತ, ಪಂಥ, ಧರ್ಮದ ಜನರು ಬದುಕು ಕಟ್ಟಿಕೊಳ್ಳಲು ಕೆಂಪೇಗೌಡರು ಕಾರಣ . ಇಂಥ ಸುಂದರ, ಸುಸಜ್ಜಿತ ನಗರ ನಿರ್ಮಾಣವಾಗಲು ಶ್ರೀ ಕೆಂಪೇಗೌಡರ ವಿವೇಚನೆ ಮತ್ತು ದೂರದೃಷ್ಟಿಯೇ ಕಾರಣ.

ಕರ್ನಾಟಕದ ರಾಜಧಾನಿ ಬೆಂಗಳೂರು ವಿಶಾಲವಾಗಿ ಬೆಳೆಯಲು ತಳಹದಿ ಹಾಕಿದವರೇ ಕೆಂಪೇಗೌಡರು. ಇವರ ಆಡಳಿತದ ಅವಧಿಯಲ್ಲಿ ನೂರಾರು ಕೆರೆ ಕಟ್ಟೆಗಳು ಗುಡಿ ಗೋಪುರಗಳು ಅಗ್ರಹಾರ ನಿರ್ಮಿಸಿದ್ದಾರೆ, ವ್ಯವಸ್ಥಿತವಾದ ಮಾರುಕಟ್ಟೆಗಳು ನಿರ್ಮಾಣಗೊಂಡಿವೆ. ಅವರ ತತ್ವ ಮತ್ತು ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಇಂದಿನ ಬೆಂಗಳೂರು ದೇಶ ವಿದೇಶಿಗರಿಗೆ , ರಸ್ತೆಬದಿಯಿಂದ, ಮಾಲ್ ವರೆಗೂ ಆಶ್ರಯ ನೀಡಿದೆ ಎಂದರೆ ಸುಮಾರು 500 ವರ್ಷಗಳ ಹಿಂದೆ ಬೆಂಗಳೂರನ್ನು ನಿರ್ಮಿಸಿದ ಕೆಂಪೇಗೌಡರ ಶ್ರಮ ಹಾಗೂ ಕೊಡುಗೆ ಅಪಾರ, ಒಂದು ಕೆರೆಯಿಂದ ಇನ್ನೊಂದು ಕೆರೆಗೆ ನೀರು ಹರಿಯುವಂತೆ ರಾಜಕಾಲುವೆಗಳನ್ನು ನಿರ್ಮಿಸಿದ್ದರು, ಕನ್ನಡ ಭಾಷಾ ಮತ್ತು ಸ್ವದೇಶಿ ಉತ್ಪನ್ನ ರೈತಾಪಿ ಪ್ರಧಾನಕ್ಕೆ ಪ್ರೋತ್ಸಾಹ ನೀಡಿದ್ದವರು ಕೆಂಪೆಗೌಡರು ಎಂದರು.
ಕಾರ್ಯಕ್ರಮದಲ್ಲಿ ಮುಡಾ ಸದಸ್ಯರಾದ ಶ್ರೀಮತಿ ಲಕ್ಷ್ಮೀದೇವಿ ಮತ್ತು ಸಮಾಜ ಸೇವಕರಾದ ಡಾ. ರಘುರಾಂ ಕೆ ವಾಜಪೇಯಿ ರವರು ಅಲ್ಲಿ ನೆರೆದಿದ್ದವರಿಗೆ ಕೆಂಪೇಗೌಡ ಜಯಂತಿ ಅಂಗವಾಗಿ ಕೊರೊನಾ ಹರಡದಂತೆ ತಡೆಗಟ್ಟಲು ಮಾಸ್ಕ್ ಹಾಗು ಆರೋಗ್ಯಕ್ಕೆ ಬಾಳೆಹಣ್ಣು ವಿತರಿಸಿದರು. ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿ ಗಳಾಗಿ ಸಮಾಜ ಸೇವಕರಾದ ಎಂ ಎನ್, ದೊರೆಸ್ವಾಮಿ ರವರು, ನಾಡಪ್ರಭು ಕೆಂಪೇಗೌಡ ಸಂಘದ ಅಧ್ಯಕ್ಷರಾದ ಗಂಗಾಧರ, ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪತ್ರಕರ್ತ ಅನಿಲ್ ಕುಮಾರ್, ಮಹೇಂದ್ರ ಸಿಂಗ್ ಕಾಳಪ್ಪ, ಜೀವಧಾರ ಬ್ಲಡ್ ಬ್ಯಾಂಕ್ ನ ಗಿರೀಶ್, ವಿಕ್ರಮ್ ಅಯ್ಯಂಗಾರ್, ಡಾ ಶಾಂತರಾಜೇಅರಸ್, ಕುಮಾರ್ ಗೌಡ, ಬಸವರಾಜು, ಎಳನೀರು ರಾಮಣ್ಣ, ದರ್ಶನ್ ಗೌಡ, ಮಂಜುನಾಥ್ ಚಂದ್ರು ಉಪಸ್ಥಿತರಿದ್ದರು.