ಸದಾ ಹಸಿರು ನಮ್ಮ ಮೈಸೂರು” ನಾದಬ್ರಹ್ಮ ಹಂಸಲೇಖರ ಹುಟ್ಟು ಹಬ್ಬ ಆಚರಣೆ.


ಸಿ ಹೆಚ್ ವೈ ಕೆ ಸ್ಟುಡಿಯೋ ವತಿಯಿಂದ ನಾದಬ್ರಹ್ಮ ಹಂಸಲೇಖ ಅವರ ಹುಟ್ಟು ಹಬ್ಬದ ಪ್ರಯುಕ್ತ ಸದಾ ಹಸಿರು ಈ ನಮ್ಮ ಮೈಸೂರು 5000 ಸಸಿಗಳ ವಿತರಣೆ ಹಾಗೂ ರಸಸಂಜೆ ಕಾರ್ಯಕ್ರಮ ಮೈಸೂರಿನ ಕನಕದಾಸ ನಗರದಲ್ಲಿ ಜರುಗಿತು.ಈ ಸಂಧರ್ಭದಲ್ಲಿ ಗಿಡಕ್ಕೆ ನೀರೆರೆಯುವ ಮೂಲಕ ಗಣ್ಯರು ಉದ್ಘಾಟಿಸಿದರು.ಈ ಸಂಧರ್ಭದಲ್ಲಿ ಪರಿಷತ್ ಸದಸ್ಯರಾದ ಹೆಚ್ ವಿಶ್ವನಾಥ್,ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ,ಪಾಲಿಕೆ ಸದಸ್ಯರಾದ ಮಾ ವಿ ರಾಮಪ್ರಸಾದ್,ಪತ್ರಕರ್ತರ ಸಂಘದ ಅಧ್ಯಕ್ಷರಾದ ಆರ್ ರವಿಕುಮಾರ್ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚೆನ್ನಪ್ಪ,ಸಾಹಿತ್ಯ ಪರಿಷತ್ ಎಂ ಚಂದ್ರಶೇಖರ್ ,ರೇಷ್ಮೆ ಇಲಾಖೆ ನಿವೃತ್ತ ವ್ಯವಸ್ಥಾಪಕರಾದ ಲಿಂಗಯ್ಯ,ಆಯೋಜಕರುಗಳಾದ ವಕೀಲರೂ,ಗಾಯಕರೂ ಆದ ಚಂದ್ರಶೇಖರ್ ,ರಕ್ಷಿತ್ ಸೌಂಡ್ಸ್ ನ ಚಂದ್ರಶೇಖರ್ ,ಶ್ರೀ ಪೈಲ್ವಾನ್ ಕೃಷ್ಣ ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *