ಮೈ ಸೇವಾ ಫೌಂಡೇಷನ್ ವತಿಯಿಂದ ಮೃಗಾಲಯದ ಸಿಬ್ಬಂದಿಗೆ ತರಕಾರಿಯೊಂದಿಗೆ ಪಡಿತರ ಕಿಟ್

ಮೈಸೂರು 30 :- ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿನ ಸಿಬ್ಬಂದಿಗೆ ಮೈ ಸೇವಾ ಫೌಂಡೇಷನ್ವತಿಯಿಂದ ತರಕಾರಿಯೊಂದಿಗೆ ಪಡಿತರ ಕಿಟ್ ವಿತರಿಸಲಾಯಿತು.
ಮೃಗಾಲಯದ ಆವರಣದಲ್ಲಿ ಬುಧವಾರ ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಫೌಂಡೇಷನ್ನ ಅಧ್ಯಕ್ಷ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, 310 ಮಂದಿ ಸಿಬ್ಬಂದಿಗೆ ತಲಾ 10 ಕೆಜಿ ಅಕ್ಕಿ ಮತ್ತು 10 ಕೆಜಿ ತರಕಾರಿ ವಿತರಣೆ ಮಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜಾ-ಮಹಾರಾಜರ ಕಾಲದ ಇತಿಹಾಸವಿರುವ ಮೈಸೂರು ಚಾಮರಾಜೇಂದ್ರ ಮೃಗಾಲಯ ದೇಶ-ವಿದೇಶಗಳಲ್ಲಿ ಉತ್ತಮ ಹೆಸರಿದೆ ಎಂದು ಹೇಳಿದರು.
ಕೊರೊನಾ ಸಂಕಷ್ಟಕಾಲದಲ್ಲಿ ಪ್ರವಾಸಿಗರ ಕೊರತೆಯಿಂದ ನಷ್ಟದಲ್ಲಿರುವ ಮೃಗಾಲಯಗಳ ನೆರವಿಗೆ ಸಾರ್ವಜನಿಕರು ಸೇರಿದಂತೆ ಸಂಘ-ಸಂಸ್ಥೆಗಳು ಸ್ಪಂದಿಸುತ್ತಿರುವುದು ಮೆಚ್ಚುಗೆ ವಿಚಾರ .ಜತೆಗೆ ನಟ ದರ್ಶನ್ ಅವರು, ಪ್ರಾಣಿ ದತ್ತು ಪಡೆಯುವಂತೆ ಕರೆ ನೀಡಿದ್ದರಿಂದ ಸಾವಿರಾರು ಮಂದಿಗೆ ದತ್ತ ಪಡೆದು ಕೋಟ್ಯಾಂತರ ರೂ. ಆದಾಯ ಬಂದಿದೆ.
ಇದರೊಂದಿಗೆ ರಾಜ್ಯದಲ್ಲಿರುವ ಮೃಗಾಲಯಗಳ ಅಭಿವೃದ್ದಿಮತ್ತು ಆರ್ಥಿಕ ಮಟ್ಟ ಸುಧಾರಣೆಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಲು ಪ್ರಾಧಿಕಾರ ಅಧ್ಯಕ್ಷರ ನೇತೃತ್ವದಲ್ಲಿ ನಿಯೋಗ ಬಂದರೆ ನಾನು ಕೂಡ ಜತೆಗಿದ್ದು, ಅಗತ್ಯ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವ ಸ್ವಾಮಿ ಮಾತನಾಡಿ, ಕಳೆದ ಒಂದು ವರ್ಷದಿಂದ ವಿಜಯೇಂದ್ರ ನಾಯಕತ್ವದ ಮೈ ಸೇವಾ ಫೌಂಡೇಷನ್ ವತಿಯಿಂದ ಮೈಸೂರಿನಲ್ಲಿ ಹಲವು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಈ ಬಾರಿ ಕೊರೊನಾ ಸಂತ್ರಸ್ತರಿಗಾಗಿ ಪ್ರತ್ಯೇಕ ಆಂಬುಲೆನ್ಸ್ ಮತ್ತು ಕಾನ್ಸಂಟ್ರೇಟರ್ಗಳನ್ನು ನೀಡಲಾಗಿದೆ ಎಂದು ಹೇಳಿದರು.
ಈಗ ಮೃಗಾಲಯದ ಸಿಬ್ಬಂದಿಗೆ ಪಡಿತರ ಕಿಟ್ ಮತ್ತು ತರಕಾರಿ ನೀಡುವ ಮೂಲಕ ನೆರವಾಗಿದ್ದಾರೆ. ಜತೆಗೆ ಮೃಗಾಲಯಕ್ಕೆ ಆರ್ಥಿಕ ನೆರವು ನೀಡಲು ಸರಕಾರದೊಂದಿಗೆ ಮಾತುಕಡೆ ನಡೆಸುವುದಾಗಿ ಹೇಳಿರುವುದು ಹರ್ಷದ ವಿಚಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಜಯೇಂದ್ರ ಅವರು ಹೊಸ ಪ್ರಾಣಿ ಬರುವ ಮನೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಕಾರ್ಯಕ್ರಮದಲ್ಲಿ ನಿಗಮ ಮಂಡಳಿ ಅಧ್ಯಕ್ಷರಾದ ಎಚ್.ವಿ.ರಾಜೀವ್,ಹೇಮಂತ್ ಕುಮಾರ್ ಗೌಡ, ಕೃಷ್ಣಪ್ಪ ಗೌಡ, ರಘು ಆರ್ .ಕೌಟಿಲ್ಯ, ಮುಡಾ ಸದಸ್ಯೆ ಲಕ್ಷ್ಮೀದೇವಿ, ಪ್ರಾಧಿಕಾರದ ಸದಸ್ಯ ಜ್ಯೋತಿ ರೇಚಣ್ಣ, ಗೋಕುಲ್ ಗೋವರ್ಧನ್, ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಎಸ್.ಸಿ. ಅಶೋಕ್, ಆರೆಎಫ್ಓ ರಾಮಚಂದ್ರ ಇದ್ದರು.

Leave a Reply

Your email address will not be published. Required fields are marked *