ಮೈಸೂರಿನ ರಾಜೇಂದ್ರ ನಗರದಲ್ಲಿರುವ ಕೆಸರೆಯಲ್ಲಿ ನಗರ ಕಾಂಗ್ರೆಸ್ ಉಪಾಧ್ಯಕ್ಷರು
ಮಾದೇಗೌಡ ದಿನಸಿ ಕಿಟ್ ವಿತರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಕೊರೊನಾ ಅಲೆಯಿಂದ ಲಾಕ್ ಡೌನ್ ಆಗಿ ಜನರಿಗೆ ಕೆಲಸ ಇಲ್ಲದೇ ತೊಂದರೆಯಲ್ಲಿದ್ದಾರೆ. ಸಂಕಷ್ಟದಲ್ಲಿರುವ ಕಾರ್ಮಿಕ ವರ್ಗಕ್ಕೆ ಅನುಕೂಲವಾಗಲೆಂದು ಅಗತ್ಯ ದಿನಸಿ ಕಿಟ್ ವಿತರಿಸಲು ಮುಂದಾಗಿದ್ದೇನೆ.ಮೊದಲ ಬಾರಿ ಲಾಕ್ ಡೌನ್ ಆದಾಗಲೂ ದಿನಸಿ ಕಿಟ್ ಹಂಚಿದ್ದೇವು.ಈಗ ಎರಡನೇ ಬಾರಿ ಲಾಕ್ ಡೌನ್ ಆಗಿದ್ದು ಈಗಲೂ ಬಡ ಕಾರ್ಮಿಕ ವರ್ಗದವರಿಗೆ ಆಹಾರ ಕಿಟ್ ವಿತರಿಸಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ನಗರ ಅಧ್ಯಕ್ಷರು
ಆರ್ ಮೂರ್ತಿ, ಪ್ರಧಾನ ಕಾರ್ಯದರ್ಶಿ
ಶಿವಣ್ಣ, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ರಘು ರಾಜೇ ಅರಸ್ ಮಾಜಿ ನಗರ ಪಾಲಿಕೆ ಸದಸ್ಯ ಶೌಕತ್, ಸೇವಾದಳ ಅಧ್ಯಕ್ಷ ಗಿರೀಶ್ ಸೇರಿದಂತೆ ಇತರರು ಭಾಗಿಯಾಗಿದ್ದರು.