ಹೆಚ್.ಡಿ.ಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿಧ್ಯಾರ್ಥಿಗಳಿಗೆ ಕೋವಿಡ್ ಲಸಿಕೆ ಅಭಿಯಾನ

ಸರಗೂರು ಜುಲೈ1 :- ಸಮಾಜಕ್ಕೆ ತೊಂದರೆಯಗಿರುವ ಕೊವೀಡ್ ಸೋಂಕನ್ನು ಸಮಾಜದಿಂದ ದೂರ ಮಾಡಲು ಯುವ ಸಮೂಹವಾದ ವಿದ್ಯಾರ್ಥಿಗಳು ಹೆಚ್ಚಿನ ಸಾಮಾಜಿಕ ಜವಬ್ದಾರಿಯನ್ನು ಮೆರೆಯಬೇಕು. ಜೊತೆಗೆ ಕೊರೊನಾ ತಡಗಟ್ಟುವ ಕ್ರಮಗಳ ಬಗ್ಗೆ ನಿಮ್ಮ ಸುತ್ತಮತ್ತಲಿನ ಜನರಿಗೆ ಅರಿವು ಮೂಡಿಸಬೇಕು ಎಂದು ಸರಗೂರು ತಹಸೀಲ್ದಾರ್ ಚಲುವರಾಜು ತಿಳಿಸಿದರು.


ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬುಧವಾರ ನಡೆದ ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಅವರು, ಕೊರೊನಾವನ್ನು ತಡೆಗಟ್ಟಲು ಯುವ ಸಮೂಹ ಹೆಚ್ಚು ಜವಬ್ದಾರಿಯುತವಾಗಿರಬೇಕು. ಸರಿಯಾದ ಕ್ರಮದಲ್ಲಿ ಕೊರೊನಾ ನಿಯಮವನ್ನು ಪಾಲಿಸುವ ಜೊತೆಗೆ ತಪ್ಪದೆ ಪ್ರತಿಯೊಬ್ಬರು ವ್ಯಾಕ್ಸಿನ್ ಪಡೆದುಕೊಳ್ಳಬೇಕು ಎಂದರು.
ಬಳಿಕ ಮಾತನಾಡಿದ ತಾಲ್ಲೂಕು ಆರೋಗ್ಯಧಿಕಾರಿ ಡಾ.ಟಿ.ರವಿಕುಮಾರ್, ರಾಜ್ಯದಾದ್ಯಂತ ಎಲ್ಲಾ ಪದವಿ ವಿದ್ಯಾರ್ಥಿಗಳಿಗೆ ಕಡ್ಡಾಯ ಲಸಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಎಚ್.ಡಿ.ಕೋಟೆ ಮತ್ತು ಸರಗೂರು ಭಾಗದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಕಾಲೇಜು ಸಿಬ್ಬಂದಿಗಳು ಸೇರಿದಂತೆ ಸುಮಾರು 16,048 ಮಂದಿಗೆ ಲಸಿಕೆಯನ್ನು ನೀಡುವ ಗುರಿಯೊಂದಿಗೆ ಪ್ರಾರಂಭಿಸಲಾಗಿದೆ. ಈಗಾಗಲೇ ಎಚ್.ಡಿ.ಕೋಟೆಯಲ್ಲಿ ಆರಂಭಗೊಂಡಿದ್ದು, ಇಂದಿನಿಂದ ಸರಗೂರಿನಲ್ಲಿ ಪ್ರಾರಂಭಿಸಲಾಗಿದೆ. ಈ ದೇಶದ ಭವಿಷ್ಯದ ಉತ್ತಮ ಪ್ರೆಜೆಗಳಾದ ನಿಮ್ಮ ಆರೋಗ್ಯ ರಕ್ಷಣೆ ನಮ್ಮ ಜವಬ್ದಾರಿಯಾಗಿರುತದೆ. ಆದ್ದರಿಂದ ಯುವಕರು ಮೊದಲು ವ್ಯಾಕ್ಸಿನ್ ಪಡೆದು ನಂತರ ನಿಮ್ಮ ನೆರಹೊರೆಯವರಿಗೆ ವ್ಯಾಕ್ಸಿನ್ ಪಡೆಯುವಂತೆ ಮಾಹಿತಿ ನೀಡಬೇಕು. ವೇಗವಾಗಿ ಹರಡುತ್ತಿರುವ ಕೊರೊನಾ ತಡೆಗಟ್ಟಲು ಲಸಿಕೆಯೊಂದು ಸಂಜೀವಿನಿ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರಗೂರು ಮುಖ್ಯಾಧಿಕಾರಿ ವೀಣಾ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಿ.ಸಿ.ಮಲ್ಲೇಶ್, ಟಾಸ್ಕ್‍ಪೋರ್ಸ್ ಕಮಿಟಿ ಸದಸ್ಯ ಉಮೇಶ್, ಪಿಎಸ್‍ಐ ಸುಷ್ಮಾ, ಡಾ.ಮೋಹನ್, ಅಮೀತ್ ಪಾಷ, ಸರಗೂರು ವೈದ್ಯಾಧಿಕಾರಿ ಪಾರ್ಥಸಾರಥಿ, ಗೌರಮ್ಮ, ಪುಷ್ಪಲತಾ, ಚಂದ್ರಿಕಾ, ಜಗದೀಶ್, ಶೋಭಾ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *