ಕಾವೇರಿ ಹೊಳೆಯಲ್ಲಿ ಬಿದ್ದಿದ್ದ ಯುವಕನನ್ನು ರಕ್ಷಿಸಲು ಹೋದ ಬಿದ್ದು ವೃದ್ಧರೊಬ್ಬರು ಕೂಡ ನೀರು ನೀರು ಪಾಲಾಗುತ್ತಿದ್ದನ್ನು ಛಾಯಾಗ್ರಾಹಕರೊಬ್ಬರು ರಕ್ಷಿಸಿದ ರೋಚಕ ಘಟನೆ ಕೊಣನೂರಿನಲ್ಲಿ ನಡೆದಿದೆ.

ಹಾಗೂ ಸ್ವಾತಂತ್ರ್ಯ ದಿನಾಚರಣೆಯಂದು ಸಂಜೆ ಸಮಯದಲ್ಲಿ ಮೈಸೂರಿನ ಗಿರಿ ಮಂಜು ಎಂಬುವವರು ತೂಗುಸೇತುವೆ ನೋಡುತ್ತಾ ಛಾಯಾ ಗ್ರಹಣ ಮಾಡುತ್ತಿದ್ದರು. ಈ ವೇಳೆ ಕಾವೇರಿ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ 23 ವರ್ಷದ ನವೀನ್ ಹಾಗೂ 94 ವರ್ಷದ ದಾಸೇಗೌಡ

ಎಂಬುವವರನ್ನು ತಮ್ಮ ಜೀವದ ಹಂಗು ತೊರೆದು ರಬಸವಾಗಿ ಹರಿಯುತ್ತಿದ್ದ ನದಿಯಲ್ಲಿ ಈಜಿ ಇಬ್ಬರನ್ನು ರಕ್ಷಿಸಿ ಕೊಣನೂರು ಪೊಲೀಸ್ ಠಾಣೆಗೆ ನೀಡಿದ್ದಾರೆ. ಪ್ರಾಣ ಉಳಿಸಿದ ಗ್ರಾಹಕರ ಸಾಹಸಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.