ಗೋವಾ: ಸಾಮಾನ್ಯವಾಗಿ ಕ್ರಿಕೆಟ್ ಆಟಗಾರರು ಆಟದ ಸಮಯದಲ್ಲಿ ಒಂದಲ್ಲ ಒಂದು ಕಾರಣಕ್ಕೆ ತಂಡ ಕಟ್ಟುವುದು ಇದ್ದೇ ಇದೆ. ಆದರೆ ಮಾಜಿ ಕ್ರಿಕೆಟಿಗ,ಭಾರತ ತಂಡದ ಮಾಜಿ ನಾಯಕನೂ ಆಗಿದ್ದ ಅಜಯ್ ಜಡೇಜಾಗೆ ದಂಡ ಕಟ್ಟಿದ್ದಾರೆ.
ಆದರೆ ಅವರು ದಂಡ ಕಟ್ಟಿದ್ದೇಕೆ ಎಂಬುದನ್ನು ಕೇಳಿದರೆ ಮಾತ್ರ ಶಾಕ್ ಆಗುತ್ತದೆ. ಇಷ್ಟಕ್ಕೂ ಅವರು ದಂಡ ಕಟ್ಟಿದ್ದು ಐದು ಸಾವಿರ ಮಾತ್ರ. ಸಾಮಾನ್ಯ ಮನುಷ್ಯನಿಗೆ ಇದು ದೊಡ್ಡ ಮೊತ್ತ ಆದರೆ ಜಡೇಜಾಗೆ ಇದೇನು ಮಹಾ ಅಲ್ಲ. ಆದರೆ ಇದೀಗ ದಂಡ ಕಟ್ಟಿದ ವಿಚಾರ ಮಾತ್ರ ದೊಡ್ಡದಾಗಿದೆ.
ನಮ್ಮ ದೇಶದಲ್ಲಿ ಕ್ರಿಕೆಟ್ ಆಟಗಾರರನ್ನು ತುಂಬಾ ಗೌರವಿಸಲಾಗುತ್ತದೆ. ಅವರ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ನಮ್ಮ ದೇಶ ಮಾತ್ರವಲ್ಲದೆ ಹೊರ ದೇಶದಲ್ಲಿಯೂ ಇರುತ್ತಾರೆ. ಹೀಗಿರುವಾಗ ಅಭಿಮಾನಿಗಳಿಗೆ ಒಂದಿಷ್ಟು ಮುಜುಗರವಾಗಿದೆ. ಇಷ್ಟಕ್ಕೂ ಜಡೇಜಾ 1990ರಲ್ಲಿ ಭಾರತ ತಂಡದ ಪ್ರಮುಖ ಆಟಗಾರನಾಗಿದ್ದವರು. ಇಂತಹವರು ದಂಡ ಕಟ್ಟಿದ್ದು ಕಸ ಹಾಕಿದ ಕಾರಣಕ್ಕೆ ಎಂದರೆ ಅಚ್ಚರಿಯಾಗುತ್ತದೆ.
ಗೋವಾದ ನಾಚಿನೋಲದಲ್ಲಿ ಕಸದ ಸಮಸ್ಯೆ ಹೆಚ್ಚಾಗಿರುವ ಬೆನ್ನಲ್ಲೇ ಬೇರೆ ಕಡೆಯಿಂದ ಕಸ ತಂದು ಹಾಕಿದ ವಿಚಾರಕ್ಕಾಗಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಯ್ ಜಡೇಜಾಗೆ ದಂಡ ವಿಧಿಸಿದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುದ್ದಿಗಾರರಿಗೆ ತಿಳಿಸಿದ್ದಾರೆ. ಒಟ್ಟಾರೆ ಈ ಸುದ್ದಿ ಇದೀಗ ಎಲ್ಲರ ಗಮನಸೆಳೆಯುತ್ತಿದೆ.