ಮೈಸೂರಿನಲ್ಲಿ ಅಣ್ಣನೆ ತಮ್ಮನನ್ನು ಕೊಂದು, ಮಣ್ಣಿನಲ್ಲಿ ಹೂತಿಟ್ಟ ಘಟನೆ

ಮೈಸೂರು,ಆ.31:- ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನನ್ನು ಕೊಂದು, ಮಣ್ಣಿನಲ್ಲಿ ಹೂತಿಟ್ಟ ಘಟನೆ ಮೈಸೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜನತಾ ನಗರದ ನಿವಾಸಿ ಉಮೇಶ್(27)ಎಂಬಾತನೇ ಕೊಲೆಯಾದ ವ್ಯಕ್ತಿ. ಜನತಾ ನಗರದ ನಿವಾಸಿಗಳಾದ ಪ್ರಜ್ವಲ್ ಮತ್ತು ವಸಂತ ಎಂಬ ಅಣ್ಣ-ತಮ್ಮ ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಬೋಗಾದಿಯಲ್ಲಿ ಕೊಲೆಗೈದು ಅಲ್ಲಿಯೇ ಮಣ್ಣಿನಲ್ಲಿ ಹೂತಿಟ್ಟಿದ್ದರು.
ಉಮೇಶ್ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಸರಸ್ವತಿಪುರಂ ಪೊಲೀಸರು ತನಿಖೆ ಕೈಗೊಂಡಾಗ ಪ್ರಜ್ವಲ್ ಮತ್ತು ವಸಂತ್ ಎಂಬವರು ಅನುಮಾನಾಸ್ಪದವಾಗಿ ವರ್ತಿಸಿದ್ದು, ಅವರನ್ನು ಬಂಧಿಸಲಾಗಿದೆ. ಸರಸ್ವತಿಪುರಂ ಠಾಣೆಯ ಇನ್ಸಪೆಕ್ಟರ್ ತಿಮ್ಮರಾಜು ಮತ್ತು ಸಬ್ಇನ್ಸಪೆಕ್ಟರ್ ರಮೇಶ್ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *