ನೆನ್ನೆಯ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹತ್ಯೆ!ಎರಡು ಕೊಲೆ ಪ್ರಕರಣಗಳನ್ನು ಭೇದಿಸಲು 4 ಪೊಲೀಸ್ ತಂಡ ರಚನೆ
ಕ್ರೈಂ ಸಿಟಿ ಆಗಿ ಪರಿವರ್ತನೆ ಆಗುತ್ತಿದೆಯಾ ಮೈಸೂರು ನಗರ..?
ಮೈಸೂರಿನಲ್ಲಿ ನೆನ್ನೆ ಹಾಡುಹಗಲೇ ಕೊಲೆಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮೈಸೂರಿನ ಕಲ್ಯಾಣಗಿರಿ ನಗರದಲ್ಲಿ ಯಾಸಿನ್ ಎಂಬ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೊಬೈಲ್ ವಿಚಾರವಾಗಿ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಈ ಕ್ಷುಲ್ಲಕ ಕಾರಣಕ್ಕೆ ದ್ವೇಷ ಬೆಳೆಸಿಕೊಂಡ ಪಾತಕಿ ಯಾಸಿನ್ ಎಂಬುವವನನ್ನು ಹತ್ಯೆಗಯ್ಯಲಾಗಿದೆ.
ಇನ್ನು ಎರಡು ಪ್ರಕರಣದಲ್ಲಿನ ರಕ್ತ ಸುರರ ಬಂಧನಕ್ಕೆ 4 ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಮೈಸೂರಿನ ಪೂರ್ವಭಾಗದಲ್ಲಿ ಆಗಾಗ ಇಂತಹ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ಜನರನ್ನು ಆತಂಕಕ್ಕೀಡು ಮಾಡಿದೆ.
ಇದರಿಂದಾಗಿ ಮೈಸೂರು ನಗರ ಕ್ರೈಂ ಸಿಟಿಯಾಗಿ ಪರಿವರ್ತನೆ ಆಗುತ್ತಿದೆಯಾ ಎಂಬ ಆತಂಕ ಜನರನ್ನು ಕಾಡತೊಡಗಿದೆ.