


- ಗತಕಾಲದ ನಿಸ್ವಾರ್ಥ ರಾಜಕಾರಣಕ್ಕೆ ಈಗ ಸ್ವಾರ್ಥದ ಸೂತಕ ಆವರಿಸಿದೆ. ದೇವರಾಜ ಅರಸು ಒಡನಾಡಿ ಕಾಂಗ್ರೆಸ್ ಸುಬ್ಬಣ್ಣ ಆತಂಕ. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ದೇವರಾಜ ಅರಸು ರವರ ಒಡನಾಡಿಗಳು ಹಾಗೂ ಹಿರಿಯರಾದ ಕಾಂಗ್ರೆಸ್ ಸುಬ್ಬಣ್ಣ ಹಿಂದೆ ರಾಜಕಾರಣದಲ್ಲಿ ಯಾವುದೇ ಸ್ವಾರ್ಥವಿಲ್ಲದೇ ರಾಜ್ಯದ ಕಲ್ಯಾಣ ಕೋಸ್ಕರ ಅವಿರತ ಶ್ರಮಿಸಿದ ರಾಜಕಾರಣಿಗಳಲ್ಲಿ ಡಿ. ದೇವರಾಜ ಅರಸು ಕೂಡ ಒಬ್ಬರು. ಅವರ ಜನಪರ ಕಾರ್ಯಕ್ರಮಗಳನ್ನು ಇಂದಿನ ಯಾವ ರಾಜಕಾರಣಿ ಕೂಡ ಚಿಂತಿಸಲಾರ.. ಈಗ ಸ್ವಾರ್ಥದ ರಾಜಕಾರಣಕ್ಕೆ ಹಿಡಿ ಸಮಾಜ ಬಲಿಯಾಗಿದೆ. ಯುವ ಸಮುದಾಯ ಈ ವಿಚಾರದಲ್ಲಿ ಎಚ್ಚೆತ್ತುಕೊಳ್ಳಬೇಕು ಹಾಗೂ ಸ್ವಾರ್ಥ ರಾಜಕಾರಣಿಗಳ ದುರಾಡಳಿತಕ್ಕೆ ಕ್ರಾಂತಿಯೊಂದೇ ಮೂಲ ಮಂತ್ರ ಎಂದರು. ಮಾನ್ಯ ಶಾಸಕರಾದ ಶ್ರೀ ಯತೀoದ್ರಾ ಸಿದ್ದರಾಮಯ್ಯ ರವರ ಈ ಸಹಾಯ ಹಸ್ತವನ್ನ ಸ್ಮರಿಸಿದರು. ಶ್ರೀ ದೇವರಾಜ ಅರಸ್ ರವರ ರಾಜಕೀಯ ಕೊಡುಗೆಗಳ ಅಪಾರ ಜನಮನ್ನಣೆಗೆ ಅವರ ನಿ ಸ್ವಾರ್ಥದ ರಾಜಕಾರಣವೇ ಕಾರಣ .
ಹಾಗೂ 2019 ಡಿಸೇಂಬರ್ ನಲ್ಲಿ WHO ಚೀನಾ ದೇಶದಿಂದ ಹೊಸ ವೈರಸ್ ಹರಡುವ ಮುನ್ಸೂಚನೆ ನೀಡಿದ್ದರು ಸಹ ಕೇಂದ್ರ ಸರ್ಕಾರ ಯಾವುದೇ ಮುನ್ನೆಚರಿ ಕ್ರಮ ಕೈಗೊಳ್ಳದೇ ಇಂದು ದೇಶ ಈ ಪರಿಸ್ಥಿತಿಯನ್ನು ಎದುರಿಸುತಿದೆ. ಇದಕ್ಕೆ ಬಿಜೆಪಿ ಯೇ ನೇರ ಹೊಣೆ ಎಂದು ಟೀಕಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಸೇವಾದಳ ರಾಜ್ಯ ಅಧ್ಯಕ್ಷರಾದ ಕುಮಾರಿ ಪಾರಿಜಾನ್ ರವರು ಮಾತನಾಡಿ 2018 ರಲ್ಲಿ ಬೆಂಗಳೂರು ಕೆಪಿಸಿಸಿ ಸೇವಾದಳ ಕಚೇರಿ ಯಲ್ಲಿ ಗಣರಾಜ್ಯೋತ್ಸವದಂದು ಮೊಟ್ಟ ಮೊದಲಬಾರಿಗೆ ಮಂಗಳಮುಖಿಯಾರಿಂದ ದ್ವಜಾರೋಹಣ ಮಾಡಿಸಿದ ಕೀರ್ತಿ ಕಾಂಗ್ರೆಸ್ ನದ್ದು ಎಂದರು. ಮಾನ್ಯಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರು, ಕೆಪಿಸಿಸಿ ಅಧ್ಯಕ್ಷರಾದ ಶ್ರೀ ಡಿಕೆ ಶಿವಕುಮಾರ್ ರವರ ನೇತೃತ್ವದಲ್ಲಿ ಇನ್ನು ಈ ರಾಜ್ಯಕ್ಕೆ ಉತ್ತಮ ಕೊಡುಗೆ ಗಳನ್ನು ಎಲ್ಲರೂ ನೀಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಾ. ಬಿಜೆ ವಿಜಯ್ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಮಂಗಳಮುಖಿಯರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಮಂಜುಳಾ,ಉಪಾಧ್ಯಕ್ಷರಾದ ಎಡತಲೆ ಮಂಜುನಾಥ್, ಪಿ. ವೆಂಕಟರಾಮ್, ಪ್ರಧಾನಕಾರ್ಯದರ್ಶಿ
ಗಿರೀಶ್, ಶಿವಪ್ರಸಾದ್, ವಿದ್ಯಾರ್ಥಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾದ ರಫೀಕ್, ಪದಾಧಿಕಾರಿಗಳಾದ ಉತ್ತನಹಳ್ಳಿ ಶಿವಣ್ಣ, ಬಸವರಾಜ್, NRM, ಮಂಜು, ಕೂಸಪ್ಪ,
ಕೆಪಿ ಚಿಕ್ಕಸ್ವಾಮಿ, ಮಹೇಶ್, ಹೇಮಂತ್, ಪ್ರವೀಣ್, ಶ್ರೀಧರ್ ಗೌಡ,
ಕಾಂಗ್ರೆಸ್ ಸೇವಾದಳದ ಪದಾಧಿಕಾರಿಗಳಾದ ಶ್ರೀಮತಿ ಗೀತಾ, ಶಂಕರಮೂರ್ತಿ, ಶಿವಶಂಕರ್, ಕುಮಾರಿ ಲಲಿತಾ, ಇತರರು ಉಪಸ್ಥಿತರಿದ್ದರು.