ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಎಂದರೆ ಮೈಸೂರು ಮಾತ್ರವಲ್ಲ ತಲಕಾಡು, ನಂಜನಗೂಡು ಎಲ್ಲವೂ ಸೇರಿರುವುದರಿಂದ ಮೈಸೂರಿಗೆ ಹೆಸರಿದೆ. ಹಾಗಾಗಿ ಪ್ರವಾಸೋದ್ಯಮ ದೃಷ್ಟಿಯಿಂದ ಹಾಗೂ ಮುಂದಿನ ಪೀಳಿಗೆಗೆ ತಲಕಾಡಿನ ಇತಿಹಾಸವನ್ನು ತಿಳಿಸಲು ಉದ್ದೇಶಿಸಲಾಗಿದೆ. ಆದರೆ ಇಲ್ಲಿ ಕನಿಷ್ಠ ಮುಇಲ ಸೌಕರ್ಯವೂ ಇರುವುದಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ತಲಕಾಡು ಉತ್ಖನನಕ್ಕೆ ಉತ್ತೇಜನ ನೀಡಬಕು, ಇತಿಹಾಸ ತಿಳಿಸುವ ಜೊತೆಗೆ ಪ್ರವಾಸೋದ್ಯಮವನ್ನೂ ಅಭಿವೃದ್ಧಿ ವಪಡಿಸುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜತೆಗೆ ಪ್ರವಾಸೋದ್ಯಮದ ಕುರಿತು ಶಿಕ್ಷಣವನ್ನೂ ತಲುಪಿಸಬೇಕು ಎಂಬುದು ಅಭಿವೃದ್ದೀಯ ಹಿತಾಸಕ್ತಿಯಾಗಿದೆ.
ಪ್ರಸ್ತುತ ವರ್ಷದಿಂದಲೇ ತಲಕಾಡಿನಲ್ಲಿ ಗಂಗರ ಉತ್ಸವ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಉತ್ಸವ ಆಚರಣೆ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಬಹುದು ಎಂಬುದಾಗಿದೆ.
ಈ ಬಗ್ಗೆ ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸ ಮುಖ್ಯಮಂತ್ರಿಗಳಗಮನಕ್ಕೂ ತಂದು ದಸರಾ ಮಹೋತ್ಸವದ ವೇಳೆಗೆ ಗಂಗರ ಉತ್ಸಚವನ್ನೂ ಸಮೀಕರಿಸಿ ಆಚರಿಸಲು ರೂಪಿ ರೇಷೆ ಸಿದ್ಧಪಡಿಸಲಾಗುವುದು. ಈ ಉತ್ಸದ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿಚಾರ ಸಂಕಿರಣಗಳನ್ನು ಆಯೋಜಿಸುವುದರಿಂದ ತಲಕಾಡಿನ ಇತಿಹಾಸ ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಇನ್ನೂ ಬಹಳಷ್ಟು ಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ ಮಕ್ಕಳಿಗೆ ಪಠ್ಯದೊಂದಿಗೆ ಪ್ರವಾಸ ಕೈಗೊಳ್ಳಲು ಆಗುತ್ತಿಲ್ಲ. ಅಲ್ಲದೇ ಪ್ರವಾಸ ಹೋದರೂ ಅಲ್ಲಿ ಮೂಲ ಸೌಕರ್ಯಗಳೇ ಇರುವುದಿಲ್ಲ.ಎಂಬುದನ್ನು ಮನಗಂಡು ಪ್ರಮುಖ ಪ್ರವಾಸಿ ಜಿಲ್ಲೆಗಳಾದ ವಿಜಯಪುರ, ಚಿತ್ರದುರ್ಗ, ಮಂಗಳೂರು ಸೇರಿದಂತೆ ರಾಜ್ಯದ 10 ಜಿಲ್ಲೆಗಳಲ್ಲಿ 2 ಸಾವಿರ ಶಾಲಾ ಮಕ್ಕಳಿಗೆ ಅನುಕೂಲವಾಗುವಂತೆ ಪ್ರವಾಸಿ ತಾಣಗಳಲ್ಲಿ ಡಾರ್ಮೆಟರಿಗಳನ್ನು ನಿರ್ಮಿಸಲಾಗುತ್ತಿದೆ.
ಜತೆಗೆ ಈ ಡಾರ್ಮೆಟರಿಗಳಲ್ಲಿ ತಂಗುವ ಮಕ್ಕಳಿಗೆ ಉಚಿತ ಊಟ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹತ್ತಿರದ 50-60 ಕಿ.ಮೀ. ವರೆಗೂ ಪ್ರವಾಸ ಕೈಗೊಳ್ಳು ಅನುಕೂಲ ಮಾಡಿಕೊಡಲಾಗುತ್ತದೆ.
ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳೊಂದಿಗೆ ಜು.20 ರಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳಾಗುತ್ತದೆ.
ತಲಕಾಡು ಅಭಿವೃದ್ಧಿ ಸಮಿತಿ ರಚನೆ:
ಇನ್ನೂ ತಲಕಾಡು ಅಭಿವೃದ್ಧಿಗೆ ಸಂಬಂಧಿಸಿದಂತೆ ತಲಕಾಯ ಅಭಿವೃದ್ಧಿ ಸಮಿತಿ ರಚಿಸಲಾಗುತ್ತದೆ. ಇಲ್ಲಿನ ಅಭಿವೃದ್ದಿಗೆ ಇನ್ನು 15 ದಿನಗಳಲ್ಲಿ ಡಿಪಿಆರ್ ಸಿದ್ಧವಾಗಲಿದೆ ಎಂದರು.
ಹೆಲಿ ಟೂರಿಸಂಗೆ ಹಿನ್ನೆಡೆಯಿಲ್ಲ:
ಹೆಲಿ ಟೂರಿಸಂಗೆ ಹಿನ್ನಡೆಯಾಗಿಲ್ಲ. ಒಂದು ಮಾರ್ಗ ಸಿಗದಿದ್ದ ಪಕ್ಷದಲ್ಲಿ ಪರ್ಯಾಯ ಕಂಡು ಕೊಳ್ಳಬೇಕಾಗುತ್ತದೆ. ಆದ್ದರಿಂದ ಏರ್ ಪೋರ್ಟ್ಗಳಲ್ಲೇ ಹೆಲಿಟೂರಿಸಂ ಮಾಡಲು ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ. ಇನ್ನು ೧೫ ದಿನಗಳಲ್ಲಿ ಬೆಂಗಳೂರಿನಲ್ಲಿ ಹೆಲಿ ಟೂರಿಸಂ ಪ್ರಾರಂಭವಾಗಲಿದೆ.
8-10 ಭಾಗಗಳಲ್ಲಿ ರೋಫ್ ವೇ
ಮೈಸೂರಿನ ಚಾಮುಂಡಿಬೆಟ್ಟ ಸೇರಿದಂತೆ ರಾಜ್ಯದ 8-10 ಭಾಗದಲ್ಲಿ ರೋಫ್ವೇ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ . ಇದಕ್ಕೆ ಡಿಪಿಆರ್ ಸಿದ್ಧವಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಪರಿಸರವಾದಿಗಳು ಇದಕ್ಕೆ ವಿರೋಧ ವ್ಯಕಪಡಿಸುವುದು ಸಹಜ. ವಿರೋಧಿಸುವವರನ್ನು ಪಕ್ಕಕ್ಕ ಇಟ್ಟು ನಂತರ ಪರಿಸರಕ್ಕೆ ಹಾನಿಯಾಗದಂತೆ ಯೋಜನೆವಾನುಷ್ಠಾನಗೊಳಿಸುವ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.
25 ಜಲಾಶಯಗಳಲ್ಲಿ ಜಲಕ್ರೀಡೆ
ಕೆಆರ್ಎಸ್ ಹಿನ್ನೀರಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದ್ದು, ಇದರೊಂದಿಗೆ ರಾಜ್ಯದ 25 ಜಲಾಶಯಗಳಲ್ಲಿ ಜಲಕ್ರೀಡೆಗಳನ್ನು ಪ್ರಾರಂಭಿಸಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕೆ ಡೆಂಡರ್ ಕರೆಯಲಾಗಿದೆ.