ಮೈಸೂರು ನಗರದ ಲಷ್ಕರ್ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಲಷ್ಕರ್ ಠಾಣಾ ಸರಹದ್ದಿನ ಫೈವ್ ಲೈಟ್ ಸರ್ಕಲ್ ಬಳಿಯ ದಾವೂದ್ ಖಾನ್ ರಸ್ತೆಯ 5ನೇ ಕ್ರಾಸ್ ನಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಾತ್ಮಿದಾರರ ಖಚಿತ ಮಾಹಿತಿ ಮೇರೆಗೆ ಲಷ್ಕರ್ ಪೊಲೀಸರು ಸ್ಥಳಕ್ಕೆ ದಾಳಿ ಮಾಡಿಸಿದ್ದಾರೆ.
ಬಂಧಿತನನ್ನು ಮೈಸೂರು ನಗರದ ಉದಯಗಿರಿಯ ಇಂದಿರಾಗಾಂಧಿ ರಸ್ತೆಯ ಕೆ ಎನ್ ಪುರ ನಿವಾಸಿ 21 ವರ್ಷದ ಸೈಯದ್ ವಸೀಂ ಎಂದು ಗುರುತಿಸಲಾಗಿದ್ದು, ಆತನಿಂದ ಬಟ್ಟೆ ಚೀಲದಲಿದ್ದ ಸುಮಾರು 30 ಸಾವಿರ ರೂ ಬೆಲೆ ಬಾಳುವ 280 ಗ್ರಾಂ ತೂಕದ ಗಾಂಜಾ, ಒಂದು ಮೊಬೈಲ್ ಫೋನ್, 230 ರೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಹಾಜರು ಪಡಿಸಲಾಗಿದೆ. ಹಾಗೂ ಈ ಪ್ರಕರಣದ ಮತ್ತೊಬ್ಬ ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈ ಪ್ರಕರಣದಲ್ಲಿ ಪತ್ತೆ ಕಾರ್ಯವನ್ನು ಮೈಸೂರು ನಗರದ ದೇವರಾಜ ವಿಭಾಗದ ಎ.ಸಿ.ಪಿ. ಶ್ರೀ ಎಂ.ಎನ್.ಶಶಿಧರ್ ರವರ ಮಾರ್ಗದರ್ಶನದಲ್ಲಿ ಲಷ್ಕರ್ ಪೊಲೀಸ್ ಠಾಣೆಯ ಪಿ.ಐ ಶ್ರೀ ಸುರೇಶ್ಕುಮಾರ್ ಎಸ್.ಡಿ ರವರ ಉಸ್ತುವಾರಿಯಲ್ಲಿ ಪಿ.ಎಸ್.ಐ ರವರಾದ ಶ್ರೀ ಗೌತಮ್ ಗೌಡ, ಶ್ರೀಮತಿ ಧನಲಕ್ಷ್ಮಿ, ಎ.ಎಸ್.ಐ ಸಿದ್ದರಾಜು ಮತ್ತು ಸಿಬ್ಬಂದಿಗಳಾದ ಲಿಂಗರಾಜು, ಸತ್ಯ, ನಡಾಫ್, ಮಂಜುನಾಥ್, ಚಿನ್ನಪ್ಪ ಮಾ ಕಲ್ಲೋಳಿ ರವರು ಮಾಡಿರುತ್ತಾರೆ.
ಈ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರಾದ ಡಾ|| ಚಂದ್ರಗುಪ್ತ ಐ.ಪಿ.ಎಸ್. ರವರು ಪ್ರಶಂಶಿಸಿರುತ್ತಾರೆ.