ಶ್ರೀ ಎಲ್. ನಾಗೇಂದ್ರ, ಶಾಸಕರು ಚಾಮರಾಜ ವಿಧಾನ ಸಭಾ ಕ್ಷೇತ್ರ ರವರು ಹಾಗೂ ವಾರ್ಡ ಸಂ:25 ರ ಮಹಾನಗರಪಾಲಿಕೆ ಸದಸ್ಯರಾದ ಶ್ರೀ ರಂಗಸ್ವಾಮಿ ಹಾಗೂ ಚಿಕ್ಕವೆಂಕಟು ರವರೊಂದಿಗೆ ಮೈಸೂರು ನಗರದ ಮಿಷನ್ ಆಸ್ಪತ್ರೆ ಹಾಗೂ ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ರಂಗಸ್ವಾಮಿ ರವರ ಸಹಯೋಗದೊಂದಿಗೆ, ಕರೋನ ಲಾಕ್ ಡೌನ್ ಸಮಯದಲ್ಲಿ ಸಂಕಷ್ಠದಲ್ಲಿರುವ ವಾರ್ಡ್ ನಂ-25 ರಲ್ಲಿ ವಾಸಿಸುತ್ತಿರುವ ಬಡ ಕುಟುಂಬಗಳ ಜೀವನ ನಿರ್ವಹಣೆಗೆ ತೊಂದರೆಯಾಗಿರುವುದರಿಂದ ಇಂತಹ ಸುಮಾರು 500 ಕುಟುಂಬಗಳಿಗೆ ಪಡಿತರ ಆಹಾರ ಧಾನ್ಯದ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಈ ಆಹಾರ ಧಾನ್ಯ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾ.ಜ.ಪ. ಮೈಸೂರು ನಗರಾಧ್ಯಕ್ಷರಾದ ಶ್ರೀ ಶ್ರೀವತ್ಸ, ಮಾಜಿ ನಗರ ಅಧ್ಯಕ್ಷರಾದ ಶಿವಕುಮಾರ್, ನಗರಪ್ರಧಾನ ಕಾರ್ಯದರ್ಶಿ ಗಿರಿಧರ್, ವಾಣೀಶ್ ಕುಮಾರ್, ಚಾಮರಾಜ ಕ್ಷೇತ್ರದ ಅಧ್ಯಕ್ಷರಾದ ಸೋಮಶೇಖರರಾಜು, ಮೀನುಗಾರರ ಪ್ರಕೋಷ್ಠ ರಾಜು, ಎಸ್.ಸಿ. ಮೋರ್ಚಾ ಅಧ್ಯಕ್ಷರಾದ ಸ್ವಾಮಿ, ಮನ್ ಕಿ ಬಾತ್ ಸಂತೋಷ್, ಮುಖಂಡರುಗಳಾದ ಭಾ.ಜ.ಪ ಅಜಯ್ ಶಾಸ್ತ್ರಿ ಚೇತನ್, ರಘು, ರವಿ, ಮಹೇಶ್, ಸುರೇಂದ್ರ, ಹರೀಶ್, ಮಹೇಶ್ ಕೈಲಾಸಪುರಂ, ರವಿಕುಮಾರ್, ಲೋಹಿತ್, ಪ್ರದೀಪ್, ಸೂರಜ್ ಮುಂತಾದವರು ಹಾಜರಿದ್ದರು.