ಐದು ವರ್ಷದ ಹಿಂದೆ ಡೈವೋರ್ಸ್ ಪಡೆದಿದ್ದ ಗಂಡ ಹೆಂಡತಿ ಮನವೊಲಿಸಿ ಕೋರ್ಟ್‌ನಲ್ಲೆ ಮರುಮದುವೆ


ಮೈಸೂರು,:- ಇವತ್ತು ನಡೆದ ಮೆಗಾಲೋಕ ಅದಾಲತ್‌ನಲ್ಲಿ ಖುಷಿ ಪಡುವಂತಹ ಘಟನೆ ಮೈಸೂರಿನಲ್ಲಿ ನಡೆದಿದೆ. ಸುಮಾರು ಇಪ್ಪತೈದು ವರ್ಷಗಳಿಂದ ಜೀವನ ನಡೆಸಿ, ಗಂಡ ಹೆಂಡತಿಯಿಬ್ಬರು ಯಾವುದೋ ಚಿಕ್ಕಪುಟ್ಟ ವಿಚಾರಗಳಿಗೆ ಇಬ್ಬರೂ ಕೂಡ ವಿಚ್ಛೇದನಕ್ಕೆ ಮುಂದಾಗಿದ್ದರು. ಈ ವಿಚಾರವಾಗಿ ಮೈಸೂರಿನಲ್ಲಿ ಲೋಕ ಅದಾಲತ್ ವಿಚಾರಣೆ ನಡೆಯುತ್ತಿತು. ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಪಡೆದಿದ್ದ ದಂಪತಿಯ ಮನವೊಲಿಸಿ ಮರು ಮದುವೆ ಮಾಡಿಸಲಾಗಿದೆ. ಜಿಲ್ಲಾ ಪ್ರಧಾನ ಮತ್ತು ಸೆಷನ್ ನ್ಯಾಯಾಧೀಶರಾದ ಎಮ್.ಎಲ್.ರಘುನಾಥ್ ಸುದ್ದಿಗೋಷ್ಠಿಯಲ್ಲಿ ಮೆಗಾ ಲೋಕ ಅದಾಲತ್‌ನಲ್ಲಿ ವಿವರಿಸಿದರು.ವಿಚ್ಛೇದನ ಪಡೆದ ದಂಪತಿಗೆ ಮರು ಮದುವೆ:೨೫ ವರ್ಷ ದಾಂಪತ್ಯ ಜೀವನ ನಡೆಸಿ ಕ್ಷುಲ್ಲಕ ಕಾರಣಕ್ಕಾಗಿ ಕಳೆದ ೫ ವರ್ಷದ ಹಿಂದೆ ವಿಚ್ಛೇದನ ಪಡೆದಿದ್ದ ಮೈಸೂರು ನಗರದ ದಂಪತಿ ಜೀವನಾಂಶಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಇವರಿಗೆ ಒಂದು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದು, ಈ ದಂಪತಿಯ ಮನವೊಲಿಸಿ ಸುದ್ದಿಗೋಷ್ಠಿ ವೇಳೆಯಲ್ಲೇ ಅಕ್ಷತೆ ಹಾಕಿ ಹಾರ ಬದಲಾಯಿಸುವ ಮೂಲಕ ವಿಚ್ಛೇದನ ಪಡೆದಿದ್ದ ದಂಪತಿಗೆ ಮರು ಮದುವೆ ಮಾಡಿಸಿದರು.

Leave a Reply

Your email address will not be published. Required fields are marked *