ಮೈಸೂರು ನಗರ ಭಾರತೀಯ ಜನತಾ ಪಾರ್ಟಿ ಮಾಧ್ಯಮ ವಿಭಾಗ ಹಾಗೂ ವೈದ್ಯಕೀಯ ಪ್ರಕೋಷ್ಠ ವತಿಯಿಂದ ದೇವ ಪಾರ್ಥಿವ ರಸ್ತೆಯಲ್ಲಿರುವ ಮೈಸೂರು ಬಿಜೆಪಿ ಕಚೇರಿಯಲ್ಲಿ ವಿಶ್ವ ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆಯನ್ನು ಅಂಗವಾಗಿ
ಭಾರತ ಕಂಡ ಮಹಾನ್ ವೈದ್ಯ ಪ್ರಾಮಾಣಿಕ ರಾಜಕಾರಣಿ ಅಪ್ರತಿಮ ದೇಶ ಸೇವಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಡಾ॥ ಶಿಕ್ಷಣ ತಜ್ಞ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಗೆ ಕಾರಣಕರ್ತರಾದ
ಡಾ॥ಬಿಡನ್ ಚಂದ್ರ ರಾಯ್
ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅನಂತರ ಪತ್ರಿಕೆಯ ದಿನಾಚರಣೆ ಅಂಗವಾಗಿ ಬೋರ್ಡ್ ನಲ್ಲಿ ಶಾಸಕರಾದ ಎಲ್ ನಾಗೇಂದ್ರ ರವರು
ಬರೆಯುವ ಮೂಲಕ ಪತ್ರಕರ್ತರಿಗೆ ಶುಭ ಕೋರಿದರು
ಆ ನಂತರ ಶಾಸಕರಾದ ಎಲ್ ನಾಗೇಂದ್ರ ಮಾತನಾಡಿ ರೋಗದಿಂದ ನರಳುವವರ ಪಾಲಿಗೆ ವೈದ್ಯರು ದೇವರ ಪ್ರತಿನಿಧಿಗಳಿದ್ದಂತೆ’

‘ಭಾರತೀಯ ಪರಂಪರೆಯಲ್ಲಿ ದೇವಲೋಕದ ಧನ್ವಂತರಿಯನ್ನು ಆರೋಗ್ಯದ ದೇವತೆ ಎಂದು ಪೂಜಿಸಲಾಗುತ್ತಿದೆ. ಚರಕ, ಶುಶ್ರುತರು ಪಾರಂಪರಿಕ ವೈದ್ಯರಾಗಿದ್ದುದು ಹೆಮ್ಮೆಯ ವಿಚಾರ. ತುಂಬೆ, ಬೇವಿನ ಸೊಪ್ಪಿನಿಂದಲೂ ರೋಗ ನಿವಾರಿಸುವ ಕಲೆ ಭಾರತೀಯ ಋಷಿಮುನಿಗಳಿಗೆ ಕರಗತವಾಗಿತ್ತು. ವೈದ್ಯಕೀಯ ಪದ್ದತಿಯಲ್ಲಿ ಸಾಕಷ್ಟು ಸಂಶೋಧನೆಗಳಾಗಿವೆ. ಆಗುತ್ತಲೂ ಇವೆ. ಗ್ರಾಮೀಣ ಭಾಗದ ಸರ್ಕಾರಿ ಮತ್ತು ಖಾಸಗಿ ವೈದ್ಯರ ಸೇವೆ ಅನನ್ಯವಾದುದು’ ಎಂದರು.
ರೋಗ ವಾಸಿ ಮಾಡುವಲ್ಲಿ ಹತ್ತಾರು ಆತಂಕಗಳನ್ನು ಎದುರಿಸುತ್ತಿರುವ ವೈದ್ಯರ ಬಗ್ಗೆ ಸಮಾಜ ಮೃದು ಭಾವ ತಾಳುವುದನ್ನು ರೂಢಿಸಿಕೊಳ್ಳಬೇಕು. ವೈದ್ಯರು ಪ್ರಾಣ ತೆಗೆಯುವವರಲ್ಲ. ರೋಗಿಗಳ ಜೀವ ಉಳಿಸುವುದು ಅವರ ಪರಮ ಕರ್ತವ್ಯವಾಗಿರುತ್ತದೆ. ರೋಗಿಗಳ ಕಡೆಯವರು ತಾಳ್ಮೆ ವಹಿಸಬೇಕು. ಖಾಯಿಲೆ ವಾಸಿ ಮಾಡುವಲ್ಲಿ ಶ್ರಮಿಸುವ ವೈದ್ಯರ ಸೇವೆಯನ್ನು ನೆನೆಯೋಣ’ ಎಂದರು.
ಬಿಜೆಪಿ ರಾಜ್ಯ ವಕ್ತಾರ ರಾದ ಎಂ ಜೆ ಮಹೇಶ್ ಮಾತನಾಡಿ
ಬಿಜೆಪಿ ರಾಜ್ಯ ವಕ್ತಾರ ಎಂ.ಜಿ.ಮಹೇಶ್ ಮಾತನಾಡಿ ಡಾ.ಬಿದಾನ್ ಚಂದ್ರ ರಾಯ್ ಅವರು ಪ.ಬಂಗಾಳದ ಮುಖ್ಯಮಂತ್ರಿಗಳಾಗಿದ್ದರೂ ಕೂಡ 14 ವರ್ಷಗಳ ತಮ್ಮ ಸಿಎಂ ಜೀವನವನ್ನು ವೈದ್ಯೋ ನಾರಾಯಣೋ ಹರಿ ಎಂಬ ಮಾತಿನಂತೆ ಹಗಲು ರಾತ್ರಿ ಜನತೆಯ ಶುಶ್ರೂಷೆಗೋಸ್ಕರ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರ ಉದಾತ್ತ ಕಾರ್ಯದ ನಿಮಿತ್ತ ಭಾರತ ಸರ್ಕಾರ ಜು.1ರಂದು ವೈದ್ಯರ ದಿನಾಚರಣೆಯನ್ನು ಆಚರಿಸುತ್ತಿದೆ. ಅವರು ಜನಿಸಿದ್ದು ಮತ್ತು ಪುಣ್ಯಸ್ಮರಣೆ ಎರಡೂ ಒಂದೇ ದಿನ. ಅದಕ್ಕಾಗಿ ಅವರ ಸೇವೆಯನ್ನು ಸ್ಮರಿಸಿ ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಕೋವಿಡ್ ಸಂಕಷ್ಟದಲ್ಲಿ ಕೂಡ ಸಾವಿರಕ್ಕೂ ಅಧಿಕ ವೈದ್ಯರು ಜನರ ಪ್ರಾಣ ಉಳಿಸಲು ತಮ್ಮ ಪ್ರಾಣ ಅರ್ಪಿಸಿದ್ದಾರೆ. ಈಗಲೂ ವೈದ್ಯರುಗಳು ಕೋವಿಡ್ ವಿರುದ್ಧ ಶ್ರಮಿಸುತ್ತಲೇ ಇದ್ದಾರೆ. ಅವರಿಗೆ ಬಿಜೆಪಿ ನಮನ ಸಲ್ಲಿಸುತ್ತದೆ ಎಂದರು. ಅದೇ ರೀತಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮ. ಪತ್ರಕರ್ತರೂ ಕೂಡ ಕೊರೋನಾದ ಕಾಲಘಟ್ಟದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೋರಾಟ ನಡೆಸಿದ್ದಾರೆ. ಅವರಿಗೂ ಬಿಜೆಪಿ ಕೃತಜ್ಞತೆಗಳನ್ನು ಅರ್ಪಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕರಾದ ಎಲ್ ನಾಗೇಂದ್ರ ,ಬಣ್ಣ ಮತ್ತು ಅರಗು ಕಾರ್ಖಾನೆ ಇಲಾಖೆಯ ಅಧ್ಯಕ್ಷರಾದ ಎನ್ ವಿ ಫಣೀಶ್ ,
ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಹೇಮಂತ್ ಕುಮಾರ್ ಗೌಡ ,
ರಾಜ್ಯ ವಕ್ತಾರರಾದ ಎಂ ಜೆ ಮಹೇಶ್ ,ಪ್ರಧಾನ ಕಾರ್ಯದರ್ಶಿಗಳಾದ ವಾಣೀಶ್ ಕುಮಾರ್,ಸೋಮ್ ಸುಂದರ್ ,ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾದ ಡಾ॥ ರವೀಂದ್ರ ,ಸಹ ಸಂಚಾಲಕರಾದ ಗಿರೀಶ್ , ಮಾಧ್ಯಮ ಸಂಚಾಲಕರಾದ ಮಹೇಶ್ ರಾಜ್ ಅರಸ್ ,ಸಹ ಸಂಚಾಲಕರಾದ ಪ್ರದೀಪ್ ಕುಮಾರ್ ,ಸಹ ವಕ್ತಾರರಾದ ಕೇಬಲ್ ಮಹೇಶ್ , ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾದ ಜಯಶಂಕರ್ ,
ವಿಕ್ರಂ ಅಯ್ಯಂಗಾರ್ ,ನಂದಕುಮಾರ್ ,ಚಂದ್ರಕಲಾ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ನಿಗಮ ನಿರ್ದೇಶಕಿ ರೇಣುಕ ರಾಜ್ ,ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರಾದ ಲಕ್ಷ್ಮೀದೇವಿ
ಹಾಗೂ ಇನ್ನಿತರರು ಹಾಜರಿದ್ದರು