ನಾಗರಹೊಳೆಯ ವೀರನಹೊಸಳ್ಳಿಯಿಂದ ಹೊರಡುವ ನಾಯಕ ಅಭಿಮನ್ಯು ಮತ್ತು ಸಂಗಡಿಗರು

ನಾಳೆ ವೀರನಹೊಸಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಟಿ.ಸೋಮಶೇಖರ್ ಅವರು ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡುವರು. ಕ್ಯಾಪ್ಟನ್ ಅಭಿಮನ್ಯುವಿನ ಜತೆಯಲ್ಲಿ 8 ಆನೆಗಳು ನಾಳೆ ಸಾಂಸ್ಕ್ರತಿಕ ಮೈಸೂರಿಗೆ ಬರಲಿವೆ

ಆನೆಗಳು ಮೈಸೂರಿಗೆ ಬಂದ್ರೆ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಸಿದ್ಧತಾ ಕಾರ್ಯಗಳಿಗೆ ಚಾಲನೆ ಸಿಕ್ಕಿದ್ದಂತೆ. ನಾಯಕ ಅಭಿಮನ್ಯು ನೇತೃತ್ವದಲ್ಲಿ ಗಜಪಯಣ ನಾಳೆ ಮೈಸೂರಿನತ್ತ ಹೊರಡಲಿದೆ. ನಾಗರಹೊಳೆಯ ವೀರನಹೊಸಳ್ಳಿಯಲ್ಲಿ ನಾಳೆ ಜಿಲ್ಲಾ ಉಸ್ತುವಾರಿ ಹೆಚ್.ಟಿ.ಸೋಮಶೇಖರ್ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡುವರು. ಪೂರ್ಣ ಕುಂಭದೊಂದಿಗೆ ಗಜಪಯಣವನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಗುವುದು. ಆನೆ ಶಿಬಿರಗಳಿಂದ ಆಗಮಿಸಿರುವ ದಸರಾ ಗಜಪಡೆ ಈಗ ವೀರನಹೊಸಳ್ಳಿಯಲ್ಲಿ ಸ್ವಾಗತಕ್ಕೆ ಸಜ್ಜಾಗಿವೆ.

ಅಶ್ವತ್ಥಾಮ ಇದೇ ಮೊದಲ ಬಾರಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.ಅಭಿಮನ್ಯು ಮುಂದಾಳ್ವದಲ್ಲಿ ಗೋಪಾಲಸ್ವಾಮಿ, ವಿಕ್ರಮ, ಕಾವೇರಿ, ಧನಂಜಯ, ಅಶ್ವತ್ಥಾಮ, ಚೈತ್ರಾ ಮತ್ತು ಲಕ್ಷ್ಮಿ ಇರಲಿದೆ. ಲಕ್ಷ್ಮಿ ಎರಡನೇ ಬಾರಿ ದಸರಾದಲ್ಲಿ ಭಾಗಿಯಾಗಲು ಅನುಮತಿ ಪಡೆದಿದ್ದಾಳೆ.
56 ವರ್ಷದ ಹಿರಿಯ ಅಭಿಮನ್ಯು ಈ ಸಲ ಕೂಡ ಚಿನ್ನದ ಅಂಬಾರಿ ಹೊರುತ್ತಿದ್ದಾನೆ. ನಾಳೆ ಮೈಸೂರಿಗೆ ಆಗಮಿಸುವ 8 ದಸರಾ ಆನೆಗಳು ಅರಣ್ಯ ಭವನಕ್ಕೆ ಬರುತ್ತವೆ.

ಇದೆ ತಿಂಗಳ 16 ರಂದು ಅಭಿಮನ್ಯು ನೇತೃತ್ವದ ಗಜಪಡೆಯನ್ನು ಮೈಸೂರು ಅರಮನೆಯ ಜಯ ಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಗುವುದು. ಇನ್ನು ಒಂದು ತಿಂಗಳ ಕಾಲ ಗಜಪಡೆ ಮೈಸೂರಿನ ಅರಮನೆ ಆನೆ ಶಿಬಿರದಲ್ಲಿ ಇರಲಿದ್ದು, ಬರುವ ಮಂಗಳವಾರದಿಂದ ಗಜಪಡೆಯ ತಾಲೀಮು ಆರಂಭವಾಗಲಿದೆ. ಒಟ್ಟಾರೆ ಮೈಸೂರಿನಲ್ಲಿ ಇನ್ನು ದಸರಾ ಆನೆಗಳದೆ ದರ್ಬಾರು.
ಚಿತ್ರಗಳು: ಪೈಲ್