ಆ ಕಾಲದಲ್ಲಿ ಪ್ರತಿಸಂಜೆ 7ಗಂಟೆಗೆ ಸರಿಯಾಗಿ ಸಂಪ್ರದಾಯಬದ್ಧ ಮಹಾರಾಜರು ಸಕಲವೈಭವದಿಂದ ರತ್ನಖಚಿತ ಸಿಂಹಾಸನದಲ್ಲಿ ಕುಳಿತಾಕ್ಷಣ ದಿಗ್ಗನೆ ಹೊತ್ತಿಕೊಳ್ಳುತ್ತಿದ್ದ 9ಲಕ್ಷ ಬಲ್ಬುಗಳು ಇಡೀ ಅರಮನೆಯನ್ನು 9ಗಂಟೆವರೆಗೆ ಬೆಳಗುತ್ತಿದ್ದವು. ಆಸ್ಥಾನ ವಿದ್ವಾಂಸರು ಮಾಂಡಲೀಕರು ಬಂಧುಮಿತ್ರರು ಸಖಿಸೈನಿಕರು ಮುಂತಾದವರ ಉಪಸ್ಥಿತಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ರಾಜದರ್ಬಾರು ಜಬರ್ರಾಗಿ ಜರುಗುತ್ತಿತ್ತು. 1970 ವರೆಗೂ ಜಂಬೂಸವಾರಿ ಮೆರವಣಿಗೆ ಚಿನ್ನದಂಬಾರಿಯೊಳಗೆ ಮುಂದುಗಡೆ ಮಹಾರಾಜರು ಹಿಂದುಗಡೆ ಅವರ ಸೋದರಮಾವ ಕುಳಿತಿರುತ್ತಿದ್ದರು. ಅನಿರೀಕ್ಷಿತವಾಗಿ 1971ರಿಂದ ಕೇಂದ್ರಸರ್ಕಾರವು ರಾಜದರ್ಬಾರ್ ರದ್ದುಪಡಿಸಿ ಮಹಾರಾಜರನ್ನು ಶ್ರೀಸಾಮಾನ್ಯನೆಂದು ಪರಿಗಣಿಸಿ ರಾಜಧನ ಜಾರಿಗೊಳಿಸಿ ರಾಜಪ್ರಭುತ್ವದ ಆಳ್ವಿಕೆ ಮುಗಿಸಿತು! 1972ರಿಂದ ಪ್ರಜಾಪ್ರಭುತ್ವದ ಜನತಾದಸರ ಪ್ರಾರಂಭವಾಗಿ ರಾಜ್ಯಸರ್ಕಾರದ ಜಂಬೂಸವಾರಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿಯ ಅಂಬಾರಿ, ಮೇಯರ್ ಕುದುರೆ ಸವಾರಿ, ರಾಜಕಾರಣಿಗಳ ತಂಡ, ಟ್ಯಾಬುಲೊ, ಗೋಲ್ಡನ್/ಸಿಲ್ವರ್ಕಾರ್ಡ್, ವಿ.ಐ.ಪಿ.ಟಿಕೆಟ್, ಲೈವ್ಟೆಲಿಕಾಸ್ಟ್ ವೀಕ್ಷಕವಿವರಣೆ, ಮುಂತಾದ ಅ[ನಾ]ವಶ್ಯಕತೆಗಳು ಸೇರಿಸಲ್ಪಟ್ಟವು? ಹತ್ತುದಿನ ಪರ್ಯಂತ ಮೈಸೂರುನಗರವು ಮದುಮಗನಂತೆ ಸಿಂಗಾರಗೊಂಡು ನೋಡುಗರ ಕಣ್ಮನ ಸೂರೆಗೊಳ್ಳುವಂತೆ ಇರುತ್ತದೆ.

ವಸ್ತುಪ್ರದರ್ಶನ:- ಎಲ್ಲರ ಅಚ್ಚುಮೆಚ್ಚಿನ ದಸರಾ ವಸ್ತುಪ್ರದರ್ಶನ ಪ್ರತಿವರ್ಷ ಸುಮಾರು 2-3ತಿಂಗಳು ಇರುತ್ತದೆ. ಬೆಳಗ್ಗೆ11ಗಂಟೆಯಿಂದ ಪ್ರಾರಂಭವಾದರೂ ಜನಜಂಗುಳಿಯಿಂದ ಕಳೆಕಟ್ಟುವುದು ಮಧ್ಯಾಹ್ನದ ನಂತರ. ಸಂಜೆಗತ್ತಲಲ್ಲಿ ಸಡಗರ ಪ್ರತಿಬಿಂಬಿಸುವ ರಂಗುರಂಗಿನ ದೀಪಾಲಂಕಾರ ಬಣ್ಣಬಣ್ಣದ ಉಡುಗೆತೊಡುಗೆ ಬಾಯಿಚಪ್ಪರಿಸುವಂಥ ತಿಂಡಿತಿನಿಸು ಕಣ್ಮನಸೆಳೆವ ವಸ್ತು-ವಸ್ತ್ರರಾಶಿ ಇವಕ್ಕೆಲ್ಲ ಪೂರಕವಾದಂತೆ ಕಲಾಕ್ಷೇತ್ರ್ರದ ಮನರಂಜನಾ/ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲ ವಯಸ್ಸಿನವರ ತನುಮನ ಸೆಳೆಯುತ್ತವೆ.

ಫಲಪುಷ್ಪಪ್ರದರ್ಶನ:- ಅಂಬಾವಿಲಾಸ ಅರಮನೆ ಪಕ್ಕದ ‘ಲಾರ್ಡ್ಕರ್ಜ಼ನ್’ ಪಾರ್ಕ್ನಲ್ಲಿ 9-10ದಿವಸ ಫಲಪುಷ್ಪ ಪ್ರದರ್ಶನವನ್ನು ಕರ್ನಾಟಕ ಸರ್ಕಾರ ತೋಟಗಾರಿಕಾ ಇಲಾಖೆ ಏರ್ಪಡಿಸಿರುತ್ತೆ. ತರಾವರಿ ಹಣ್ಣುಗಳ ಮತ್ತು ಹೂವುಗಳ ಪ್ರದರ್ಶನ-ಮಾರಾಟ ಇರುತ್ತದೆ. ಇದಕ್ಕೆ ಮೆರುಗು ನೀಡುವಂತೆ ಪ್ರತಿಸಂಜೆ ಹಳೇ-ಹೊಸಾ ಎರಡೂಬಗೆ ಆರ್ಕೆಷ್ಟ್ರಾ(ವಾದ್ಯಗೋಷ್ಥಿ) ನೃತ್ಯ ಸಂಗೀತ ಮುಂತಾದ ಆಕರ್ಷಣೀಯ ಮನರಂಜನಾ ಕಾರ್ಯಕ್ರಮ ಏರ್ಪಡಿಸಿರುತ್ತಾರೆ. ದಸರವೈಭವದ [ಪ್ರ]ದರ್ಶನಗಳು ವಿವಿಧ ದೇಶ ಭಾಷೆ ಜಾತಿ ಮತ ಪಂಡಿತ ಪಾಮರ ಮಗು ವೃದ್ಧ ಆದಿಯಾಗಿ ಪ್ರತಿಯೊಬ್ಬರನ್ನು ಕೈಬೀಸಿ ಕರೆಯುತ್ತವೆ. ರಾಷ್ಟ್ರಕವಿ ಕುವೆಂಪುರವರ ವಿಶ್ವಮಾನವ ಸಂದೇಶ ಸಾರುತ್ತವೆ!
ಕ್ರೀಡಾಸ್ಫರ್ಧೆ:- ಸಾವಿರಾರು ವರ್ಷದಿಂದ ಪ್ರಸಿದ್ಧವಾಗಿರುವ ಮೈಸೂರು ಜಂಗೀಕುಸ್ತಿ ಸಾಂಪ್ರದಾಯಿಕ ಕ್ರೀಡೆ ಸೇರಿದಂತೆ ಅನೇಕ ರೀತಿಯ ಆಟೋಟ ಸ್ಫರ್ಧೆಗಳು ಇರುತ್ತದೆ. ರಾಜ್ಯ ರಾಷ್ಟ್ರ ಅಂತರ್ರಾಷ್ಟ್ರ ಕ್ರೀಡಾಪಟುಗಳು ಪಾಲ್ಗೊಂಡು ದಸರಾಕೇಸರಿ, ದಸರಾಕುಮಾರ, ದಸರಾಶ್ರೀ ಕಪ್/ಟ್ರೋಪಿ/ಪ್ರಶಸ್ತಿಗಳಿಸಿ ಕ್ರೀಡಾಭಿಮಾನಿಗಳನ್ನು ಉಲ್ಲಾಸಪಡಿಸುವರು. ಇಲ್ಲಿವಿಜೇತರಾದ/ಗುರುತಿಸಿಕೊಂಡ ಅನೇಕ ಪ್ರತಿಭೆಗಳು ಪ್ರಖ್ಯಾತ ಕ್ರೀಡಾ ಪಟುವಾದ ಸಾವಿರಾರು ಉಧಾಹರಣೆಇವೆ.
ಚಲನಚಿತ್ರೋತ್ಸವ:- ನಗರ ಚಿತ್ರಮಂದಿರಗಳಲ್ಲಿ ಕಡಿಮೆ ಪ್ರವೇಶ ದರವಿದ್ದು [ವಿ]ದೇಶಗಳ ರಾಷ್ಟ್ರ-ಅಂತರ್ರಾಷ್ಟ್ರ ಪ್ರಶಸ್ತಿ ವಿಜೇತ ವಿವಿಧ ಭಾಷೆಯ ಜತೆಗೆ ಕನ್ನಡದ ಹಳೆ/ಹೊಸ ಚಲನಚಿತ್ರಗಳ ಪ್ರದರ್ಶನ ಇರುತ್ತದೆ. ಕೆಲವು ವರ್ಷದಿಂದ ಮಕ್ಕಳ ಚಿತ್ರೋತ್ಸವವನ್ನೂ ಆಯೋಜಿಸಲಾಗುತ್ತಿದೆ. ಎ[ಗೆ]ಳೆಯರ ತನುಮನ ಮುದಗೊಳಿಸುವ, [ವಿ]ಜ್ಞಾನ ವೃದ್ಧಿಗೊಳಿಸುವ, ಚಲನಚಿತ್ರ ಪ್ರದರ್ಶನವಿರುತ್ತೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗುತ್ತೆ. ಆ ಮೂಲಕ ಕನ್ನಡದವರಿಗೆ ಇತರ ದೇಶ-ಜನ-ಸಂಸ್ಕೃತಿ-ನಾಗರಿಕತೆ ಪರಿಚಯವಾಗುತ್ತದೆ. ಕನ್ನಡ ಚಿತ್ರೋದ್ಯಮಿಗಳಿಗೆ ಅನ್ಯಭಾಷೆ [ಪ್ರ]ದೇಶಗಳ ಚಿತ್ರನಿರ್ಮಾಣ ತಾಂತ್ರಿಕತೆಗಳ ಬಗ್ಗೆ ಅರಿವುಂಟಾಗುತ್ತೆ. ಭಾರತವು ವೈವಿಧ್ಯತೆಯಲ್ಲಿ ಏಕತೆ ಕಾಪಾಡಿಕೊಂಡಿದೆ ಎಂದು ಸಾಬೀತು ಪಡಿಸುವಂತೆ ಮತ್ತು ಚಿತ್ರರಸಿಕರ ತನುಮನ ಸೂರೆಗೊಳ್ಳುವಂತೆ ದಸರಾ ಚಲನ ಚಿತ್ರೋತ್ಸವ ಜರುಗುತ್ತದೆ.
ಯುವದಸರ:- ಎಲ್ಲರಿಗಾಗಿಒಬ್ಬರು-ಒಬ್ಬರಿಗಾಗಿಎಲ್ಲರೂ ನಾಣ್ಣುಡಿಗೆ ಒತ್ತುಕೊಡುವಂತೆ ಯುವದಸರಾ ಕಾರ್ಯಕ್ರಮಗಳು ಆರಂಭಗೊಂಡವು. ಹೊಸ ಪ್ರತಿಭೆಗಳನ್ನು ಗುರ್ತಿಸಲು ವೇದಿಕೆಯಾಗಿದೆ. ಯುವಪೀಳಿಗೆಗೆ ಮೀಸಲಾದ ಇಲ್ಲಿ ನವಯುವಕರು ವಿಶೇಷವಾಗಿ ಕಾಲೇಜು ವಿದ್ಯಾರ್ಥಿ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಸಾರ್ಥಕತೆ ಪಡೆಯುತ್ತಾರೆ. ಕಲೆ ಸಾಹಿತ್ಯ ನಟನೆ ನಾಟ್ಯ ಮುಂತಾದ ನೂರಾರು ವಿಭಾಗದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ ಯಶಸ್ವಿಯಾಗುತ್ತಾರೆ. ಯುವಕರಲ್ಲಿ ಭಾರತೀಯ[ಐಕ್ಯ]ತೆ ಮೈಗೂಡಿಸಿಕೊಳ್ಳಲು ನೆರವಾಗುವಂಥ ವಿಚಾರ ಸಂಕಿರಣ, ವಿಶೇಷ ಉಪನ್ಯಾಸ ಇತ್ಯಾದಿ ಶೈಕ್ಷಣಿಕ, ಸಾಂಸ್ಕೃತಿಕ ಮೂಲದ ಸರ್ವಭಾಷಾ ಗೋಷ್ಠಿಗಳು ಇರುತ್ತವೆ. ಈ ಮೂಲಕ ಅನೇಕ ಯುವ ಪ್ರತಿಭೆಗಳು ಹೊರಬಂದು ರಾಷ್ಟ್ರ-ಅಂತರ್ರಾಷ್ಟ್ರ ಮಟ್ಟದ ಸ್ಫರ್ಧೆಯಲ್ಲಿ ಭಾಗವಹಿಸಿ ನಾಡಿಗೆ ಕೀರ್ತಿ ತಂದಿರುವ ಉಧಾಹರಣೆಗಳಿವೆ.

ಸರ್ಕಸ್:- ಎಲ್ಲಾ ವಯಸ್ಸಿನವರನ್ನೂ ಆಕರ್ಷಿಸಿ ಖುಷಿ ಕೊಡುವ ಸಹಜ ಕಲಾವಿದರ ನೈಜ ಪ್ರದರ್ಶನವೆ ಸರ್ಕಸ್! ಇದೊಂದು ಅಧ್ಭುತ ಚಾಕ ಚಕ್ಯತೆಯ ಸಾಹಸ ಗಾಥೆ! ಇಂಥ ಮನರಂಜನೆ ಆಟದಿಂದ ನೂರಾರು ಮನುಷ್ಯ/ಪ್ರಾಣಿ/ಪಕ್ಷಿಗೆ ಸಾಕಷ್ಟು ನೋ[ನಲಿ]ವು ಇರುತ್ತದೆ. ಕೆಲವು ವ್ಯಾಯಾಮಗಳು ಅಚ್ಚರಿಗೊಳಿಸಿದರೂ ಇನ್ನುಕೆಲವು ಉಸಿರುಕಟ್ಟಿಸುತ್ತವೆ. ಪ್ರತಿವರ್ಷ ಮೊಕ್ಕಾಂ ಹೂಡುತ್ತಿದ್ದ ಕಮಲ/ಜೆಮಿನಿ/ರಾಜಾ ಸರ್ಕಸ್ ಕಂಪನಿಗಳು ಅವಸಾನದತ್ತ ಸಾಗಿ 2\3 ವರ್ಷಕ್ಕೊಮ್ಮೆ/ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಿವೆ. ಭವಿಷ್ಯದಲ್ಲಿ ಪೂರ್ಣ ಮಾಯವಾಗುವುದರಲ್ಲಿ ಸಂಶಯವಿಲ್ಲ. ಆ ಕಾಲದಲ್ಲಿ ಪ್ರಾಣಿ-ಮನುಷ್ಯರ ಸಾಹಸ ಕ[ವ್ಯ]ಥೆ ಎದ್ದು ಕಾಣುತ್ತಿತ್ತು, ಈ ಕಾಲದಲ್ಲಿ ಸಾಹಸಿ ಮನುಷ್ಯರಿಲ್ಲ ಪ್ರಾಣಿಯಂತೂ ಇಲ್ಲವೇ ಇಲ್ಲ. ಆಧುನಿಕತೆ ಹೆಸರಲ್ಲಿ ಯಂತ್ರ-ತಂತ್ರ-ಮಂತ್ರದ ಢೋಂಗಿ ಪ್ರದರ್ಶನ ನೀಡುತ್ತಾರೆ. ಆದ್ದರಿಂದ ಅಂದಿನ ಸರ್ಕಸ್ ನವರಸ! ಇಂದಿನ ಸರ್ಕಸ್ ನೀರಸ?
ಬೊಂಬೆಕೂರಿಸುವುದು ಮುಂತಾದ ಮಹಿಳೆ-ಮಕ್ಕಳ ವಿಶೇಷ [ಪ್ರ]ದರ್ಶನ:- ಮೈಸೂರು ನಗರದಲ್ಲಿ ಮಾತ್ರವಲ್ಲದೆ ಹಳೇ ಮೈಸೂರು ರಾಜ್ಯದ ಎಲ್ಲ ಭಾಗದಲ್ಲು ಮನೆಮನೆಯಲ್ಲಿ ದಸರಾಬೊಂಬೆ ಕೂರಿಸುವ ಸಂಪ್ರದಾಯ/ಪದ್ಧತಿ ಇವತ್ತಿಗೂ ರೂಢಿಯಲ್ಲಿದೆ! ಪ್ರತಿಯೊಂದು ಮನೆಯಲ್ಲು ವಿಶೇಷತೆ ಎದ್ದು ಕಂಡು ಕಣ್ಮನ ಸೆಳೆಯುತ್ತದೆ. ಮಹಿಳಾ ವಿಶೇಷದ ಮೋಟಾರ್ ಕಾರ್ ರೇಸ್, ಕುದುರೆ ರೇಸ್, ಕರಕುಶಲ/ಲಲಿತ/ ರಂಗೋಲಿ/ಕುಂಚ/ಚಿತ್ರ/ಕಲಾ/ಪ್ರತಿಭಾ ಪ್ರದರ್ಶನ/ಸ್ಫರ್ಧೆ ಇರುತ್ತದೆ! ಸೌಂದರ್ಯಸ್ಪರ್ಧೆ [ಮಿಸ್ದಸರಾ,ಮಿಸೆಸ್ದಸರಾ,ಇತ್ಯಾದಿ] ನಾಡಕ್ರೀಡೆ, ಸ್ಥಳೀಯಕ್ರೀಡೆ, ಗ್ರಾಮೀಣಕ್ರೀಡೆ-ಸ್ಪರ್ಧೆ ನಾಟಕ, ನೃತ್ಯ, ಸಂಗೀತ, ಗಾಯನ, ವಾದನ, ಜಾನಪದ, ಮುಂತಾದ ಗೋಷ್ಠಿ/ಸ್ಫರ್ಧೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂಥವರನ್ನೂ ಆಕರ್ಷಿಸುತ್ತೆ. ಚಿಣ್ಣರಿಗೆ ಮೀಸಲಿರುವ ಮಕ್ಕಳಲೋಕ, ಬಾಲೋದ್ಯಾನ, ಮಿನಿಆಟೋಟ ಸ್ಪರ್ಧೆ, ಬುದ್ದಿಗೆಗುದ್ದು, ಜ್ಞಾಪಕಶಕ್ತಿ, ಸಾಮಾನ್ಯಜ್ಞಾನ ಪ್ರದರ್ಶನ/ಸ್ಫರ್ಧೆ/ಪರೀಕ್ಷೆ ಮುಂತಾದವು ಪುಟಾಣಿಗಳಿಗೆ ಅದ್ಭುತ ಮನರಂಜನೆ ನೀಡಿ ಅರೆಕ್ಷಣ ಆನಂದಲೋಕಕ್ಕೆ ಕರೆದೊಯ್ಯುತ್ತದೆ. ಇಡೀ ಕುಟುಂಬಕ್ಕೆ ಅಪರೂಪದ ಅಪರಿಮಿತ ಆನಂದ ನೀಡುತ್ತದೆ.
ದಸರಾ ಸುತ್ತಮುತ್ತ
ಸಹಾಯವಾಣಿ/ಧರ್ಮಛತ್ರ:- ದಸರಾ ಉತ್ಸವಕ್ಕೆ ವಿಶ್ವದಾದ್ಯಂತದಿಂದ ಬರುವ ಪ್ರವಾಸಿಗರನ್ನು ಅತಿಥಿದೇವರು ಎಂದು ಸತ್ಕರಿಸುವವರು, ಪ್ರತಿಯೊಬ್ಬ ಯಾತ್ರಿಕರನ್ನು ಪ್ರೀತಿವಿಶ್ವಾಸ ಗೌರವಾದರಗಳಿಂದ ಕಂಡು ಸಚ್ಚಾರಿತ್ರ್ಯದ ಸಂಪ್ರದಾಯಕ್ಕೆ ಚ್ಯುತಿಬಾರದಂತೆ ಎಚ್ಚರವಹಿಸುವವರು, ಟಾಂಗ ಆಟೊರಿಕ್ಷ ಟ್ಯಾಕ್ಸಿ ಬಸ್ ಡ್ರೈವರ್-ಗೈಡ್ ಆದಿಯಾಗಿ ಪ್ರತಿಯೊಬ್ಬರು ಸುಸಂಸ್ಕೃತರಾಗಿ ವರ್ತಿಸುವವರು, ದಸರಾ ವೀಕ್ಷಣೆಗೆ ಬಂದವರು ವಿ(ಸ್ವ)ದೇಶಿ ಯಾರೇಇರಲಿ ಅದರಲ್ಲೂ ಮಹಿಳಾಪ್ರವಾಸಿಗರನ್ನು ಮಾತೆ/ಸೋದರಿಯಂತೆ ಭಾವಿಸಿ ಶೋಷಣೆಮಾಡದೆ ಜವಾಬ್ಧಾರಿ ನಾಗರಿಕರಂತೆ ನಡೆದುಕೊಳ್ಳುವವರು, ಅರಮನೆಗಳ ನಗರದ ಮೈಸೂರಿಗರ ಬಗ್ಗೆ ಇರುವ ಗೌರವ ನಂಬಿಕೆ ಉಳಿ[ಬೆಳೆ]ಸಿಕೊಳ್ಳುವವರು, ಇವತ್ತಿಗೂ ಇದ್ದಾರೆ. ಅನೇಕ ಸರ್ಕಾರಿ-ಖಾಸಗಿ ಸಹಾಯವಾಣಿ, ಮಾರ್ಗದರ್ಶನ, ಊಟವಸತಿ, ಕೇಂದ್ರ[ಧರ್ಮಛತ್ರ]ಗಳು ಇವೆ?!
ಪ್ರೇಕ್ಷಣೀಯಸ್ಥಳ:- ಮೈಸೂರಿನಲ್ಲಿರುವ 9ಅರಮನೆಗಳು; ಅಂಬಾವಿಲಾಸಪ್ಯಾಲೆಸ್ ಜಗನ್ಮೋಹನಪ್ಯಾಲೆಸ್ ವಸಂತಮಹಲ್ ಲಲಿತಮಹಲ್ ಚಿತ್ತರಂಜನಮಹಲ್ ಜಯಲಕ್ಷ್ಮಿವಿಲಾಸ ರಾಜೇಂದ್ರವಿಲಾಸ ಚೆಲುವಾಂಬವಿಲಾಸ ಅಲೋಕ! ಇದಲ್ಲದೆ ಪ್ರಖ್ಯಾತ ಸಂತಫಿಲೋಮಿನಚರ್ಚ್ ಚಾಮರಾಜೇಂದ್ರಮೃಗಾಲಯ,ರೇಷ್ಮೆಕಾರ್ಖಾನೆ,ಗಂಧದಣ್ಣೆಕಾರ್ಖಾನೆ,ರೈಲುಮ್ಯೂಸಿಯಂ,ಪ್ರೀಮಿಯರ್ಸ್ಟುಡಿಯೊ, ಇಂದಿರಾಗಾಂಧಿ ರಾಷ್ಟ್ರೀಯ ಮಾನವಸಂಗ್ರಹಾಲಯ, ಮೈ.ವಿ.ವಿ, ಕರಾಮುವಿ, ಗಂಗೂಬಾಯಿಹಾನಗಲ್ಸಂಗೀತ ವಿವಿ, ಜೆಎಸ್ಎಸ್ ವಿವಿ, ಪ್ರಜಾಪಿತಬ್ರಹ್ಮಕುಮಾರಿ ವಿವಿ, ಇನ್ಫೋಸಿಸ್ ಚಾಮುಂಡಿಬೆಟ್ಟ-ನಂದಿ, ನಂಜನಗೂಡು, ಶ್ರೀರಂಗಪಟ್ಟಣ, ಕೃಷ್ಣರಾಜಸಾಗರ, ರಂಗನತಿಟ್ಟುಪಕ್ಷಿಧಾಮ, ಶಿವನಸಮುದ್ರ-ಗಗನಚುಕ್ಕಿ ಭರಚುಕ್ಕಿ ಜಲಪಾತ, ಮುಂತಾದ ಪ್ರವಾಸಿತಾಣಗಳು ನೋಡಲೇಬೇಕಾದವು!
[ಉಪ]ಸಮಿತಿಗಳ ಉದ್ಘಾಟನೆ:-ಹೆಲಿಕಾಪ್ಟರ್ಬಳಸಿ ಕೇವಲ 4ಗಂಟೆಯೊಳಗೆ ಮುಖ್ಯಮಂತ್ರಿ ಜಿಲ್ಲಾಉಸ್ತುವಾರಿಮಂತ್ರಿ ಪ್ರವಾಸೋದ್ಯಮ ಮಂತ್ರಿ ಕನ್ನಡಸಂಸ್ಕೃತಿಮಂತ್ರಿ ಸೇರಿ, ಅಂದಾಜು 4 ಡಜ಼ನ್[ಮರಿ]ಸಚಿವರು ಹಾಗೂ[ಉಪ]ಸಮಿತಿ ಪದಾಧಿಕಾರಿಗಳು ಡಜ಼ನ್ಗಟ್ಟಲೆ ಸರಣಿ ಉದ್ಘಾಟನ ಕಾರ್ಯಕ್ರಮ ಮುಗಿಸಿ ತಂತಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ನೂರಾರು ದಸರಾ[ಉಪ]ಸಮಿತಿ ಅಸ್ತಿತ್ವಕ್ಕೆ ಬರುತ್ತವೆ. ಯಾವುದೆ ವಿಭಾಗದ [ಉಪ]ಸಮಿತಿಗೆ ಸೇರ್ಪಡೆಯಾಗಲು ಅಥವಾ ಗೋಷ್ಠಿಯಲ್ಲಿ ಭಾಗವಹಿಸಲು ಉನ್ನತಮಟ್ಟದ ಶಿಫಾರಸ್ಸು ಬೇಕೇಬೇಕು? ಏಕೆಂದರೆ, ರಾಮ[ಕೃಷ್ಣ]ನ ಲೆಕ್ಕ ತೋರಿಸಿ ಆರ್ಥಿಕ ಸ್ವಅಭಿವೃದ್ಧಿ ಪಡಿಸಿಕೊಳ್ಳಲು, ಅನರ್ಹರೂ ಅರ್ಹತಾಪತ್ರ ಪಡೆಯಲು ಅಥವಾ ‘ದಸರಾ[ಸ್ವಾರ್ಥ]ಶ್ರೀ’ ಪ್ರಶಸ್ತಿಗೆಲ್ಲಲು ಇದು ಸುವರ್ಣಾವಕಾಶ. ಯಾರ್ದೊದುಡ್ಡು ಯಲ್ಲಮ್ಮನಜಾತ್ರೆ, ಬೆಂದಮನೇಲಿ ಇರಿದಷ್ಟೆಲಾಭ, ನಾಮುಂದು ತಾಮುಂದು ಲಾಭಿ, ಯಾರಖಾತೆಗೆಎಷ್ಟು ಒಂದೇರಾತ್ರಿ[ಅವೇಳೆ]ಯಲ್ಲಿ ತೀರ್ಮಾನಿಸಿ ಸರ್ವರಿಗೂಸಮಪಾಲು ಮೀರದಂತೆ ಹಂಚಿಕೊಳ್ಳುವರು, ಅ-ನ್ಯಾಯ ಅ-ನೀತಿ ಅ-ಧರ್ಮ ಅ-ಪ್ರಾಮಾಣಿಕತೆ ಕಾಪಾಡಿಕೊಳ್ಳುವರು?ಇಂಥ ಅ-ಶಿಸ್ತಿನಸಿಪಾಯಿಗಳಿಗೆ ಅ-ಮಾನುಷಶಕ್ತಿಗಳಿಗೆ ಜೈಅನ್ನೋಣ? ಪಾ[ಪಿ]ಪ!

ಗಂಡುಭೇರುಂಡ-ಕರ್ನಾಟಕ:- 1399-1947 ವರೆಗೆ ಯದುಕುಲದ 26ಮಹಾರಾಜರು ಗಂಡುಭೇರುಂಡ ಲಾಂಛನದಿಂದ ಮೈಸೂರು ಸಾಮ್ರಾಜ್ಯ ಆಳಿದರು. ಸಂಸ್ಥಾನ-ಪ್ರಾಂತ್ಯವಾಗಿತ್ತು, ೯ಜಿಲ್ಲೆಗಳ ಮೈಸೂರುರಾಜ್ಯ 26-01-1950 ರಲ್ಲಿ ಭಾರತದ ರಾಜ್ಯಗಳ ಪುನರ್ ವಿಂಗಡಣೆ ಆದಾಗ 01-11-1956 ರಲ್ಲಿ 18ಜಿಲ್ಲೆಗಳಿಂದ ವಿಶಾಲಮೈಸೂರುರಾಜ್ಯ(ನ್ಯೂಮೈಸೂರ್ಸ್ಟೇಟ್) ಉದಯವಾಯ್ತು. ಮುಖ್ಯಮಂತ್ರಿ ಡಿ.ದೇವರಾಜಅರಸು ಕಾಲದಲ್ಲಿ ದಿ.01-11-1973ರಿಂದ ಕರ್ನಾಟಕ ರಾಜ್ಯ ಎಂದು ಪುನರ್ನಾಮಕರಣಗೊಂಡಿತು.
ಯದುವನ/ಮಧುವನ:- ನಗರದ ದಕ್ಷಿಣಕ್ಕೆ ನಂಜನಗೂಡು ರಸ್ತೆಬಳಿ ರಾಜಕುಟುಂಬಕ್ಕೆ ಮೀಸಲಾದ ಸ್ಮಶಾನವಿದೆ. ಪ್ರಾರಂಭಕ್ಕೆ ಯದುವನ/ ಮನುವನ ಎಂದಿದ್ದುದು ಕಾಲಕ್ರಮೇಣ ಮಧುವನವೆಂದಾಯ್ತು? ಇದರ ಪಕ್ಕದಲ್ಲೆ ಸಾರ್ವಜನಿಕ ಸ್ಮಶಾನವಿದೆ. ಇವೆರಡರಮಧ್ಯೆ ಸತ್ಯಹರಿಶ್ಚಂದ್ರ ಮತ್ತು ಸ್ಮಶಾನರುದ್ರನ ದೇವಾಲಯಗಳಿದ್ದು, ಹೊಂದಿಕೊಂಡಂತೆ ಅನೇಕ ದೇವಸ್ಥಾನ-ಮಠಗಳೂ ಇವೆ. ಸಾಮಾನ್ಯವಾಗಿ ಭಾರತ/ಕರ್ನಾಟಕ ರಾಜ-ಮಹಾರಾಜರ ಸಮಾಧಿಗಳು ಸ್ಮಾರಕವಾಗಿರುವುದು ಸತ್ಯ? ಆದರೆ ಮೈಸೂರು ದೊರೆಗಳ ಮಧುವನ ಕಡೆಗಣಿಸಲ್ಪಟ್ಟಿದೆ. ರಾಜ ಕುಟುಂಬದವರಾಗಲೀ ರಾಜಕಾರಣಿಗಳಾಗಲೀ ಇತ್ತ ಗಮನಹರಿಸದೆ ಕಾಗೆಗೂಬೆಗಳ ನೆಲೆಬೀಡಾಗಿದ್ದು ಮೈಸೂರು ನಾಗರಿಕರಾದಿ ಎಲ್ಲರೂ ವಿಷಾದ ಪಡುವಂತಿದೆ. ಈಗಲಾದರೂ ಮಧುವನದ ನಿರ್ವಹಣೆ ಜವಾಬ್ಧಾರಿಯನ್ನು ಸಂಬಂಧಪಟ್ಟವರು ತೆಗೆದುಕೊಳ್ಳುವರೇ? 10.11.2013 ರಂದು ವಿಧಿವಶರಾದ ಯದುವಂಶದ ಕೊನೆಯಕೊಂಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅಂತಿಮ ಸಂಸ್ಕಾರವು ಮಧುವನದಲ್ಲಿ ಜರುಗಿದಾಗ ಅದರ ಅವನತಿ ಕಂಡು ಹಿರಿತಲೆಗಳು ಮಮ್ಮಲ ಮರುಗಿ ಕಣ್ಣೀರು ಸುರಿಸಿದರು! ಶ್ರೀರಂಗಪಟ್ಟಣದ ಹೈದರಾಲಿ-ಟಿಪ್ಪುಸುಲ್ತಾನ್ ಗೋರಿಗಳ ಗುಂಬಜ಼್ ತರಹವೇ ಮೈಸೂರು ಮಹಾರಾಜರುಗಳನ್ನು ನೆನಪಿಸುವ ಸಮಾಧಿಗಳನ್ನು ಇಲ್ಲಿ ನಿರ್ಮಿಸಿ ಪ್ರತಿಯೊಂದಕ್ಕು ಮಾಹಿತಿ ಫಲಕ ಹಾಕಿ ಐತಿಹಾಸಿಕ-ಸ್ಮಾರಕವನ್ನಾಗಿಸಲಿ! ಇದು ಯಾರ ಹೊಣೆ ಎಂಬುದೆ ಯಕ್ಷಪ್ರಶ್ನೆ?

ಕುಮಾರಕವಿ ನಟರಾಜ್[9036976471]
ಬೆಂಗಳೂರು-560072