ಅಭಿಮನ್ಯು: 1970ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೆಶದಲ್ಲಿ ಸೆರೆ ಹಿಡಿಯಲಾದ ಈ ಆನೆಯು ಕೂಬಿಂಗ್ ಸ್ಪೆಷಲಿಸ್ಟ್ ಎಂದೇ ಜನಪ್ರಯವಾಗಿದೆ. ಕಾಡಾನೆ, ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಹಾಗೂ ಆನೆ ಪಳಗಿಸುವುದರಲ್ಲಿ ನಿಸ್ಸೀಮ. ಈವರೆಗೆ 150 ಕಾಡಾನೆ ಹಾಗೂ 50 ಹುಲಿಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಯಶಸ್ವಿಯಾಗಿರುವುದು ವಿಶೇಷ.

56 ವರ್ಷದ ಅಭಿಮನ್ಯು ಆನೆಗೆ ಮಾವುತನಾಗಿ ವಸಂತ, ಕವಾಡಿಯಾಗಿ ರಾಜು ಇದ್ದು, ಈ ಆನೆ 2.72 ಮೀತ್ತರ, 3.51 ಉದ್ದವಿದ್ದು 4720 ಕೆಜಿ ತೂಕವನ್ನು ಹೊಂದಿದೆ.
ಗೋಪಾಲಸ್ವಾಮಿ: ಮತ್ತಿಗೋಡು ಆನೆ ಶಿಬಿರದ ಗೋಪಾಲಸ್ವಾಮಿ ಆನೆಯನ್ನು 2006 ರಲ್ಲಿ ಸಕಲೇಶಪುರದ ಎತ್ತೂರಿನಲ್ಲಿ ಸೆರೆ ಹಿಡಿಯಲಾಯಿತು. ಕಾಡಾನೆ ಮತ್ತು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗುವುದಲ್ಲದೇ, 2012ರಿಂದ ದಸರಾ ತ್ಸವದಲ್ಲಿ ಭಾಗವಹಿಸುತ್ತಿದ್ದಾನೆ. ಸೌಮ್ಯ ಸ್ವಭಾವದ ಗೋಪಾಲಸ್ವಾಮಿಗೆ 38 ವರ್ಷಗಳಾಗಿದ್ದು, 2.85 ಎತ್ತರ ಹಾಗೂ 3.42 ಮೀಟರ್ ಉದ್ದವಿರುವ ಈ ಆನೆ 4420 ಕೆ.ಜಿ. ತೂವಿದೆ. ಮಾವುತನಾಗಿ ಜೆ.ಡಿ. ಮಂಜು. ಕವಾಡಿಗನಾಗಿ ಸೃಜನ್ ಕಾರ್ಯನಿರ್ವಹಿಸುತ್ತಿದ್ದಾರೆ.

ವಿಕ್ರಮ: ಕಳೆದ 18ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಈ ಆನೆ 2015 ರಿಂದ ಪಟ್ಟದ ಆನೆಯಾಗಿ ಗಮನ ಸೆಳೆದಿದೆ. 1990ರಲ್ಲಿ ದೊಡ್ಡಬೆಟ್ಟ ಅರಣ್ಯದಲ್ಲಿ ಸೆರೆ ಹಿಡಿಯಲಾದ ಈ ಆನೆ ಮೃದಯ ಸ್ವಾಭವ ಉಳ್ಳದ್ದು. ದುಬಾರೆ ಆನೆ ಶಿಬಿರದ ವಿಕ್ರಮ ಆನೆಗೆ ೫೮ ವರ್ಷಗಳಾಗಿದ್ದು, 2.89 ಮೀಟರ್ ಎತ್ತರ ಹಾಗೂ 3.43 ಮೀಟರ್ ಉದ್ದವಿದ್ದು3820 ಕೆಜಿ ತೂಕ ಹೊಂದಿದೆ. ಪುಟ್ಟ ಮತ್ತು ಹೇಮಂತ್ ಕುಮಾರ್ ಮಾವುತ ಮತ್ತು ಕವಾಡಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾವೇರಿ: ದುಬಾರೆ ಆನೆ ಶಿಬಿರದ ಈಕೆ ಕಳೆದ 09 ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, 2009ರಲ್ಲಿ ಸೋಮವಾರಪೇಟೆಯ ಆಡಿನಾಡೂರು ಅರಣ್ಯದಲ್ಲಿ ಸೆರೆ ಹಿಡಿಯಲಾಯಿತು. 44 ವರ್ಷದ ಕಾವೇರಿ 2.60 ಎತ್ತರ ಹಾಗೂ ೩.೩೨ ಉದ್ದವಿದ್ದು, 3220 ಕೆಜಿ ತೂಕ ಹೊಂದಿದೆ. ಈಕೆಗೆ ಡೋಬಿ ಮತ್ತು ರಂಜನ್ ಮಾವುತ ಮತ್ತು ಕವಾಡಿಯಾಗಿ ಇದ್ದಾರೆ.

ಧನಂಜಯ: ದುಬಾರೆ ಆನೆ ಶಿಬಿರದ ಧನಂಜಯ ಕಳೆದ 3 ವರ್ಷಗಳಿಂದ ದಸರಾ ಉತ್ಸವದಲ್ಲಿ ಭಾಗವಹಿಸುತ್ತಿದ್ದು, 2012ರಲ್ಲಿ ಹಾಸನ ಜಿಲ್ಲೆ ಯಸಳೂರಿನಲ್ಲಿ ಸೆರೆ ಹಿಡಿಯಲಾಯಿತು. ಆನೆ ಮತ್ತು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಈ ಆನೆಗೆ 42 ವರ್ಷಗಳಾಗಿದ್ದು, 2.92 ಮೀಟರ್ ಎತ್ತರ ಹಾಗೂ 3.84 ಮೀಟರ್ ಉದ್ದವಿದ್ದು, 4050 ಕೆ.ಜಿ. ತೂಕ ಹೊಂದಿದೆ. ಭಾಸ್ಕರ್ ಮತ್ತು ಮಣಿ ಮಾವುತ ಮತ್ತು ಕವಾಡಿಯಾಗಿ ಕೆಲಸ ಮಾಡುತ್ತಿದ್ದಾರೆ.

ಚೈತ್ರ: ರಾಮಾಪುರ ಆನೆ ಶಿಬಿರದ ಈಕೆ ಅರಣ್ಯ ಇಲಾಖೆ ಆನೆ ಶಿಬಿರದಲ್ಲಿ ಗಂಗೆ ಎಂಬಾಕೆಗೆ ಜನಿಸುತ್ತಾಳೆ. ಹುಲಿ, ಆನೆ ಸೆರೆ ಹಿಡಿಯುವ ಕಾರ್ಯಾಚರನೆಯಲ್ಲಿ ಭಾಗವಹಿಸುವ ಈಕೆ 2018ರಲ್ಲಿ ದಸರಾ ಉತ್ಸವದಲ್ಲಿ ಭಾಗವಹಿಸಿದ್ದಳು. 48 ವರ್ಷದ ಚೈತ್ರ 2.30 ಮೀಟರ್ ಎತ್ತರ, 3.10 ಮೀಟರ್ ಉದ್ದವಿದ್ದು, 2600ಕೆಜಿ ತೂಕವಿದೆ. ಈಕೆಯನ್ನು ಮಾವುತ ಭೀಜ, ಕವಾಡಿ ಕಲಿಂಪಾಷ ಪೋಷಣೆ ಮಾಡುತ್ತಿದ್ದಾರೆ.
ಲಕ್ಷ್ಮೀ: ಗಜಪಡೆಯ ಗಂಡಾನೆಗಳಿಗೆ ಪ್ರಮುಖ ಆಕರ್ಷಣೆಯಾಗಿರುವ ಈಕೆ 20ರ ಹರೆಯದ ಸುಂದರಿ. ಅತಿ ಚಿಕ್ಕವಯಸ್ಸಿನ ಲಕ್ಷ್ಮೀ

ರಾಮಾಪುರ ಆನೆ ಶಿಬಿರದ ಈಕೆ ತಾಯಿಯಿಮದ ಬೇರ್ಪಟ್ಟು ಅನಾಥಳಾಗಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಕರೆತಂದು ಆರೈಕೆ ಮಾಡಿರುತ್ತಾರೆ. ಆನೆ ಮತ್ತು ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ಭಾಗಿಯಾಗುವ ಈ ಆನೆ 2016ರ ದಸರಾ ಉತ್ಸವದಲ್ಲಿ ಪಾಲ್ಗೊಂಡಿದೆ. 20ವರ್ಷ ವಯೋಮಾನದ ಲಕ್ಷ್ಮೀ 2.92 ಮೀಟರ್ ಎತ್ತರ ಹಾಗೂ 2.60 ಮೀಟರ್ ಉದ್ದವಿದ್ದು 2540 ಕೆ.ಜಿ. ತೂಕವಿದ್ದಾಳೆ. ಈಕೆಗೆ ಚಂದ್ರ ಮತ್ತು ಲವ ಮಾವುತ ಮತ್ತು ಕವಾಡಿಯಾಗಿ ಕೆಲಸ ಮಾಡುತ್ತಿದ್ದಾರೆ.
ಅಶ್ವತ್ಥಾಮ
ಕಾಡಂಚಿನಲ್ಲಿ ಪುಂಡಾಟ ನಡೆಸಿ, ಅರಣ್ಯ ಇಲಾಖೆಗೆ ಸರೆ ಸಿಕ್ಕ ನಾಲ್ಲು ವರ್ಷದಲ್ಲೇ ದಸರಾ ಉತ್ಸವಕ್ಕೆ ಆಯ್ಕೆ ಆಯ್ಕೆಯಾದ ಅಶ್ವಥಾಮ ಮೊದಲ ಬಾರಿಗೆ ನಾಡ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದೆ.

ಹಾಸನ ಜಿಲ್ಲೆಯ ಸಕಲೇಶಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಪದೆ ಪದೇ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನುಂಟು ಮಾಡಿದ್ದ ಕಾಡಾನೆ ಸೆರೆಗೆ ಸ್ಥಳೀಯರಿಂದ ಒತ್ತಡ ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ 2017ರಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಗಿತ್ತು. ಬಳಿಕ ದೊಡ್ಡಹರವೆ ಆನೆ ಶಿಬಿರದಲ್ಲಿ ಇಟ್ಟು ತರಬೇತಿ ನೀಡಿ ಅಶ್ವತ್ಥಾಮ ಎಂದು ನಾಮಕರಣ ಮಾಡಲಾಗಿತ್ತು. ಆರಂಭದಲ್ಲಿ ಮುಂಗೋಪಿಯಾಗಿದ್ದ ಅಶ್ವತ್ಥಾಮ ಮಾವುತ ಶಿವು ಹಾಗೂ ಕವಾಡಿ ಗಣೇಶನ ಮಾತು ಕೇಳುವ ಮೂಲಕ ಸೌಮ್ಯ ಸ್ವರೂಪಿಯಾಗಿ ಮಾರ್ಪಾಡಾಗಿದ್ದ.
ಪ್ರಸ್ತುತ 34 ವರ್ಷದ ಅಶ್ವತ್ಥಾಮ 2.85 ಮೀಟರ್ ಎತ್ತರ, 3.46 ಮೀಟರ್ ಉದ್ದ ಶರೀರ ಹೊಂದಿದ್ದು, 3630ಕೆಜಿ ತೂಕವಿದ್ದಾನೆ. ಸಮತಟ್ಟಾದ ಬೆನ್ನು ಹೊಂದಿರುವ ಈ ಗಂಡಾನೆ ಭವಿಷ್ಯದ ಅಂಬಾರಿ ಆನೆಯಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣ ಹೊಂದಿದ್ದಾನೆ.