ರೈತರು ಲಾಭದಾಯಕ ಉಪ ಕಸುಬುಗಳಿಗೆ ಹೆಚ್ಚು ಒತ್ತು ನೀಡಿ: ಶಾಸಕ ಯು ಟಿ ಖಾದರ್

ಸರಕಾರದಿಂದ ದೊರಕುವ ವಿವಿಧ ಸವಲತ್ತುಗಳನ್ನು ಸದ್ಭಳಕೆ ಮಾಡಿ ರೈತರು ಪರಂಪರಾಗತವಾದ ಕೃಷಿ ಚಟುವಟಿಕೆಗಳೊಂದಿಗೆ ಆಧುನಿಕ ತಂತ್ರಜ್ಞಾನದ ಮಾಹಿತಿಯನ್ನು ಪಡೆದು ಆಡು ,ಮೇಕೆ ಸಾಕಾಣಿಕೆಯಂಥಹ ಲಾಭದಾಯಕ ಉಪ ಕಸುಬುಗಳಿಗೆ ಉತ್ತೇಜನ ನೀಡಿದಲ್ಲಿ ಯುವ ತಲೆಮಾರಿನ ಜನಾಂಗವು ಕೃಷಿ ಕ್ಷೆತ್ರಕ್ಕೆ ಆಕರ್ಷಿತರಾಗುವುದರಲ್ಲಿ ಯಾವುದೇ ಸಂದೇಹವಿಲ್ಲ

ಎಂದು ಮಂಗಳೂರು ಶಾಸಕರಾದ ಯು ಟಿ ಖಾದರ್ ಇರಾ ಗ್ರಾಮದ ಪರ್ಲಡ್ಕ ಎಂಬಲ್ಲಿ ನೂತನವಾಗಿ ಐಸಿರಿ ಮೈಂಡ್ ಓವಶನ್ಸ್ ,ಶಿರೋಹಿ ಫಾರ್ಮ್ಸ್ ವತಿಯಿಂದ ಸರಕಾರದ ಸಹಕಾರದ ಮೂಲಕ ಆರಂಭಗೊಂಡ ಕುರಿ, ಮೇಕೆ ಸಾಕಾಣಿಕಾ ಕೇಂದ್ರ ಮತ್ತು ತರಬೇತಿ ಸಂಸ್ಥೆಗೆ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದು ತಿಳಿಸಿದರು.


ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಕರ್ಕೇರ, ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಕ್ ಕುಕ್ಕಾಜೆ, ಉಪಾಧ್ಯಕ್ಷರಾದ ಮೊಯ್ದು ಕುಂಜ್ಹಿ, ಸದಸ್ಯರಾದ ಹಮೀದ್ ತಿರ್ತಾಡಿ, ಸ್ಥಳೀಯ ಗಣ್ಯರಾದ ಜಯರಾಜ್ ಇರಾ, ಐಸಿರಿ ಮೈಂಡ್ ಓವಶನ್ಸ್ ,ಶಿರೋಹಿ ಫಾರ್ಮ್ಸ್ ಸಂಸ್ಥೆಯ ಪ್ರಮುಖರಾದ ಜಯಶ್ರೀ ಕರ್ಕೇರಾ, ಶ್ರೀಕಾಂತ್ ಕರ್ಕೇರಾ, ದಾಮೋದರ್ ಉಪಸ್ಥಿತರಿದ್ದರು.
ಐಸಿರಿ ಮೈಂಡ್ ಓವಷನ್ಸ್ ಸಂಸ್ಥೆಯ ಸಂಸ್ಥಾಪಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀನಿವಾಸ್ ಗೌಡ ಅವರು ಶಾಸಕರಿಗೆ ಸಮಗ್ರ ಮಾಹಿತಿ ನೀಡಿ ಧನ್ಯವಾದ ಸಲ್ಲಿಸಿದರು ಹಾಗೂ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ಮತ್ತು ಪ್ರೋತ್ಸಾಹ ನೀಡುವಂತೆ ಮನವಿ ಸಲ್ಲಿಸಿದರು.

Leave a Reply

Your email address will not be published. Required fields are marked *