
ಮೈಸೂರು: ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೃಹ ಸಚಿವರು ಮಹಿಳೆ ಯಾಕೆ ಅಲ್ಲಿಗೆ ಹೋಗಬೇಕಿತ್ತು ಎನ್ನುತ್ತಾರೆ. ಇಂತಹ ಹೇಳಿಕೆ ನೀಡುವುದೇ ತಾಲಿಬಾನ್ ಸಂಸ್ಕೃತಿಯಾಗಿದ್ದು, ಇದು ಬಿಜೆಪಿ ಅನುಸರಿಸುತ್ತಿದೆ. ನಗರ ಪೊಲೀಸ್ ಆಯುಕ್ತರು ಈ ಜಾಗದಲ್ಲಿ ಇಂತಹ ಘಟನೆಗಳು ಬೇರೆ ಬೇರೆ ಸಂದರ್ಭಗಳಲ್ಲಿಯೂ ನಡೆದಿದೆ ಎನ್ನುತ್ತಿzರೆ. ಹೀಗಾದರೆ ಮುನ್ನೆಚ್ಚರಿಕೆ, ಗಸ್ತು ವ್ಯವಸ್ಥೆ ಯಾಕೆ ಮಾಡಿರಲಿಲ್ಲ ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವೇ ಇಲ್ಲ. ಇದು ಇವರಿಗೆ ಅತ್ಯಾಚಾರ ಪ್ರಕರಣದ ಬಗ್ಗೆ ಇರುವ ಗಂಭೀರತೆಯನ್ನು ತೋರಿಸುತ್ತದೆ ಎಂದರು.
ಗೃಹ ಸಚಿವರ ಹೇಳಿಕೆ ಹತಾಷೆಯಿಂದ ಕೂಡಿದ್ದು, ಬಿಜೆಪಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಮುಂದೆ ಇಂತಹ ಕೃತ್ಯ ನಡೆಯಬಾರದು ಎಂದಾದರೆ ಇದರ ನೈತಿಕ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಮೈಸೂರು ಸಾಮೂಹಿಕ ಅತ್ಯಾಚಾರ ಸತ್ಯಶೋಧನಾ ಸಮಿತಿ ಅಧ್ಯP ಹಾಗೂ ಮಾಜಿ ಸಂಸದ ಎಸ್.ಉಗ್ರಪ್ಪ ಒತ್ತಾಯಿಸಿದರು.
1970 ರಲ್ಲಿ ಮಧುಗಿರಿಯಲ್ಲಿ ಅತ್ಯಾಚಾರ ನಡೆದಾಗ ಆಗಿನ ಗೃಹ ಸಚಿವರಾಗಿದ್ದ ರಾಮರಾಯರಿಗೆ ಅಂದು ಗೋಪಾಲಗೌಡರು ಪ್ರಶ್ನಿಸಿದಾಗ ಅದರ ಹೊಣೆಯನ್ನು ತಾವೇ ಹೊರುವುದಾಗಿ ಹೇಳಿ ರಾಮರಾಯರು ತಮ್ಮ ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಲಾಲ್ ಬಹಾದ್ದೂರ್ ಶಾಸ್ತ್ರಿಗಳು ರೈಲ್ವೆ ಅಪಘಾತದ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದಾರೆ. ಅಂತೆಯೇ ನಿಮಗೆ ಎನಾದರೂ ಪ್ರಕರಣದ ಗಂಭೀರತೆಯ ಅರಿವಿದ್ದರೆ, ಈ ವೈಫಲ್ಯಗಳ ಹೊಣೆ ಹೊತ್ತು ಗೃಹ ಸಚಿವರ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸುತ್ತೇನೆಂದರು.
ದೆಹಲಿಯಲ್ಲಿ ಮುಖ್ಯಮಂತ್ರಿ ಸಂತ್ರಸ್ತನ ಹೇಳಿಕೆ ಆಧಾರದ ಮೇಲೆ ತನಿಖೆ ನಡೆಯುತ್ತಿದೆ ಎನ್ನುತ್ತಾರೆ. ಬೆಂಗಳೂರಿನಿಂದ ಅತ್ಯಾಚಾರ ಪ್ರಕರಣದ ತನಿಖೆ ವಿಕ್ಷಿಸುವುದಾಗಿ ಬರುವ ಗೃಹ ಸಚಿವರು ೨೪ತಾಸೂ ಕಳೆದರೂ ಪ್ರಕರಣ ಆಲಿಸುವ ಕೆಲಸ ಮಾಡಿಲ್ಲ. ಬದಲಿಗೆ ಚಾಮುಂಡಿ ಬೆಟ್ಟ, ಪೊಲೀಸ್ ಅಕಾಡೆಮಿಯ ಫೈರಿಂಗ್ ಉದ್ಘಾಟನೆ, ಬಿಜೆಪಿ ಕಾರ್ಯಕರ್ತರ ಸಭೆ ಹಾಗೂ ಸಸಿ ನೆಡುವುದರಲ್ಲಿ ತಲ್ಲೀನರಾಗಿzರೆ. ಜಡ್ಡು ಗಟ್ಟಿರುವ ಪೊಲೀಸ್ ವ್ಯವಸ್ಥೆಯನ್ನು ಪರಿಶೀಲಿಸುವ ಮಾಹಿತಿ ಸಂಗ್ರಹಿಸುವುದನ್ನು ಮಾಡುವುದನ್ನು ಬಿಟ್ಟು ಇವರಿಗೆ ಮಹಿಳೆಯ ಪ್ರಕರಣದ ಬಗ್ಗೆ ಎಷ್ಟು ತಾತ್ಸಾವರನ್ನು ಹೊಂದಿzರೆ ಎಂಬುದನ್ನು ಇಲ್ಲಿನ ಜನರೇ ಅರ್ಥ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ಮೈಸೂರು ನಗರದಲ್ಲಿ ಕಳೆದ ೯ ದಿನದಲ್ಲಿ 16 ಸುಲಿಗೆ ಒಂದು ಶೂಟೌಟ್, ಮೂರು ಕೊಲೆ ಹಾಗೂ ರಾಬರಿ ಆಗಿವೆ. ಜಿ ಸಚಿವರು ಪೊಲೀಸ್ ವ್ಯವಸ್ಥೆ ಬಗ್ಗೆ ಅಪನಂಬಿಕೆ ವ್ಯಕ್ತಪಡಿಸಿzರೆ. ಈ ಹಿಂದೆ ಆಕ್ಸಿಜನ್ ಇಲ್ಲದೆ ಸಾವು ಆದಾಗಲೂ ಮೂರು ಜನ ಎಂದರೂ ಆ ಬಳಿಕ ನ್ಯಾಯಾಲಯದ 30 ಜನಕ್ಕೆ ಪರಿಹಾರ ಆದೇಶಿಸಿತು. ಹೀಗೆ ಬಿಜೆಪಿ ಸುಳ್ಳಿನ ಕಂತೆಯನ್ನೇ ಹೆಣೆಯುವ ಕೆಲಸ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರು.
ಪ್ರಧಾನಿ ನರೇಂದ್ರಮೋದಿಯವರೇ ನಿರ್ಭಯ ಪ್ರಕರಣ ಹಾಗೂ ಗೃಹ ಸಚಿವರೇ ನಿಮ್ಮದೇ ಕ್ಷೇತ್ರದ ನಂದಿತಾ ಪ್ರಕರಣ ನಡೆದಾಗ ನೀವೂ ಎನೆಂದು ಆಗ್ರಹಿಸಿದ್ದೀರಿ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ‘ಭೇಟಿ ಬಚಾಮೋ ಭೇಟಿ ಪಡಾಮೋ’ ಎಲ್ಲಿ ಹೋಗುತ್ತಿದೆ. ರಾಮರಾಜ್ಯದ ಪರಿಕಲ್ಪನೆಯಲ್ಲಿ ರಾಜ್ಯದಲ್ಲಿ ಮಹಿಳೆಯರಿಗೆ ರPಣೆಯೇ ಇಲ್ಲದಂತಾಗಿದೆ. ಸರ್ಕಾರದ ವೈಫಲ್ಯದಿಂದಲೇ ಇಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಮಂತ್ರಿಯೊಬ್ಬರು ಅತ್ಯಾಚಾರದ ಆರೋಪ ಹೊತ್ತಾಗಿಯೂ ಹೊರ ಬಂದ ಪ್ರಕರಣದಿಂದಲೇ ಜನರಿಗೆ ಇಂತಹ ಕೃತ್ಯ ಎಸಗಿದರೂ ಎನೂ ಆಗುವುದಿಲ್ಲ ಎಂಬ ಮನಸ್ಥಿತಿ ಹೆಚ್ಚಿರುವುದೇ ಇಂತಹ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ. ಬಿಜೆಪಿಯ ಡಬಲ್ ಸ್ಟಾಂಡ್ ನಿರ್ಧಾರ ಈಗ ಬಯಲಾಗುತ್ತಿದೆ ಎಂದು ಹೇಳಿದರು. ಮೈಸೂರು ಸಾಮೂಹಿಕ ಅತ್ಯಾಚಾರ ಸತ್ಯಶೋಧನಾ ಸಮಿತಿಯಲ್ಲಿರುವ ಶಾಸಕ ತನ್ವೀರ್ಸೇಠ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಅಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಅಧ್ಯಕ್ಷೆ ಮಂಜುಳಾ ನಾಯ್ಡು, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಕೆಪಿಸಿಸಿ ವಕ್ತಾರ ಎಂ.ಲPಣ್, ಮಾಜಿ ಶಾಸಕಿ ಮಲ್ಲಜ್ಜಮ್ಮ, ಮಾಜಿ ಸಚಿವ ಎಚ್.ಎಂ.ರೇವಣ್ಣ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಒತ್ತಾಯಗಳಿವು
ಆರೋಪಿಗಳನ್ನು ಪತ್ತೆ ಹಚ್ಚಬೇಕು. ತುರ್ತು ನ್ಯಾಯಾಲಯದಲ್ಲಿ ಪಾಸ್ಟ್ಟ್ರ್ಯಾಕ್ ವಿಚಾರಣೆ ಕೆಲಸ ಆಗಬೇಕು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಅದರ ನೇರಹೊಣೆ ಹೊತ್ತು ಗೃಹ ಸಚಿವರ ರಾಜೀನಾಮೆ ಕೇಳುತ್ತೇವೆ.
ಇಂತಹ ಘಟನೆ ನಡೆಯದ ರೀತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಈ ಪ್ರಕರಣದ ನೇರಹೊಣೆಯನ್ನು ಗೃಹ ಸಚಿವರೇ ಹೊತ್ತು ರಾಜೀನಾಮೆ ನೀಡಬೇಕು.
ಫೋಕ್ಸೋ ಹಾಗೂ ರೇಪ್ ಕೇಸ್ಗೆ ಗುಂಡಾ ಆಕ್ಟ್ ತರಲು ಹೊರಟಿದ್ದ ನಮ್ಮ ಸರ್ಕಾರದ ಅವಧಿಯಲ್ಲಿ ನೀಡಿದ್ದ ವರದಿಯನ್ನು ಜಾರಿಗೊಳಿಸಬೇಕು.
ಅತ್ಯಾಚಾರ ಪ್ರಕರಣ ಮುಚ್ಚಿಹಾಕುವ ಯತ್ನ

ಮೈಸೂರು: ಅತ್ಯಾಚಾರ ಪ್ರಕರಣದ ಸಮಯ, ದಿನಾಂಕ ತಿದ್ದುವ ಕೆಲಸ ಮಾಡಲಾಗಿದೆ. ಘಟನೆ ನಡೆದು ಅತ್ಯಾಚಾರಿಗಳನ್ನು ಬಂಧಿಸದಿರುವುದು ಹಾಗೂ ಸಂತ್ರಸ್ತೆ, ಘಟನೆಗೆ ಸಾಕ್ಷಿಯಾದವರನ್ನು ಆಸ್ಪತ್ರೆಯಿಂದಲೇ ಕಳುಹಿಸುವ ಮೂಲಕ ಘಟನೆಯನ್ನು ಮುಚ್ಚಿ ಹಾಕುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಪ್ರಾಥಮಿಕ ಸತ್ಯ ಶೋಧನೆಯ ವೇಳೆ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಮಾಜಿ ಸಂಸದ ಉಗ್ರಪ್ಪ ಗಂಭೀರವಾಗಿ ಆರೋಪಿಸಿದರು.
ಸಂತ್ರಸ್ತನನ್ನು ನೆನ್ನೆ ಹಾಗೂ ಇಂದು ಸಂತ್ರಸ್ತೆಯನ್ನು ಆಸ್ಪತ್ರೆಯಿಂದ ಕಳುಹಿಸಿzರೆ. ಆದರೆ, ಪ್ರಕರಣದ ಮಾಹಿತಿ ಪ್ರಕಾರ ಸಂತ್ರಸ್ತನ ತಲೆಗೆ ಕಲ್ಲಿನಿಂದ ಬಲವಾಗಿ ಪೆಟ್ಟು ಬಿದ್ದು, ಪ್ರeಹೀನ ಸ್ಥಿತಿಗೂ ಹೋಗಿದ್ದ ಹೀಗಾಗಿ ಆತನ ಮೇಲೆ ಮಾರಣಾಂತಿಕ ಹ ಪ್ರಕರಣವನ್ನು ದಾಖಲಿಸಬೇಕಿತ್ತು. ಜತೆಗೆ ಆಕೆ ಮೇಲೆ ನಡೆದ ಕ್ರೌರ್ಯಕ್ಕೆ ಆಕೆ ರಕ್ತಸ್ರಾವದಿಂದ ಪ್ರeಹೀನವಾಗಿದ್ದಳು ಎಂಬ ಮಾಹಿತಿ ಮೇಲ್ನೋಟಕ್ಕೆ ಬಂದಿದೆ. ಹೀಗಾಗಿ ಇಬ್ಬರನ್ನೂ ಇಷ್ಟು ಬೇಗ ಕಳುಹಿಸಿಕೊಟ್ಟಿರುವುದರ ಹಿಂದೆ ಸರ್ಕಾರದ ನೇರ ಹಸ್ತಕ್ಷೇಪವೇ ಕಾಣುತ್ತಿದೆ. ಯಾರದೋ ಪ್ರಭಾವ ಅಥವಾ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಹುದೆಂಬ ನಿಟ್ಟಿನಲ್ಲಿ ವ್ಯವಸ್ಥಿತವಾಗಿ ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.
ಇನ್ನೂ ಇಂತಹ ಪ್ರಕರಣ ನಡೆದಾಗ ಸರ್ಕಾರಿ ಆಸ್ಪತ್ರೆಗೆ ಸೇರಿಸಬೇಕಿತ್ತು. ಅಲ್ಲಿ ಒಂದೇ ಸೂರಿನಡಿ ಕಾನೂನು ಭದ್ರತೆ, ನೆರವು ಎಲ್ಲವೂ ಸಿಗುತ್ತಿತ್ತು. ಆದರೆ, ಇದಾವುದನ್ನು ಪೊಲೀಸರು ಮಾಡಿಯೇ ಇಲ್ಲ. ಘಟನೆ ಬಳಿಕ ಸಂತ್ರಸ್ತರಿಬ್ಬರೂ ಒಟ್ಟಿಗೆ ಆಸ್ಪತ್ರೆಗೆ ತೆರಳಿ 9.15ಕ್ಕೆ ಆಸ್ಪತ್ರೆಗೆ ದಾಖಲಾಗುತ್ತಾರೆ. ಆದರೆ, ಪ್ರಕರಣ ಪೊಲೀಸರಿಗೆ ತಿಳಿಸಿ ಸಂತ್ರಸ್ತನನ್ನು 11.30ಕ್ಕೆ ಸ್ವೀಕರಿಸಿಕೊಳ್ಳುತ್ತಾರೆ. 10.50ಕ್ಕೆ ಸಂತ್ರಸ್ತೆಯನ್ನು ದಾಖಲಿ, 11.35ಕ್ಕೆ ದಾಖಲಿಸಿಕೊಳ್ಳುತ್ತಾರೆ. ಆದರೆ, ಪ್ರಕರಣ ದಾಖಲಿಸಿಕೊಳ್ಳುವಲ್ಲಿಯೂ ಸಮಯದ ವ್ಯತ್ಯಾಸ ಮಾಡಿzರೆ. ಅಲ್ಲದೆ ನಿರ್ದಿಷ್ಟ ಕಾಲಂನಡಿಯಲ್ಲಿ ಪ್ರಕರಣ ದಾಖಲಾಗಿಲ್ಲ. ಅಲ್ಲದೆ, ನಿರ್ದೀಷ್ಟವಾಗಿ ಪ್ರಕರಣ ದಾಖಲಿಸಿದ್ದರೆ ನೇರವಾಗಿ ಮ್ಯಾಜಿಸ್ಟೇಟ್ ಎದುರು ಸಂತ್ರಸ್ತರ ಹೇಳಿಕೆ ಕೊಡಿಸಿದ ಬಳಿಕವಷ್ಟೇ ಅವರನ್ನು ಕಳುಹಿಸಬೇಕಿತ್ತು. ಆ ಕೆಲಸವನ್ನು ಪೊಲೀಸರು ಮಾಡದಿರುವುದು ಸ್ಪಷ್ಟವಾಗಿ ರಾಜಕೀಯ ಪ್ರಭಾವ ಇರುವುದು ಕಾಣುತ್ತದೆ ಎಂದರು.
ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ 60ಜನ ಇದ್ದಾರೆ 15ಕಿ.ಮೀ ಸುತ್ತರ ಪ್ರದೇಶವನ್ನು ಒಳಗೊಂಡಿದೆ. ಕನಿಷ್ಠ ನಾಲ್ಕು ಕಡೆ ದಸ್ತಗಿರಿ ನಡೆಸಬೇಕೆಂದರೂ ಸರಿಯಾದ ವಾಹನ ವ್ಯವಸ್ಥೆಯೇ ಇಲ್ಲ. ಒಂದು ಗರುಡ ಮತ್ತೊಂದು ಹೆಚ್ಚುವರಿ ವಾಹನ ಬಿಟ್ಟರೆ ಪೊಲೀಸರಿಗೆ ಯಾವುದೇ ಸೌಲಭ್ಯವನ್ನೇ ಕೊಟ್ಟಿಲ್ಲ. ಇನ್ನೂ ಘಟನೆ ನಡೆದ 535ಎಕರೆ ಪ್ರದೇಶಕ್ಕೆ ಮಾಲೀಕರು ಯಾರು ಎಂದು ಕೇಳಿದರೆ ಒಬ್ಬರು ಅರಣ್ಯ ಇಲಾಖೆ, ಮತ್ತೊಬ್ಬರು ಮುಡಾ ಹಾಗೂ ಇನ್ನೊಬ್ಬರೂ ಸದರಿ ಜಾಗ ನ್ಯಾಯಾಲಯದಲ್ಲಿದೆ ಎನ್ನುತ್ತಾರೆ. ಹೀಗಾಗಿ ಪೊಲೀಸರಲ್ಲಿ ಸ್ಪಷ್ಟ ಮಾಹಿತಿಯೂ ಇಲ್ಲವಾಗಿದೆ. ಇನ್ನೂ ಗಸ್ತು ವ್ಯವಸ್ಥೆಯೂ ಇಲ್ಲವಾಗಿದೆ. ನಗರ ಬೆಳೆದಿರುವ ಹಿನ್ನೆಲೆಯಲ್ಲಿ3ಸಾವಿರಕ್ಕೂ ಹೆಚ್ಚಿನ ಪೊಲೀಸರ ಅಗತ್ಯತೆಯಿದೆ. ಆದರೆ, ಇಲಾಖೆಯಲ್ಲಿ ಅಷ್ಟೊಂದು ಪ್ರಮಾಣ ಇಲ್ಲದಿರುವ ಬಗ್ಗೆ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿzರೆ ಎಂದು ಹೇಳಿದರು. ಇದಕ್ಕೂ ಮೊದಲು ಸಮಿತಿಯೂ ಅತ್ಯಾಚಾರ ನಡೆದ ಸ್ಥಳ, ಆಸ್ಪತ್ರೆ, ಪೊಲೀಸ್ ಠಾಣೆ, ನಗರಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕೆಲಸ ಮಾಡಿದರು.

ಮೈಸೂರಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿ ಮೈಸೂರು ಸಾಮೂಹಿಕ ಅತ್ಯಾಚಾರ ಸತ್ಯಶೋಧನಾ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಎಸ್.ಉಗ್ರಪ್ಪ ಸುದ್ದಿಗೋಷ್ಠಿ ನಡೆಸಿದರು. ನಾ ಸಮಿತಿಯಲ್ಲಿರುವ ಶಾಸಕ ತನ್ವೀರ್ಸೇಠ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಹಿಳಾ ಅಧ್ಯಕ್ಷೆ ಪುಷ್ಪ ಅಮರನಾಥ್, ಮಾಜಿ ಅಧ್ಯಕ್ಷೆ ಮಂಜುಳಾ ನಾಯ್ಡು, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ, ಕೆಪಿಸಿಸಿ ವಕ್ತಾರ ಎಂ.ಲPಣ್, ಮಾಜಿ ಶಾಸಕಿ ಮಲ್ಲಜ್ಜಮ್ಮ, ಮಾಜಿ ಸಚಿವ ಎಚ್.ಎಂ.ರೇವಣ್ಣ ಇನ್ನಿತರರು ಚಿತ್ರದಲ್ಲಿದ್ದಾರೆ.