ನಗರ ಬಿಜೆಪಿ ಮಹಿಳಾ ಮೋರ್ಚಾದಿಂದ ಆಹಾರ ವಿತರಣೆ


ಮೈಸೂರು 29: ಕಳೆದ ಒಂದು ತಿಂಗಳಿಂದ ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ನಗರ ಘಟಕದಿಂದ ಕೊರೊನಾ ವಾರಿಯರ್‍ಸ್‌ಗೆ ಹಾಗೂ ನಿರ್ಗತಿಕರಿಗೆ ಆಹಾರ ಒದಗಿಸುವ ಕಾರ್ಯದ ಅಂತಿಮ ಕಾರ್ಯಕ್ರಮವನ್ನು ಮಂಗಳವಾರ ಕಚೇರಿ ಎದುರು ನಡೆಸಲಾಯಿತು.


ಅಂತಿಮ ದಿನದಂದು ಆಹಾರ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದ ನಗರಾದ್ಯಕ್ಷ ಶ್ರೀವತ್ಸ ಮಾತನಾಡಿ, ಕಳೆದ ಒಂದು ತಿಂಗಳಿಂದ ನಗರ ಘಟಕದ ಅಧ್ಯಕ್ಷರಾದ ಹೇಮಾನಂದೀಶ್ ಅವರ ಅಧ್ಯಕ್ಷತೆಯಲ್ಲಿ ಮಹಿಳಾ ಪದಾಧಿಕಾರಿಗಳು ಆಹಾರ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ತಾವೇ ಆಹಾರ ತಯಾರಿಸಿ ಪ್ಯಾಕ್ ಮಾಡಿ ವಿತರಿಸುವ ಮೂಲಕ ಸೇವಾ ಕಾರ್ಯದಲ್ಲಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದು ಸ್ಮರಿಸಿದರು.
ಮೋದಿಯವರ ಸೇವಾ ಹಿ ಸಂಘಟನೆಯ ಸ್ಫೂರ್ತಿಯಿಂದ ಶುರುವಾದ ಈ ಸೇವಾಕಾರ್ಯವೂ ನಿತ್ಯವೂ 400 ಮಂದಿಗೆ ಆಹಾರ ನೀಡುತ್ತಾ ಬಂದಿತ್ತು. ಕೋವಿಡ್ ಸೆಂಟರ್‌ನ ಸಿಬ್ಬಂದಿಗಳಿಗೆ, ಆಗ್ನಿಶಾಮಕ ದಳದ ಸಿಬ್ಬಂದಿಗಳಿಗೆ, ಕಟ್ಟಡ ಕಾರ್ಮಿಕರಿಗೆ, ಕೂಲಿ ಕಾರ್ಮಿಕರಿಗೆ, ರೈಲ್ವೆ ಕೂಲಿಗಳಿಗೆ, ಪೊಲೀಸ್ ಸಿಬ್ಬಂದಿ
ವರ್ಗದವರಿಗೆ, ಮಹಿಳಾ ಕಾರ್ಮಿಕರಿಗೆ, ಬೀದಿಬದಿ. ಕಾರ್ಮಿಕರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಕೊರೋನ ವಾರಿಯರ್ಸ್‌ಗಳಿಗೆ, ಆಶಾ ಕಾರ್ಯಕರ್ತರಿಗೆ, ದಾದಿಯರಿಗೆ, ಆಂಬುಲೆನ್ಸ್ ಚಾಲಕರಿಗೆ, ನಿರಾಶ್ರಿತರಿಗೆ ಕೊರೊನಾ ಪೀಡಿತರಿಗೆ ಮತ್ತು ಆಟೋ ಚಾಲಕರಿಗೆ, ಜಮೋಟೋ, ಸ್ವ ಸಿಬ್ಬಂದಿಗಳಿಗೆ ನಿತ್ಯ ಆಹಾರ ಮತ್ತು ಸ್ಯಾನಿಟೈಸರ್‌ಗಳನ್ನು ವಿತರಣೆ ಮಾಡಿದ್ದೇವೆ ಎಂದು ನಗರ ಘಟಕದ ಅಧ್ಯಕ್ಷರಾದ ಬಿ.ಎಸ್.ಹೇಮಾನಂದೀಶ್ ತಿಳಿಸಿದರು. ನಗರ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ರಶ್ಮಿ ಅನಿಲ್,

Leave a Reply

Your email address will not be published. Required fields are marked *