ಬೆಂಗಳೂರು: ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮೂಡಲಪಾಳ್ಯ ಸರ್ಕಲ್ ನಲ್ಲಿ ಬಡವರಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರವೀಶ್, ಮಹೇಂದ್ರ ಮನ್ನೋತ್, ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿ, ರಾಜ್ಯಾಧ್ಯಕ್ಷ ಆರ್, ಚಂದ್ರಪ್ಪ ರವರ ನೇತೃತ್ವದಲ್ಲಿ ಸಂಕಷ್ಟದಲ್ಲಿರುವ ಕೋವಿಡ್ ಸಂತ್ರಸ್ಥರಿಗೆ, ಬಡ ಕೂಲಿ ಕಾರ್ಮಿಕರಿಗೆ ಆಹಾರ ಪದಾರ್ಥಗಳ ದಿನಸಿ ಕಿಟ್ ಗಳನ್ನು 200 ಜನರಿಗೆ ಸಾಂಕೇತಿಕವಾಗಿ ನೀಡಿದರು.
ಈ ವೇಳೆ ಅಧ್ಯಕ್ಷ ರವೀಶ್ ಎಂ.ಎಲ್ ಅವರು ಮಾತನಾಡಿ ನಮ್ಮ ಕ್ಷೇತ್ರದ ಕೋರನಾ ಸಂಕಷ್ಟದಲ್ಲಿ ಸಿಲುಕಿ ಕೆಲಸವಿಲ್ಲದ ಬಡ ಹಾಗೂ ಕೂಲಿ ಕಾರ್ಮಿಕರ ಮನೆಗೆ ತೆರಳಿ ಸುಮಾರು 2000 ಆಹಾರ ಪದಾರ್ಥಗಳ ದಿನಸಿ ಕಿಟ್ ವಿತರಣೆ ಮಾಡುತ್ತಿದ್ದೇವೆ. ಕರೋನಾ ಎರಡನೇ ಅಲೆ ಬಂದಾಗಿನಿಂದ ಸಾವಿರಾರು ಆಹಾರ ಪಟ್ಟಣಗಳು, ವಿತರಣೆ ತರಕಾರಿ ವಿತರಣೆ ಮಾಡಿದ್ದೇವೆ ಎಂದರು
ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಶ್ರೀನಿವಾಸ, ರಾಜ್ಯ ಉಪಾಧ್ಯಕ್ಷರಾದ ಟಿ.ಆರ್ ಆತ್ಮಾನಂದ, ರಾಜ್ಯ ಸಂಘಟನಾ ಕಾರ್ಯದರ್ಶಿ ಯೋಗೇಶ್ ಬಾಬು ಹಾಗೂ ಗೋಸಂರಕ್ಷಣಾಕಾರರು ಸಮಾಜ ಚಿಂತಕರು ಆದರ್ಶವಾದಿಗಳು ಮಾರುತಿ ಮೆಡಿಕಲ್ ನ ಮಾಲೀಕರು ಮಹೇಂದ್ರ ಮನ್ನೋತ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾರಾಯಣ, ಅನಿಲ್ ಶೆಟ್ಟಿ ಹಾಗೂ ವಿಜಯನಗರ ಕ್ಷೇತ್ರದ ಅಧ್ಯಕ್ಷ ಜಗದೀಶ್ ಖ್ಯಾತ ಹಾಸ್ಯ ಚಲನಚಿತ್ರ ನಟ ಮಿಮಿಕ್ರಿ ದಯಾನಂದ್ ಅವರಗಳ ಸಹಕಾರ ಮತ್ತು ಸಮ್ಮುಖದಲ್ಲಿ ಕೊರೋನಾ ಸಂಕಷ್ಟದಲ್ಲಿರುವ ಬಡವರಿಗೆ ದಿನನಿತ್ಯ ಬಳಸುವ ಆಹಾರ ಸಾಮಗ್ರಿಗಳ ಕಿಟ್ಟು ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷರು ಬಾಬಣ್ಣ ರಾಜೇಶ್ ಎಸ್ ಪೂಜಾರಿ ಲೋಕೇಶ್ ಸಿ, ನಾಗೇಶ್, ಲೋಕೇಶ್, ಮಂಜುನಾಥ್ ನಾಯ್ಡು, ಬಾಲು, ಶೇಖರ್ ಶೇಕ್ ನಜೀರ್, ಮಂಜು, ರುದ್ರೇಶ್, ಶಿವು, ಯೋಗೇಶ್, ಗಣೇಶ್, ಪ್ರಸಾದ್ ಉಪಸ್ಥಿತರಿದ್ದರು