ಸ್ಥಳಿಯ ಜನರ ಆದ್ಯತೆಗೆ ತಕ್ಕಂತೆ ಗುಣಮಟ್ಟದ ಕಾಮಗಾರಿ ನಡೆಸಬೇಕು, ಎಲ್ಲಾದರೂ ಕಾಮಗಾರಿಗಳಲ್ಲಿ ಲೋಪಕಂಡುಬಂದಲ್ಲಿ ಸಂಬಧಪಟ್ಟವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಅವರು ಇಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ದಾಸನಕೊಪ್ಪಲು, ನಂಜರಾಯನಹುAಡಿ, ಕೆ.ಸಾಲುಂಡಿ ಹಾಗೂ ಧನಗಳ್ಳಿ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ದಾಸನಕೊಪ್ಪಲು ಗ್ರಾಮದ ಪರಿಮಿತಿಯಲ್ಲಿ ರೂ. 1.00 ಕೋಟಿ ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಇಂದು ರೂ. 50.00 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುತ್ತಿರುವುದಾಗಿ ತಿಳಿಸಿದರು. ಬಾಕಿ ಉಳಿದಿರುವ ರಸ್ತೆಗಳನ್ನು & ಒಳಚರಂಡಿ ಕಾಮಗಾರಿಯನ್ನು ಮೂಡಾವತಿಯಿಂದ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ನಂತರ ಅವರು ಕೆ.ಸಾಲುಂಡಿ ಗ್ರಾಮದಲ್ಲಿ ರೂ. 50.00 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಹಾಗೂ ನಂಜರಾಜನಹುAಡಿ ಗ್ರಾಮದಲ್ಲಿ ರೂ. 50.00 ಲಕ್ಷ ವೆಚ್ಚದಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಧನಗಳ್ಳಿ ಗ್ರಾಮದಲ್ಲಿ ರೂ. 50 ಲಕ್ಷ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. 12 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ರೂ. 10 ಲಕ್ಷ ವೆಚ್ಚದಲ್ಲಿ ಬಸವ ಭವನ ನಿರ್ಮಾಣಕ್ಕೆ ಮತ್ತು ರೂ. 10 ಲಕ್ಷ ವೆಚ್ಚದಲ್ಲಿ ಧನಗಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಮುಖಂಡರುಗಳಾದ ಕೋಟೆಹುಂಡಿ ಮಹದೇವು, ಕಲ್ಲಿಪಾಳ್ಯ ರಮೇಶ್, ಮಾಕಿ ಮಹದೇವು, ಬೀರಿಹುಂಡಿ ಶಿವಣ್ಣ, ದಾಸನಕೊಪ್ಪಲು ಗ್ರಾಮದ ಮುಖಂಡರಾದ ಶಂಭೂಗೌಡ, ದೇವರಾಜು, ರಾಜು, ಜಯರಾಂ, ಸುರೇಶ್, ಹರೀಶ್, ಸುರೇಶ್, ಸಿದ್ದು, ದಿನೇಶ್, ಜೆ.ಡಿ. ದಿನೇಶ್, ಪಟೇಲ್ ಚಂದ್ರು, ಕೆ.ಸಾಲುಂಡಿ ಗ್ರಾಮದ ಯಜಮಾನರುಗಳಾದ ಸ್ವಾಮಿಗೌಡ, ಕೆಂಚೇಗೌಡ, ಚಿಕ್ಕಣ್ಣ, ಪಚ್ಚೇಗೌಡ, ಚಿಕ್ಕಣ್ಣೇಗೌಡ, ಗ್ರಾ.ಪಂ.ಮಾಜಿ ಸದಸ್ಯರಾದ ರಾಜು, ಹುಚ್ಚಯ್ಯ, ಬೋಜರಾಜ, ಕೇರ್ಗಳ್ಳಿ ಬಸವೇಗೌಡ, ಶಿವಪ್ಪ, ನಂಜರಾಜನಹುಂಡಿ ಗ್ರಾಮದ ಪ್ರಕಾಶ್, ರಾಜೇಶ, ರಾಜಣ್ಣ, ಗೋಪಾಲರಾಜೇ ಅರಸ್, ಚಂದ್ರ, ಶ್ಯಾಮಣ್ಣ, ಚಲುವರಾಜೇರಸ್, ಮತ್ತು ಮುಖಂಡರು ಧನಗಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹಾಲಕ್ಷಿö್ಮ, ಉಪಾಧ್ಯಕ್ಷರಾದ ಲೀಲಾವತಿ, ಸದಸ್ಯರುಗಳಾದ ಮಂಗಳಮ್ಮ, ಮಂಜುಳ, ರಘು, ಬಸವರಾಜು, ತಾ.ಪಂ.ಮಾಜಿ ಸದಸ್ಯರಾದ ಸಿದ್ದರಾಮೇಗೌಡ, ಮಾಕಿ ಮರೀಗೌಡರು, ಲಕ್ಷöಮ್ಮ, ನಾಗಣ್ಣ, ಮಂಚನಾಯಕ, ನಾಗರಾಜನಾಯಕ, ದೀಪು, ಪಾಪಣ್ಣ, ಸುರೇಶ್, ನಿಜಗುಣ, ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾದ ಸಿದ್ದರಾಮು, ಚಿಕ್ಕಣ್ಣ, ಬಸಪ್ಪ, ಜವರೇಗೌಡ, ಸಿದ್ದರಾಜು, ಮಾದಪ್ಪನಾಯಕ, ಸಿದ್ದಮ್ಮ, ಕಾಳಿಂಗೇಗೌಡ, ಗುರುಸ್ವಾಮಿ, ಕೃಷ್ಣಮೂರ್ತಿ, ತಿಮ್ಮಮ್ಮ, ಮುಖಂಡರುಗಳಾದ ಸ್ವಾಮಿ, ನಿಂಗರಾಜು, ಮರಿಸ್ವಾಮಿ, ನಿಂಗರಾಜು, ಸಿದ್ದಲಿಂಗಮೂರ್ತಿ, ಸ್ವಾಮಿ ಕೆ.ಇ.ಬಿ., ಬಸವರಾಜು, ಬುಂಡಕಯ್ಯ, ಬೀರಯ್ಯ, ತಮ್ಮಯ್ಯಪ್ಪ, ಬಸವರಾಜಪ್ಪ, ಶಿವಬಸವಣ್ನ, ಬಸವೇಶ, ನಿಂಗನಾಯಕ, ಶಂಕರನಾಯಕ ದೇವನಾಯಕ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.