ಮೈಸೂರು: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಮೇಕೆದಾಟು (ಸಂಗಮ) ಸ್ಥಳದಿಂದ ಬೆಂಗಳೂರಿಗೆ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಮೈಸೂರಿನಿಂದ ಕಾಂಗ್ರೆಸ್ ಸಮಿತಿ ಸಿದ್ಧತೆ ನಡೆಸಿದ್ದು, ವಿವಿಧ ಕ್ಷೇತ್ರದ ಪದಾಧಿಕಾರಿಗಳು ಪಾದಯಾತ್ರೆ ಕೈಗೊಳ್ಳಬೇಕಾದ ಮಾರ್ಗಗಳನ್ನು ಸೂಚಿಸಿದೆ.
ಜ.೧೧ ರಂದು ಕನಕಪುರದಿಂದ ಚಿಕ್ಕೇನಹಳ್ಳಿ ವರೆಗೆ ನಡೆಯುವ ಪಾದಯಾತ್ರೆಯಲ್ಲಿ ಎಚ್.ಡಿ.ಕೋಟೆ, ನಂಜನಗೂಡು, ವರುಣಾ, ತಿ.ನರಸಿಪುರ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ ಕ್ಷೇತ್ರದ ಕಾರ್ಯಕರ್ತರು ಭಾಗವಿಸಬೇಕು. ಜ.12 ರಂದು ರಾಮನಗರದ ದಿಂದ ಬಿಡದಿ ವರೆಗಿನ ಪಾದಯಾತ್ರೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರು ಭಾಗವಹಿಸುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಸೂಚಿಸಿದ್ದಾರೆ.