ಸೆಪ್ಟಂಬರ್ ನ 8ರ ರಾಶಿ ಭವಿಷ್ಯ ಇಲ್ಲಿದೆ

|| ಓಂ ಶ್ರೀ ಗುರುಭ್ಯೋ ನಮಃ || ಓಂ ಶ್ರೀ ಕಾಳಿಕಾಯ್ಯೈ ನಮ:|| ಓಂ ಶ್ರೀ ಆದಿತ್ಯಾದಿ ನವಗ್ರಹ ದೇವತಾಭ್ಯೋನಮ: ||

ಇಂದಿನ ದಿನ ಚಂದ್ರ ದೇವರು ದ್ವಾದಶ ಭಾವದಲ್ಲಿ ಸಂಚಾರ ಮಾಡುವುದರಿಂದ ಅಶುಭಫಲವನ್ನು ನೀಡಲಿದ್ದಾನೆ ಮತ್ತು ದಾಂಪತ್ಯದಲ್ಲಿ ಸ್ವಲ್ಪವಿರಲಸ ಕಾಣಲ್ಪಡುವ.

ಯಾರಿಗಾದರೂ ಮೋಸ ಮಾಡುವ ಉದ್ದೇಶ ನಿಮ್ಮದಾಗಿದ್ದರೆ ದಯವಿಟ್ಟು ಮಾಡಬೇಡಿ. ಸಹೋದರರಲ್ಲಿ ವೈಮನಸ್ಸು ಉಂಟಾಗಬಹುದು. ತಲೆನೋವು ಮತ್ತು ಕಣ್ಣಿಗೆ ಸಂಬಂಧಿಸಿದ ನೋವು ಉಂಟಾಗಬಹುದು ಪ್ರಯಾಣದಲ್ಲಿ ಸುರಕ್ಷಿತವಾಗಿರಿ ಅಪಘಾತ ಸಂಭವ. ಕಾನೂನುಬಾಹಿರ ಚಟುವಟಿಕೆ ಗಳಿಂದ ದೂರವಿರಿ. ಈ ದಿನ ನಿಮಗೆ ಹಣಕಾಸಿನ ಸಮಸ್ಯೆ ಉಂಟು.

ಗುರುವಾರ ತೈಲ ಬಳಕೆಯನ್ನು ತಪ್ಪಿಸಿ ಮತ್ತು ಆರೋಗ್ಯವಾಗಿರಿ.

ಇಂದು ನಿಮ್ಮ ಮನಸ್ಸು ಸೃಜನಶೀಲವಾಗಿ ಕೆಲಸ ಮಾಡುತ್ತದೆ ಆದಾಯ ಉತ್ತಮ ಉತ್ತಮವಾಗಿರುತ್ತದೆ. ಮಿತ್ರರಿಂದ ಸಹೋದರರಿಂದ ಸಹಾಯ ಉಂಟಾಗುತ್ತದೆ. ಒಂದು ಪ್ರಯಾಣದಿಂದ ಲಾಭವಾಗಲಿದೆ. ಇಂದು ಧೈರ್ಯ ಮತ್ತು ಶಕ್ತಿ ನಿಮ್ಮ ಯೋಗಕ್ಕೆ ಬರಲಿವೆ. ಶತ್ರುಗಳ ಮೇಲೆ ಜಯ ಸಾಧಿಸಿದರು ಒಬ್ಬ ಸ್ತ್ರೀ ನಿಮ್ಮ ಯಶಸ್ಸಿಗೆ ಕಾರಣವಾಗಬಹುದು.ಸ್ನೇಹಿತರು ನಿಮ್ಮ ಆಲೋಚನೆಗಳ ಮೇಲೆ ಗಮನಾರ್ಹ ಪ್ರಭಾವ ಬೀರಬಹುದಾದ ಯಾರಾದರೂಬ್ಬರನ್ನು ನಿಮಗೆ ಪರಿಚಯಿಸುತ್ತಾರೆ.

ಉಪಾಯ :- ಪ್ರೀತಿ ಜೇವನವನ್ನು ಉತ್ತಮಗೊಳಿಸಲು ಹರಿಯುವ ನೀರಿನಲ್ಲಿ ತಾಮ್ರದ ನಾಣ್ಯವನ್ನು ಹರಿಸಿ.

ಇಂದು ನಿಮ್ಮ ಉದ್ಯೋಗದಲ್ಲಿ ಅತ್ಯಂತ ಹರ್ಷದಾಯಕ ವಾತಾವರಣ ಇರಲಿದೆ ನಿಮ್ಮ ಮೇಲಾಧಿಕಾರಿಗಳು ನಿಮ್ಮನ್ನು ಪ್ರಶಂಸಿಸುತ್ತಾರೆ. ಉದ್ಯೋಗ ಸಂಬಂಧಿ ಪ್ರವಾಸಗಳು ನಿಮಗೆ ಲಾಭವನ್ನು ತಂದು ಕೊಡುತ್ತದೆ. ಸರ್ಕಾರಿ ಅಧಿಕಾರಿಗಳು ಇಲ್ಲವೇ ರಾಜಕೀಯ ವ್ಯಕ್ತಿಗಳಿಂದ ನಿಮಗೆ ಸಹಾಯವಾಗಲಿದೆ.

ಕುಟುಂಬದಲ್ಲಿ ಸಂತೋಷ ವಾತಾವರಣವು ನಿಮ್ಮ ಸಹೋದರರು ಮತ್ತು ನಿಮ್ಮ ಸ್ನೇಹಿತರು ನಿಮಗೆ ಸಹಾಯಹಸ್ತ ಚಾಚುತ್ತಾರೆ. ಹೊಸ ವ್ಯಾಪಾರ ಪ್ರಾರಂಭಿಸುವುದಕ್ಕೆ ಇದು ಒಳ್ಳೆಯ ಸಮಯ. ವ್ಯಾಪಾರ-ವ್ಯವಹಾರದ ಲಾಭವಾಗಲಿದೆ. ಇಂದು ಸಂಪತ್ತಿನಲ್ಲಿ ಏರಿಕೆಯ ಸಂಭವ. ನಿಮ್ಮ ವ್ಯಕ್ತಿತ್ವದಿಂದ ಹಲವು ಜನರು ಪ್ರಭಾವಿತರಾಗುತ್ತಾರೆ.

ಉಪಾಯ :- ತುಳಸಿ ಸಸ್ಯದ ಬಳಿ ಸಂಜೆ ದೀಪವನ್ನು ಹಚ್ಚಿಸಿ, ಇದರಿಂದ ನಿಮ್ಮ ಪ್ರೀತಿಯ ಜೀವನವು ಸುಧಾರಿಸುತ್ತದೆ.

ಕೆಲಸದಲ್ಲಿ ನಿಧಾನಗತಿಯಿಂದ ಪ್ರಗತಿ ಉಂಟಾಗುತ್ತದೆ. ಕೈಹಿಡಿದ ಕೆಲಸಗಳು ವಿಳಂಬವಾಗಿ ಪೂರ್ಣಗೊಳ್ಳುತ್ತವೆ. ಹೃದ್ರೋಗ ಸಂಬಂಧಿ ಕಾಯಿಲೆಗಳು ನಿಮ್ಮನ್ನು ಭಾಧಿಸಬಹುದು ಪಾದಗಳಿಗೆ ಗಾಯವಾಗುವ ಸಂಭವವಿದೆ ರಕ್ತ ದೋಷದಿಂದ ಅಥವಾ ಅತೀಉಷ್ಣ ಪ್ರಕೃತಿಯಿಂದ ಶಾರೀರಿಕ ಯಾತನೆಗಳು ಉಂಟಾಗಬಹುದು.ಆಧ್ಯಾತ್ಮಿಕ ಜೀವನದ ಪೂರ್ವಾಪೇಕ್ಷಿತವಾಗಿರುವಂತಹ ನಿಮ್ಮ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಿ.

ಉಪಾಯ :- ಮಾಂಸ, ಮಧ್ಯ ಮತ್ತು ಇತರ ಪ್ರತೀಕಾರದ ವಸ್ತುಗಳನ್ನು ತ್ಯಾಗ ಮಾಡುವ ಮೂಲಕ ಕುಟುಂಬ ಜೀವನವು ಉತ್ತಮವಾಗಿರುತ್ತದೆ.

ಚಂದ್ರದೇವನು ಅಷ್ಟಮ ಸ್ಥಾನದಲ್ಲಿ ಸಂಚರಿಸುವುದರಿಂದ ಶರಿರಿಕ ರೋಗಬಾಧೆ ಕಾಡಲಿದೆ. ಅನಾವಶ್ಯಕವಾದ ವಿವಾದಗಳು ನಿಮ್ಮ ಹೆಗಲಮೇಲೆ ಕುಳಿತುಕೊಳ್ಳಬಹುದು. ಮಾನಸಿಕವಾಗಿ ಕಖಿನ್ನತೆ ಉಂಟಾಗಬಹುದು. ಭಯ ಆತಂಕಗಳು ನಿಮ್ಮನ್ನು ಕಾಡುತ್ತವೆ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಬಹಳ ಏರಿಳಿತಗಳು ಸಂಭವಿಸುತ್ತದೆ.ನಿಮ್ಮ ಸಭ್ಯ ನಡವಳಿಕೆ ಮೆಚ್ಚುಗೆ ಪಡೆಯುತ್ತದೆ. ಅನೇಕ ಜನರು ನಿಮ್ಮನ್ನು ಹೊಗಳುತ್ತಾರೆ.

ಉಪಾಯ :- ನಿಮ್ಮ ಪ್ರೇಮಿಯನ್ನು ಭೇಟಿಯಾಗಲು ಹೋಗುವ ಮೊದಲು ನಿಮ್ಮ ಹಣೆಯ ಮೇಲೆ ಕೇಸರಿ ತಿಲಕವನ್ನು ಹಚ್ಚಿಸಿ, ಮತ್ತು ನಿಮ್ಮ ಪ್ರೀತಿಯ ಬಂಧವನ್ನು ಹೆಚ್ಚಿಸಿ.

ಚಂದ್ರ ದೇವನು ಇಂದು ನಿಮ್ಮ ರಾಶಿಗೆ ಸಪ್ತಮ ಸ್ಥಾನದಲ್ಲಿ ಸಂಚರಿಸುವುದರಿಂದ ವಿದೇಶಿ ವ್ಯವಹಾರಗಳಿಂದ ಲಾಭವ ಉಂಟು. ಬಾಳ ಸಂಗಾತಿಯ ಜೊತೆ ರಸಮಯ ಕ್ಷಣಗಳನ್ನು ಕಳೆಯಲಿದ್ದೀರಿ. ಆದಾಯದಲ್ಲಿ ಏರಿಕೆ. ಯತ್ನಿಸುವ ಕಾರ್ಯದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ನಿಮ್ಮ ಸಹೋದ್ಯೋಗಿಗಳು ಅಥವಾ ಸ್ನೇಹಿತರು ನಿಮಗೆ ಉತ್ತಮ ಸಹಕಾರವನ್ನು ಕೊಡುತ್ತಾರೆ. ಪ್ರೇಮಿಗಳಿಗೆ ಶುಭದಿನ. ಆದಾಯದಲ್ಲಿ ಏರಿಕೆ. ಸಣ್ಣದೊಂದು ಪ್ರವಾಸ ಕೈಗೊಳ್ಳುವ ಸಂಭವ ಸಾಮಾಜಿಕ ಜೀವನ ಸುವ್ಯವಸ್ಥೆಯಿಂದ ಕೂಡಿರುತ್ತದೆ.

ಉಪಾಯ :- ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ತಾಮ್ರದ ಪಾರದಲ್ಲಿ ನೀರು ಸೇವಿಸಿ..

ಈ ರಾಶಿಯವರಿಗೆ ಚಂದ್ರದೇವನು ಷಷ್ಠಮ ಸ್ಥಾನದಲ್ಲಿ ಸಂಚರಿಸುವುದರಿಂದ ಶುಭ ಫಲ ಕೊಡುತ್ತಾನೆ ಅಂದುಕೊಂಡ ಕಾರ್ಯದಲ್ಲಿ ಜಯ. ಸ್ಪರ್ಧೆ ಮತ್ತು ಶತ್ರುಗಳ ಮಧ್ಯೆ ಜಯ ಉಂಟಾಗುತ್ತದೆ. ನಿಮ್ಮ ಕೌಟುಂಬಿಕ ಜೀವನವು ಶಾಂತಯುತವು ಹರ್ಷದಾಯಕ ಆಗಿರುತ್ತದೆ. ಇಂದು ನಿಮ್ಮ ಹಣ ಸ್ವಲ್ಪ ಖರ್ಚಾಗಲಿದೆ.ಒತ್ತಡದ ಕೆಲಸದ ವೇಳಾಪಟ್ಟಿ ನಿಮ್ಮ ಸಹನೆಯನ್ನು ಕೆಣಕಬಹುದು. ವ್ಯಾಪಾರವನ್ನು ಬಲಪಡಿಸಲು ಇಂದು ನೀವು ಯಾವುದೇ ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದಕ್ಕಾಗಿ ನಿಮ್ಮ ಆಪ್ತ ನಿಮಗೆ ಆರ್ಥಿಕವಾಗಿ ಸಹಾಯ ಮಾಡಬಹುದು.

ಉಪಾಯ :- ಬಾಕುಲದ ಮೂಲವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ತಮ್ಮ ಬಲಿಸ್ ಇರಿಸುವುದರಿದ ಆರೋಗ್ಯವು ಸುಧಾರಿಸುತ್ತದೆ

ಈ ರಾಶಿಯವರಿಗೆ ಚಂದ್ರದೇವನ ಪಂಚಮ ಸ್ಥಾನದಲ್ಲಿ ಸಂಚರಿಸುವುದರಿಂದ ನಿಮ್ಮ ಕೆಲಸಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ತಂದು ಕೊಡಲಾರವು. ವಾಹನ ಚಲಾಯಿಸುವುದರಲ್ಲಿ ಎಚ್ಚರವಾಗಿರಿ. ನಿಮ್ಮ ತಾಯಿ ಕಡೆಯ ಸಂಬಂಧಿಕರಿಂದ ನಿಮಗೆ ಸ್ವಲ್ಪ ಬೇಸರವಾಗಬಹುದು. ವಿದ್ಯಾರ್ಥಿಗಳಿಗೆ ಅಷ್ಟೊಂದು ಶುಭವಲ್ಲ.ಕೆಲಸದ ಒತ್ತಡ ಮತ್ತು ಮನೆಯಲ್ಲಿ ಅಪಶ್ರುತಿ ಸ್ವಲ್ಪ ಉದ್ವೇಗ ತರಬಹುದು. ಆರ್ಥಿಕ ದೃಷ್ಟಿಯಿಂದ ಇಂದಿನ ದಿನ ಮಿಶ್ರವಾಗಿ ಉಳಿಯುತ್ತದೆ.

ಈ ರಾಶಿಯವರಿಗೆ ಚಂದ್ರ ದೇವನು ಚತುರ್ಥ ಸ್ಥಾನದಲ್ಲಿ ಸಂಚರಿಸುವುದರಿಂದ ಹೂಡಿಕೆಯಲ್ಲಿ ನಷ್ಟವಾಗುವ ಸಂಭವವಿದೆ.ದ್ವಿಚಕ್ರವಾಹನಗಳನ್ನು ಜಾಗೃತೆಯಿಂದ ಓಡಿಸಿ ಅಪಘಾತ ಸಂಭವವಿದೆ.ಖರ್ಚಿನಲ್ಲಿ ಗಣನೀಯವಾದ ಏರಿಕೆ ಕಂಡುಬಂರುತ್ತದೆ.ಇಂದಿನ ದಿನ ನೀವು ಬಹಳ ಭಾವುಕನಾಗುತ್ತೀರಿ.ನೀವು ಇಂದು ನಿಮಗಾಗಿ ಸಾಕಷ್ಟು ಸಮಯ ಹೊಂದಿರುವುದರಿಂದ ನಿಮ್ಮ ಒಳ್ಳೆಯ ಆರೋಗ್ಯದ ಸಲುವಾಗಿ ಒಂದು ಧೀರ್ಘ ನಡಿಗೆಗೆ ಹೋಗಿ.

ಉಪಾಯ :- ಎಣ್ಣೆಯ ಪಕೋಡಗಳನ್ನು ಕಾಗೆಗಳಿಗೆ ತಿನಿಸುವುದರಿಂದ ಆರೋಗ್ಯವು ಉತ್ತಮವಾಗಿರುತ್ತದೆ.

ಈ ರಾಶಿಯವರಿಗೆ ಚಂದ್ರ ದೇವರು ತೃತೀಯ ಸ್ಥಾನದಲ್ಲಿ ಇಂದಿನ ದಿನ ಸಂಚರಿಸುವುದರಿಂದ ಸಂತೋಷದಾಯಕ ತೃಪ್ತಿಕರ ಜೀವನವನ್ನು ನಡೆಸುತ್ತೀರಿ ನಿಮ್ಮ ಶತ್ರುಗಳ ಮೇಲೆ ಭಯವನ್ನು ಸಾಧಿಸುತ್ತೀರಿ ಈಗಾಗಲೇ ಆರೋಗ್ಯ ಸಮಸ್ಯೆ ಇದ್ದರೆ ಚೇತರಿಸಿಕೊಳ್ಳುತ್ತಿದೆ ಹಳೆಯ ಸಂಬಂಧಗಳು ಮತ್ತೆ ಬಿಗಿ ಗೊಳ್ಳುವವು ನಿಮ್ಮ ಸಂಗಾತಿಯೊಂದಿಗೆ ಸೌಹಾರ್ದಯುತ ಜೀವನ ಇಂದು ಉಂಟಾಗುತ್ತದೆ ಸಣ್ಣದೊಂದು ಪಿಕ್ನಿಕ್ ಗೆ ಹೋಗಬಹುದು ತುಂಬಾ ಚಿಂತೆ ಮತ್ತು ಒತ್ತಡ ರಕ್ತದೊತ್ತಡವನ್ನು ಉಂಟುಮಾಡಬಹುದು.

ಉಪಾಯ :- ಉತ್ತಮ ಆರ್ಥಿಕ ಭವಿಷ್ಯಕ್ಕಾಗಿ, ನಿಮ್ಮ ಬೂಟುಗಳ ಕೆಳಗೆ 7 ಮೃದುವಾದ ತಾಮ್ರದ ಪಿನ್‌ಗಳನ್ನು ಸೇರಿಸಿ (ನಿಮ್ಮನ್ನು ನೋಯಿಸದೆ).

ಈ ರಾಶಿಯವರಿಗೆ ಚಂದ್ರ ದೇವನು ದ್ವಿತೀಯ ಸ್ಥಾನದಲ್ಲಿ ಇಂದು ಸಂಚರಿಸುವುದರಿಂದ ಅತೃಪ್ತಿಕರ ಜೀವನವನ್ನು ನಡೆಸುತ್ತೀರಿ ಸಹೋದ್ಯೋಗಿಗಳು ನಿಮಗೆ ಸಹಕಾರ ನೀಡಲಾರರು. ಯಾರೊಂದಿಗೂ ಸ್ಪರ್ಧೆ ವಾದ-ವಿವಾದ ಮಾಡಬೇಡಿ. ಇಂದು ಸಾಮಾಜಿಕ ಜೀವನ ಅಷ್ಟೊಂದು ಸ್ಪೂರ್ತಿದಾಯಕ ವಲ್ಲ ಹತಾಶೆಯ ಮನೋಭಾವ ನಿಮ್ಮ ಶಾಂತಿಯನ್ನು ಕೆಡಿಸಬಹುದು. ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತೀರಿ. ಪ್ರಯಾಣಕ್ಕೆ ಇದು ಸೂಕ್ತ ಸಮಯವಲ್ಲ ಮುಂದೂಡಿ.

ಉಪಾಯ :- ಬಿಳಿ ದೇಶಿಯ ನಾಯಿಗೆ ಆಹಾರ ತಿನ್ನಿಸುವುದು ಆರ್ಥಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ.

ಈ ರಾಶಿಯವರಿಗೆ ಚಂದ್ರದೇವನು ಪ್ರಥಮ ಸ್ಥಾನದಲ್ಲಿ ಸಂಚರಿಸುವುದರಿಂದ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲದೆ. ಉತ್ತಮ ಜೀವನ ನಡೆಸುತ್ತೀರಿ. ಸ್ನೇಹಿತ ಮತ್ತು ಸಂಬಂಧಿಕರಲ್ಲಿ ಗೌರವಾದರಗಳು ಸಂಭವಿಸುತ್ತವೆ. ಅವಿವಾಹಿತರಿಗೆ ವಿವಾಹ ಸಂಬಂಧ ಚರ್ಚೆಗಳು ಉತ್ತಮ ಫಲದಾಯಕ ನಿರ್ಣಯವನ್ನು ಕೊಡಬಹುದು. ಪ್ರೇಮಿಗಳಿಗೆ ಶುಭದಿನ.

ಉಪಾಯ :- ಬಾಳೆ ಮರವನ್ನು ಪೂಜಿಸುವುದು ಮತ್ತು ಗುರುವಾರದಂದು ತುಪ್ಪದ ದೀಪವನ್ನು ಬೆಳಗಿಸುವುದು ಆರೋಗ್ಯದ ದೃಷ್ಟಿಯಿಂದ ಶುಭವಾಗಿರುತ್ತದೆ.

Leave a Reply

Your email address will not be published. Required fields are marked *