ಆಗಸ್ಟ್ 30 ರಾಶಿ ಭವಿಷ್ಯ ಇಲ್ಲಿದೆ

ಸೂರ್ಯೋದಯ:06:41AM, ಸೂರ್ಯಸ್ತ:06:24PM

ಶಾರ್ವರೀ ನಾಮ ಸಂವತ್ಸರ

ಮಾಘ ಮಾಸ, ಉತ್ತರಾಯಣ, ಹೇಮಂತ ಋತು, ಶುಕ್ಲ ಪಕ್ಷ, 

ತಿಥಿ: ಚೌತಿ  ( 27:37 )

ನಕ್ಷತ್ರ: ಉತ್ತರ ಭಾದ್ರಪದ  ( 18:28 )

ಯೋಗ: ಸಾಧ್ಯ  ( 25:17 )

ಕರಣ: ವಣಿಜ  ( 14:43 ) 

 ವಿಷ್ಟಿ  ( 27:37 )

ರಾಹು ಕಾಲ: 07:30 – 09:00

ಯಮಗಂಡ: 10:30 – 12:00

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.

ಕೆಲಸ ನೀಡಿರುವ ಅನ್ನದಾತ ಮಾಲಕನಿಗೆ ದ್ರೋಹ ಮಾಡಬೇಡಿ,

ಮೇಲಾಧಿಕಾರಿಗಳ ಜೊತೆ ಉತ್ತಮ ಬಾಂಧವ್ಯ ರೂಢಿಸಿಕೊಳ್ಳಿ,

ನಿಮಗೆ ಕೆಲಸದ ಹೆಚ್ಚಿನ ಒತ್ತಡ, ವ್ಯಾಪಾರದಲ್ಲಿ ಗ್ರಾಹಕರೊಡನೆ ಕಿರಿಕಿರಿ ಸಂಭವ, ಆರ್ಥಿಕ ಸಮಸ್ಯೆ ಎದುರಿಸಬೇಕಾದ ಸಾಧ್ಯತೆ ಇದೆ, ಆಸ್ತಿ ವಿಚಾರ ರಾಜಿ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ, ವಿದೇಶಿ ಮೂಲದ ಕಂಪನಿಗಳ ಜೊತೆ ಒಪ್ಪಂದ ಸಫಲತೆ ಕಾಣಲಿದೆ, ವಿದೇಶಿ ಉದ್ಯೋಗಿಗಳಿಗೆ ಕೆಲಸದ ಬದಲಾವಣೆಸಾಧ್ಯತೆ,ಕುಟುಂಬದಲ್ಲಿ ಕೌಟುಂಬಿಕ ಕಲಹನಿಂದ ಅಶಾಂತಿ ಹೆಚ್ಚುತ್ತದೆ, ಸರ್ಕಾರದ ವಿಭಾಗಗಳ ಸೇವೆಯ ಸಂದರ್ಶನ ಬರುವ ಸಾಧ್ಯತೆ ಇದೆ, ಮದುವೆ ಚರ್ಚೆ, ಸಂಗಾತಿಯೊಡನೆ ಸಣ್ಣ ಪುಟ್ಟ ವಿಷಯಗಳಿಗೆ  ಕಿರಿಕಿರಿ,

ಉದ್ಯೋಗಿಗಳಿಗೆ ಸಮಯ ಅನುಕೂಲಕರವಾಗಿದೆ, ವ್ಯಾಪಾರಿಗಳಿಗೆ ಉತ್ತಮ ಧನಲಾಭ, ನಿಮ್ಮ ಕಠಿಣ ಶ್ರಮದಿಂದ ಸಾಲ ಪರಿಹಾರ, ಆರ್ಥಿಕವಾಗಿ ಸಬಲ ಆಗುತ್ತೀರಿ, ಸರ್ವ ಪ್ರಯತ್ನಗಳಲ್ಲಿ ಸಫಲತೆ ಸಿಗುತ್ತದೆ, ಪ್ರೇಮಿಗಳ ಆತ್ಮಸ್ಥೈರ್ಯ ಸದೃಢ ವಾಗುವುದು, ನಿರ್ಣಯ ತೆಗೆದುಕೊಳ್ಳುವುದು ಮುನ್ನ ಪತ್ನಿಯ ಮಾರ್ಗದರ್ಶನ ಪಡೆಯಿರಿ, ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಬಡ್ತಿ, ಕೆಲವರಿಗೆ ದೂರದ ವರ್ಗಾವಣೆ ಚಿಂತನೆ ಕಾಡಲಿದೆ, ಕೆಲಸ ಕಾರ್ಯದ ಲೋಪ ದೋಷದಿಂದ ನ್ಯಾಯಾಲಯಕ್ಕೆ ಮೊರೆ ಹೋಗುವ ಸಾಧ್ಯತೆ,

ಕುಟುಂಬದ ಕಲಹಗಳಿಂದ ಮಾನಸಿಕ ಅಶಾಂತಿ ಹೆಚ್ಚಾಗಿ ಏಕಾಂಗಿ ಇರಲು ಇಷ್ಟ ಪಡುವಿರಿ, ಉದ್ಯೋಗದಲ್ಲಿ ಅಡಚಣೆ ಎದುರಾಗುವ ಸಾಧ್ಯತೆ ಇದೆ, ಮೇಲಾಧಿಕಾರಿಯ ಒತ್ತಡ ಹಾಗೂ ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ, ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಉತ್ತಮ ಸಮಯವಾಗಿದೆ, ವ್ಯಾಪಾರಿಗಳಿಗೆ ಈ ದಿನ ಉತ್ತಮವಾಗಿದ್ದು ಧನ ಲಾಭವಾಗಲಿವೆ,  ಕೋರ್ಟಿನ ತೀರ್ಪು ಅನುಕೂಲಕರವಾಗಲಿದೆ, ಯಾರಿಗೂ ಸಾಲ ನೀಡುವುದು ಬೇಡ, ಆರೋಗ್ಯದ ಕಡೆ ಗಮನವಿರಲಿ, ದಂಪತಿಗಳಿಗೆ ಕಷ್ಟದ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ, ಸಮಾಜಸೇವಕರು ರಾಜಕಾರಣಿಗಳಿಗೆ ಗೌರವ ಅಧಿಕಾರ-ಪ್ರಾಪ್ತಿ ಸಿಗಲಿದೆ, ಉನ್ನತಾಧಿಕಾರಿಗಳಿಗೆ ಸರ್ಕಾರದ ಕಡೆಯಿಂದ ನಿರೀಕ್ಷಿಸಿದ್ದ ಕೆಲಸ ಸಫಲತೆ ಕಾಣಲಿದೆ. ಕುಟುಂಬದಲ್ಲಿ ಶುಭಮಂಗಲ ಕಾರ್ಯಗಳ ಸಂಭವ, ಕೃಷಿಭೂಮಿ ಅಥವಾ ನಿವೇಶನ ಖರೀದಿಸುವ ಸಾಧ್ಯತೆ, ವಿದೇಶ ಪ್ರವಾಸ ಅಥವಾ ವಿದೇಶಿ ಕಂಪನಿಗಳು ಒಂದಿಗಿನ ಒಪ್ಪಂದ ಯಶಸ್ಸು, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಆರ್ಥಿಕ ಚೇತರಿಕೆ

ಸಾವಯುವ ಕೃಷಿ, ಸಂಪ್ರದಾಯಕ ಕೃಷಿಕರಿಗೆ ಉತ್ತಮ ಲಾಭ. ಸರಕಾರದ ವತಿಯಿಂದ ಧನಲಾಭ. ರಾಜಕಾರಣಿಗಳು ಮರಳು ಮಾಫಿಯಾ ಕೇಸಲ್ಲಿ ಸಿಲುಕುವ ಸಂಭವ. ಶಿಕ್ಷಕವೃಂದದವರಿಗೆ ಆರ್ಥಿಕ ಚೇತರಿಕೆ, ಕಟ್ಟಿದ ಮನೆ ಖರೀದಿಸುವ ಚಿಂತನೆ. ಅತಿಥಿ ಉಪನ್ಯಾಸಕರಿಗೆ ವೇತನ ಸಿಗಲಿದೆ. ಅದೇ ಸ್ಥಳದಲ್ಲಿ ಮುಂದುವರಿಯುವುದು ಉತ್ತಮ. ವೃತ್ತಿರಂಗದಲ್ಲಿ ಹಿತಶತ್ರುಗಳು ಇದ್ದರೂ, ಅವರನ್ನು ಮಣಿಸಿ ಜಯ ಸಾಧಿಸುವಿರಿ. ಅಧಿಕಾರಿಗಳಿಗೆ ಪ್ರಭಾವಶಾಲಿ ವ್ಯಕ್ತಿಗಳ ಒತ್ತಡದಿಂದ ಕೆಲಸದಲ್ಲಿ ತೊಂದರೆ ಹಾಗೂ ಆರೋಗ್ಯದಲ್ಲಿ ಏರುಪೇರು. ಹೊಸ ಉದ್ಯಮ ಪ್ರಾರಂಭ ಮಾಡುವುದು ಉತ್ತಮ. ಇನ್ನು ಸ್ವಲ್ಪ ಶ್ರಮ ಮಾಡಿದರೆ, ಖಂಡಿತವಾಗಿ ಸರ್ಕಾರದ ನೌಕರಿ ಸಿಗುವ ಯೋಗ ಇದೆ. ಹಿರಿಯರ ಅಪ್ಪಣೆಯಿಂದ ಪ್ರೇಮಿಗಳ ಮದುವೆ ಸಂಭವ.  ವಿದೇಶದಲ್ಲಿ ನೆಲೆಸಿರುವ ಉದ್ಯೋಗಾಂಕ್ಷಿಗಳ ಕೆಲಸದಲ್ಲಿ ಅತಂತ್ರ ಸಂಭವ,ಪಾರ್ಟ್ ಟೈಮ್ ಕೆಲಸ ಮಾಡುವಿರಿ.

ಹಿರಿಯರು ನಿಮ್ಮ ವಿಚಾರದಲ್ಲಿ ಕರುಣಾಳುಗಳಾಗಿರುತ್ತಾರೆ. ಅವರ ಮಾರ್ಗದರ್ಶನ ಮತ್ತು ಹಿತನುಡಿಗಳು ನಿಮ್ಮ ಮೇಲೆ ಗಾಢ ಪರಿಣಾಮ ಬೀರಿರುವುದು. ಅದನ್ನು ಮುಕ್ತಕಂಠದಿಂದ ಎಲ್ಲರಿಗೂ ತಿಳಿಯುವಂತೆ ತಿಳಿಸಿ. ಆ ಮೂಲಕ ಆ ಹಿರಿಯರಿಗೆ ಗೌರವ ಸೂಚಿಸಿ.

 ಸುಮ್ಮನೆ ಪೊಳ್ಳು ಮಾತುಗಳನ್ನು ನಂಬಿ ಇರುವ ವ್ಯವಹಾರವನ್ನು ಅಭಿವೃದ್ಧಿ ಪಡಿಸಲು ಮುಂದಾಗದಿರಿ. ಇದರಿಂದ ತೊಂದರೆ ಅನುಭವಿಸಬೇಕಾಗುವುದು.

ಬಾಳಸಂಗಾತಿಯ ಬಯಕೆಗಳನ್ನು ನಯವಾಗಿ ತಿರಸ್ಕರಿಸಿ. ಅವರು ಬಹು ಮೊತ್ತದ ಖರ್ಚಿನ ದಾರಿಗೆ ನಿಮ್ಮನ್ನು ಎಳೆಯಲು ಬಯಸುತ್ತಿರುವರು. ಆದರೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಅವರಿಗೆ ಸಹಾಯ ಮಾಡಿ.ಯಶಸ್ಸಿನ ದಾರಿಗಳನ್ನು ತಿಳಿಸಿಕೊಡುವ ಅಥವಾ ನಿರ್ದೇಶಿಸುವ ಹಿರಿಯರನ್ನು ಭೇಟಿಯಾಗುವ ಅವಕಾಶ ಸ್ಪಷ್ಟವಾಗಿರುವುದು. ಕೆಲವರು ಮನೋಕಾಮನೆಗಳು ಪೂರ್ಣಗೊಳ್ಳುವ ಸುಸಂದರ್ಭವನ್ನು ನೀವು ಅನುಭವಿಸುವಿರಿ.ಹಣಕಾಸಿನ ಅನುಕೂಲ ಆಗುವ ಸಾಧ್ಯತೆ ಇದೆ.

ನಿರಂತರ ಕೆಲಸದ ಒತ್ತಡದಿಂದ ಮಾನಸಿಕ ಒತ್ತಡ ಹೆಚ್ಚಾಗಲಿದೆ. ತರಾತುರಿ ಹೂಡಿಕೆ ಮಾಡಬೇಡಿ, ಸರಕಾರ ಸ್ವಾಮ್ಯದ ಸಂಸ್ಥೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಹೊಸ ಸ್ನೇಹಿತನ ಪರಿಚಯ. ಸಂಗಾತಿಯೇ ಸುಂದರ ಉಡುಗೊರೆ ಕಾಣಿಕೆಯಾಗಿ ನೀಡುವಿರಿ, ಹೂಗಳಿಂದ ತುಂಬಿದ ಪ್ರಣಯದ ರಾತ್ರಿ ಅನುಭವಿಸುವಿರಿ. ನಿಮ್ಮ ಆತ್ಮವಿಶ್ವಾಸ, ಕಠಿಣ ಶ್ರಮ, ಜ್ಞಾನದಿಂದ ಸರಕಾರಿ ಉದ್ಯೋಗ ಪ್ರಾಪ್ತಿ. ದುಶ್ಚಟಗಳು ತ್ಯಜಿಸಲು ನಿರ್ಧರಿಸಿರಿ. ಪಿತ್ರಾರ್ಜಿತ ಆಸ್ತಿಗಾಗಿ ಕಿರಿಕಿರಿ, ಮನಃಶಾಂತಿ ಇಲ್ಲದೆ ಆಗುವುದು. ಪರಿಚಯ ಅಥವಾ ಅಪರಿಚಿತರ ವ್ಯಕ್ತಿಯ ಆಮಿಷಗೆ ಒಳಗಾಗಬೇಡಿ. ಜೀವವಿಮೆ ಸಂಸ್ಥೆಯಲ್ಲಿ ಹೂಡಿಕೆ ಮಾಡುವ ಸಂಭವ. ಕೆಲವೊಮ್ಮೆ ಸಾರಿ ನೀವು ಸಂಗಾತಿಗೆ ಅಸಭ್ಯ ವರ್ತನೆ ತೋರಿಸಿ ಕ್ಷಮೆ ಕೋರುವಿರಿ. ವ್ಯಾಪಾರದ ಉದ್ದೇಶದಿಂದ ಪಡೆದಿರುವ ಸಾಲ ತೀರಿಸಲಿದ್ದೀರಿ. ನಿಮ್ಮ ಧರ್ಮಪತ್ನಿಯನ್ನು ಮನವೊಲಿಸಲು  ಯಶಸ್ವಿಯಾಗುವಿರಿ. ಕುಟುಂಬ ಸದಸ್ಯರ ಆರೋಗ್ಯ ಪ್ರಗತಿ. ಕೃಷಿ ಭೂಮಿ ಖರೀದಿಸುವ ಸಾಧ್ಯತೆ. ನಗರ ಪ್ರದೇಶದಲ್ಲಿ ನಿವೇಶನ ಖರೀದಿಸುವ ಚಿಂತನೆ ಮಾಡುವಿರಿ.  ಹಳೆಯದಾದ ಕಟ್ಟಡ ವಾಸ್ತು ಪ್ರಕಾರ ನವೀಕರಣ ಮಾಡುವಿರಿ. ಶತ್ರುಗಳ ಬಗ್ಗೆ ಜಾಗ್ರತೆ ವಹಿಸಿ. ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಆರ್ಥಿಕ ಚೇತರಿಕೆ. ಜೂಜಾಟ ತ್ಯಜಿಸುವ ನಿರ್ಧಾರ ಮಾಡುವಿರಿ. ಹಿರಿಯರ ನೆರವಿನಿಂದ ಪ್ರೇಮಿಗಳ ಮದುವೆ ದಿನಾಂಕ ನಿರ್ಧಾರ. ದಂಪತಿಗಳಿಗೆ ಸಂತಾನದ ಸಿಹಿಸುದ್ದಿ.

ಸಹೋದ್ಯೋಗಿಗಳು ನಿಮ್ಮ ಕೆಲಸಕ್ಕೆ ಸಹಕಾರ ನೀಡುವರು. ಸಾಲಕ್ಕಾಗಿ ಜಾಮೀನು ನೀಡಿದವರು ಕಷ್ಟ ಅನುಭವಿಸಬೇಕಾಗುವುದು. ನಿಮ್ಮ ಬಾಸ್ ನಿಮ್ಮ  ಬಗ್ಗೆ ಪ್ರಶಂಸೆಯ ಮಾತುಗಳನ್ನು ಆಡುವರು. ಕೃಷಿಕರಿಗೆ ಸಂತಸ ವಾಗಲಿದೆ ಸರ್ಕಾರದಿಂದ ನಿಮಗೆ ಬರಬೇಕಾಗಿದ್ದ ಬಾಕಿ ಹಣಗಳು ಈಗ ಬರುತ್ತವೆ. ಬಹುದಿನದಿಂದ ಆರೋಗ್ಯದಲ್ಲಿ ಕಾಡುತ್ತಿರುವ ಸಮಸ್ಯೆ ಸುಧಾರಣೆಯಾಗಿ ಮನಸ್ಸಿನಲ್ಲಿದ್ದ ಆತಂಕಗಳು ನಿವಾರಣೆಯಾಗುತ್ತವೆ. ದಾಂಪತ್ಯದಲ್ಲಿ ಬಿರುಕು  ಚಿಂತನೆ ಮಾಡುವಿರಿ. ಟ್ರಾನ್ಸ್ಪೋರ್ಟ್ ವ್ಯವಹಾರಗಳಲ್ಲಿ ಚೇತರಿಕೆ. ಮಹಿಳಾ ಶಕ್ತಿ, ಸಮಾಜ ಸೇವೆಯಿಂದ ಸಂತಸ ತರಲಿದೆ, ಮುಂದಿನ ದಿನ ನಿಮಗೆ ಉನ್ನತ ಪದವಿ ಸಿಗುವ ಭಾಗ್ಯ. ಸಂಗಾತಿಗಾಗಿ ಬಹುದಿನಗಳ ಒಡವೆ ಕೊಳ್ಳುವ ಆಸೆ ಈಡೇರುತ್ತದೆ. ಪ್ರೇಮಿಗಳ ಸಂಬಂಧ ಸ್ವಲ್ಪ ಕಡಿಮೆಯಾಗುತ್ತದೆ. ಕೃಷಿಕರ ವಾಣಿಜ್ಯ ಬೆಳೆಯಲ್ಲಿ ಆದಾಯ ನಿಧಾನವಾಗಿ ಚೇತರಿಕೆ. ಕೃಷಿ ಭೂಮಿಗಾಗಿ ಹೊಸ ತಂತ್ರಜ್ಞಾನ ಅಳವಡಿಸಲು ಸಾಲ ಸೌಲಭ್ಯಗಳು ದೊರೆಯುತ್ತವೆ.

ವ್ಯಾಪಾರದಲ್ಲಿ ಲಾಭವಾಗಲಿದೆ, ಆಸ್ತಿ ಮಾರಾಟದಿಂದ ಧನಪ್ರಾಪ್ತಿ, ಆಡಳಿತ ವರ್ಗ ಅಥವಾ ಅಧಿಕಾರಿ ಜೊತೆ ಉತ್ತಮ ಬಾಂಧವ್ಯ, ಶಿಕ್ಷಕ ವರ್ಗದವರಿಗೆ ಉತ್ತಮ ಧನಲಾಭ, ಹಿರಿಯರು ಅಥವಾ ಸಹೋದರರೊಂದಿಗೆ ವಾದ ವಿವಾದಗಳಿಂದ ದೂರ ಇರುವುದು ಉತ್ತಮ,  ನೌಕರಿ ಯೋಗ ಸಿಗಲಿದೆ, ಹೊಸತನದ ವ್ಯಾಪಾರ ಪ್ರಾರಂಭಿಸಲು ಉತ್ತಮವಾಗಿದೆ, ನಿವೇಶನ ಖರೀದಿಸುವ ಸಾಧ್ಯತೆ, ಕಂಕಣ ಬಲ ಕೂಡಿ ಬರಲಿದೆ, ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆ ಸಂಭವ, ಉದ್ಯೋಗ ಬದಲಾವಣೆಗೆ ಬಯಸಿದವರಿಗೆ ಒಳ್ಳೆ ಕೆಲಸ ಸಿಗಲಿದೆ, ಆತ್ಮೀಯರ ಸಹಾಯದಿಂದ ಉದ್ಯೋಗದಲ್ಲಿ ಬಡ್ತಿ ಜೊತೆಗೆ ವರ್ಗಾವಣೆ, ಸಂತಾನ ಭಾಗ್ಯ, ಕೋರ್ಟ್ ಕೇಸಿನಲ್ಲಿ ಜಯ, ಶತ್ರುಗಳು ನಿಮಗೆ ಶರಣಾಗತಿ ಆಗುವ ಸಂಭವ, ಬಹುದಿನದಿಂದ ಪ್ರೀತಿಸುತ್ತಿರುವ ಪ್ರೇಮಿಗಳ ಮದುವೆ ಹಿರಿಯರ ಸಮ್ಮುಖದಲ್ಲಿ ಮದುವೆ ಚರ್ಚೆ, ನಿಮ್ಮ ತ್ಯಾಗಕ್ಕೆ ಬೆಲೆ ಸಿಗಲಿದೆ,

ಮಹಿಳೆಯರು ಮನೆಯಲ್ಲಿ ಕೆಲಸ ಮಾಡುವಾಗ ಜಾಗ್ರತೆವಹಿಸಿ. ಹಣ ಹೂಡಿಕೆ ಯಿಂದ ನಿಮಗೆ ಲಾಭ. ಮಹಿಳೆಯರು ಸಹೋದರರಿಂದ ಪ್ರಯೋಜನ ಪಡೆಯಬಹುದು. ಸಂಗಾತಿ ಜೊತೆ ಕೆಲವು ಭಿನ್ನಾಭಿಪ್ರಾಯ ಬರಬಹುದು, ನಿಮ್ಮ ಸಂಗಾತಿಗೆ ನಿಮ್ಮ ಉದ್ಯೋಗ ಮತ್ತು ಆದಾಯದ ಬಗ್ಗೆ ಮಾಹಿತಿ ನೀಡುವಿರಿ. ನಾಟಕ ಕಲಾವಿದರು, ಚಲನಚಿತ್ರ ಕಲಾವಿದರು, ಸಂಗೀತ, ಹಿನ್ನೆಲೆ ಗಾಯಕರಿಗೆ ಬೇಡಿಕೆ ಹೆಚ್ಚಾಗಲಿದೆ, ಪ್ರತಿಭಾನ್ವಿತ ಕಲಾವಿದರಿಗೆ ಪ್ರತಿಭಾ ಪುರಸ್ಕಾರ ದೊರೆಯಲಿದೆ. ನೀವು ಉದ್ಯೋಗದ ಭರವಸೆಯ ಮಾಯಾಜಾಲದಲ್ಲಿದ್ದೀರಿ. ಆರ್ಥಿಕ ತಜ್ಞರ ಸಲಹೆ ಪಡೆಯದೆ ಹಣಹೂಡಿಕೆ ಮಾಡಿದಲ್ಲಿ ಆರ್ಥಿಕ ನಷ್ಟದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಚೈತನ್ಯ ಹೊಂದಿರುತ್ತೀರಿ. ಜನಪ್ರತಿನಿಧಿಗಳು ಜನರ ಭೇಟಿಯಾಗುವ ಸಂಭವ. ಮಾನಸಿಕ ಖಿನ್ನತೆ ಉಳ್ಳವರು ಒಂಟಿಯಾಗಿ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪರ್ಯಾವರಣ ಸ್ವಚ್ಛತೆ ಮಾಡಲು ಬಯಸುವಿರಿ. ನಿಮ್ಮ ಸಂಗಾತಿ ಮೂಡ್ ಆಫ್ ಆದಾಗ ಶಾಂತವಾಗಿ ಬಿಡಿ. ಸ್ನೇಹಿತನಿಗೆ ಧನಸಹಾಯ ಮಾಡುವಿರಿ. ಕಿರಾಣಿ, ಸಿದ್ಧ ಉಡುಪು,  ಪ್ಲೇವುಡ್, ಬ್ಯೂಟಿ ಪಾರ್ಲರ್, ಸ್ಟೇಷನರಿ ,ಹಾರ್ಡ್ವೇರ್ ವ್ಯಾಪಾರಸ್ಥರಿಗೆ ಆರ್ಥಿಕ ಧನ ಲಾಭವಾಗಲಿದೆ.

ವಾಹನ ಚಲಿಸುವಾಗ ಶಿರಸ್ತ್ರಾಣ ಧರಿಸದೆ ಚಲಿಸಿದರೆ ಅಪಘಾತ ಸಂಭವ ಜೀವಕ್ಕೆ ಕಂಟಕ, ಸಹೋದ್ಯೋಗಿಗಳಿಂದ ನಿಮಗೆ ಸ್ವಲ್ಪ ನೋವು ಆಗಬಹುದು, ಕುಟುಂಬದಲ್ಲಿ ಇದ್ದಕ್ಕಿದ್ದಂತೆ ಸಮಸ್ಯೆಗಳು ಉದ್ಭವಿಸಬಹುದು, ಗಾಳಿ ಸುದ್ದಿಯಿಂದ ಕುಟುಂಬವು ಒಂದಿಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಸ್ಥಿರಾಸ್ತಿ  ಕುಟುಂಬದ ದಾಯಾದಿಗಳಿಂದ ವಿವಾದವನ್ನು ಬಗೆಹರಿಸುವಿರಿ, ನಿಮ್ಮ ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ, ನೀವು ಬಯಸದೆ ಸಂಗಾತಿ ನಿಮ್ಮ ಬಳಿ ಬರುವಳು, ಹಣಕಾಸು ತೊಡಕು ಕೊನೆಗೊಳ್ಳುತ್ತದೆ, ಹೊಟ್ಟೆಯ ಅಜೀರ್ಣದಿಂದ ಸಮಸ್ಯೆಯಾಗಬಹುದು, ಸಂಜೆಯೊಳಗೆ ಒಳ್ಳೆಯ ಸಂದೇಶ ಪಡೆಯುವಿರಿ, ನಿಮ್ಮ ವೈವಾಹಿಕ ಜೀವನದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ, ಆದರೆ ಹಳೆಯ ಸಂಗಾತಿಗಾಗಿ ಜೀವನಾಂಶ ಕೇಳುವ ಸಾಧ್ಯತೆ ಇದೆ,  ಹೆಣ್ಣು ಮಕ್ಕಳು ಮಾಡಿರುವ ಕೆಲಸಕ್ಕೆ ವಿರೋಧ ಬರಬಹುದು, ಇಂದು ನೀವು ಕೆಲವು ಅಪೂರ್ಣ ವ್ಯವಹಾರವನ್ನು ಮುಗಿಸುವಿರಿ ಇದರಿಂದ ನೀವು ಮೇಲಧಿಕಾರಿಯಿಂದ ಛೀಮಾರಿ ಮಾಡಿಸಿಕೊಳ್ಳಬಹುದು, ಎಲ್ಲಾ ನಮೂನೆಯ ವ್ಯಾಪಾರ ಕ್ಷೇತ್ರಗಳಲ್ಲಿ ಆರ್ಥಿಕ ಪ್ರಗತಿ ಇದೆ, ಗ್ರಾಹಕರೇ ನಿಮ್ಮ ಪಾಲಿಗೆ ದೇವರು ಸಮಯದಿಂದ ವರ್ತಿಸಿ,

ಶಿಕ್ಷಕರು ಆಡಳಿತವರ್ಗದ ಜೊತೆಗೆ ವಾದಿಸಲು ಹೋಗಬೇಡಿ, ಕೆಲಸ ಕಳೆದುಕೊಳ್ಳುವಂತೆ ಮಾಡುತ್ತದೆ, ಹೆಚ್ಚುವರಿ ಸಮಯ ವ್ಯರ್ಥ ಮಾಡಬೇಡಿ, ಪರ್ಯಾಯ ಯೋಜನೆ ಪ್ರಾರಂಭಿಸಿ, ಆರ್ಥಿಕ ಲಾಭಕ್ಕೆ ಹಲವು ಅವಕಾಶಗಳು ನಿಮ್ಮ ಬಳಿ ಇವೆ,ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಿರಿ, ಉದ್ಯೋಗ ಮತ್ತು ಕುಟುಂಬದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ, ನೀವು ಸಮಯದಿಂದ ಇದ್ದರೆ ಒಳಿತು, ಪ್ರೀತಿಯ ವಿಷಯಗಳನ್ನು ಮನಸಲ್ಲಿ ಇಟ್ಟುಕೊಳ್ಳಬೇಡಿ ನಿಮ್ಮ ಸಂಗಾತಿಗೆ ತಿಳಿಸುವುದು ಉತ್ತಮ, ಉದ್ಯೋಗ ಕ್ಷೇತ್ರದಲ್ಲಿ ಆರ್ಥಿಕ ಪ್ರಗತಿ, ಒಂದರ ನಂತರ ಒಂದರಂತೆ ಸಾಲ ತಿಳಿಸುವಿರಿ, ದೊಡ್ಡ ವ್ಯಕ್ತಿಯ ಮಾರ್ಗದರ್ಶನ ನಿಮ್ಮ ಭವಿಷ್ಯ ಪರಿವರ್ತನೆ ಸಾಧ್ಯತೆ, ಅವರಿಂದ ಪ್ರಯೋಜನ ಪಡೆಯಿರಿ, ಹೊಟ್ಟೆ ಮತ್ತು ಕಣ್ಣಿನ ಸಮಸ್ಯೆ ಕಾಡಲಿದೆ, ಸ್ತ್ರೀ-ಪುರುಷ ಆಕರ್ಷಣೆ ಹೆಚ್ಚಾಗುತ್ತದೆ,

ರಾಜಕಾರಣಿಗಳಿಗೆ ವಿರೋಧಪಕ್ಷದವರ ಬೆಂಬಲ, ಮಾರ್ಗದರ್ಶನ ಸಹಕಾರ ನಿಮಗೆ ಸಿಗಲಿದೆ,ಇದರಿಂದ ನಿಮಗೆ ತುಂಬಾ ಲಾಭವಾಗಲಿದೆ. ನಿಮ್ಮಿಂದ ಮಹತ್ವಕಾಂಕ್ಷೆಯ ಯೋಜನೆ ಪ್ರಾರಂಭವಾಗುತ್ತದೆ. ಹಣಕಾಸಿನ ಅಡಚಣೆ ದೂರವಾಗುತ್ತದೆ. ನಿಮ್ಮ ಶ್ರದ್ಧೆಯಿಂದ ಕೆಲಸದ ಮೇಲೆ ಕೇಂದ್ರೀಕರಿಸಿ ಪೂರ್ಣಗೊಳಿಸಲು ಪ್ರಯತ್ನ ಮಾಡಿ. ಹೆಣ್ಣುಮಕ್ಕಳಿಗೆ ಸ್ವಲ್ಪ ಅಪಾಯಕಾರಿ ದಿನವಾಗಿದೆ ಜಾಗೃತಿ ವಹಿಸಿ.ಸ್ನೇಹಿತರು ಅಥವಾ ಸಂಬಂಧಿಗಳು ನಿಮಗೆ ಧನಸಹಾಯ ಮಾಡಲಿದ್ದಾರೆ. ಉದ್ಯೋಗ ಪ್ರಾರಂಭ ಮಾಡುವ ಮುನ್ನ ಹಣಕಾಸಿನ ಬಜೆಟ್ ಗಮನದಲ್ಲಿಟ್ಟುಕೊಳ್ಳಬೇಕು. ಸರಕಾರಿ ನೌಕರರು ಕಾರ್ಯಕ್ಷೇತ್ರದಲ್ಲಿ ಸ್ವಲ್ಪ ತೊಂದರೆ  ಅನುಭವಿಸುವಿರಿ. ಕುಟುಂಬದ ವೈವಾಹಿಕ ಜೀವನದಲ್ಲಿ ಬಹಳ ಖುಷಿಯಾಗಿ ಇರುವಿರಿ. ಸಂಗಾತಿಯೊಡನೆ ಸಂಜೆ ವಾಯು ವಿಹಾರಕ್ಕೆ ಹೋಗುವ ಯೋಚನೆ. ಸಂಗಾತಿಗಾಗಿ ತಮ್ಮ ನೆಚ್ಚಿನ ವಸ್ತುಗಳನ್ನು ಉಡುಗೊರೆಯಾಗಿ ನೀಡುವಿರಿ. ಆಸ್ತಿ ಮಾರಾಟ ಅಥವಾ ಖರೀದಿ ಮಾಡುವವರಿಗೆ ಶುಭ ದಿನವಾಗಿದೆ. ಇಂದು ಹಠಾತ್ತಾಗಿ ದುಃಖದ ಸುದ್ದಿ ಕೇಳಿ ಪ್ರಯಾಣಿಸಬೇಕಾದಬಹುದು. ಸಂಗಾತಿಯೊಂದಿಗೆ ಹೊಸ ಕೆಲಸ ಪ್ರಾರಂಭಿಸಿ. ಶಿಕ್ಷಕರ ಕುಟುಂಬಕ್ಕೆ ಸಂತಸದ ಸುದ್ದಿ ಬರಲಿದೆ.

Leave a Reply

Your email address will not be published. Required fields are marked *