ಮುಡಾ ಅಧಿಕಾರಿಗಳಿಂದ ಅಕ್ರಮ ನಿವೇಶನ ತೆರವು

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಗೋಕುಲಂ ೨ನೇ ಬಡಾವಣೆಯ ನಿ. ಸಂಖ್ಯೆ 41ರಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಕಟ್ಟಡವನ್ನು, ಪ್ರಾಧಿಕಾರದ ಆಯುಕ್ತರಾದ ಡಾ. ಡಿ.ಬಿ. ನಟೇಶ್ ರವರ ನಿರ್ದೇಶನದಂತೆ

ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯ ಸಿಬ್ಬಂದಿಗಳ ನೆರವಿನೊಂದಿಗೆ ಇಂದು ನೆಲಸಮಗೊಳಿಸಿ ಪ್ರಾಧಿಕಾರದ ವಶಕ್ಕೆ ಪಡೆಯಲಾಯಿತು. ಸದರಿ ಕಟ್ಟಡದ ಅಂದಾಜು ಮೌಲ್ಯ ರೂ.41.೦೦ ಲಕ್ಷಗಳಾಗಿರುತ್ತದೆ. ಈ ಸಂದರ್ಭದಲ್ಲಿ ವಲಯ ಅಧಿಕಾರಿ ಶ್ರೀ.ರವೀಂದ್ರ ಕುಮಾರ್ ಹಾಗೂ ಸಂಬಂಧಪಟ್ಟ ಅಭಿಯಂತರರು ಸ್ಥಳದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *